ದಲಿತ ಮಹಿಳಾ ಕಾವ್ಯದಲ್ಲಿ ಜಾತಿ ಸಂಘರ್ಷದ ನೆಲೆಗಳು

Main Article Content

ಕುಮಾರ ಇಂದ್ರಬೆಟ್ಟ

Abstract

ಭಾರತೀಯ ಸಮಾಜವನ್ನು ಶತಮಾನಗಳಿಂದ ಕಾಡುತ್ತಿರುವ ಜಾತೀಯತೆ ಮತ್ತು ಶ್ರೇಣೀಕೃತ ವ್ಯವಸ್ಥೆಯು ದಲಿತರ ಮತ್ತು ನಿರ್ಗತಿಕರ ಬದುಕನ್ನು ದುರಂತದತ್ತ ತಳ್ಳಿದೆ. ವಚನಕಾರರು ಮತ್ತು ದಾಸರಂತೆಯೇ, ಸಮಕಾಲೀನ ದಲಿತ ಮಹಿಳಾ ಕವಯಿತ್ರಿಯರು ಕಾವ್ಯದ ಮುಖಾಂತರ ಜಾತಿ ವ್ಯವಸ್ಥೆಯ ಕ್ರೂರತ್ವವನ್ನು ಪ್ರಶ್ನಿಸಿದ್ದಾರೆ. ಜಯದೇವಿ ಗಾಯಕವಾಡ, ಅನುಸೂಯ ಕಾಂಬಳೆ, ಸುಜಾತ ಚಲವಾದಿ, ಎನ್. ಡಿ. ವೆಂಕಟಮ್ಮ ಮತ್ತು ಮಲ್ಲಮ್ಮ ಯಾಟಗಲ್ ಅವರಂತಹ ಕವಯಿತ್ರಿಯರು ದಲಿತರ ಮೇಲಿನ ಹಿಂಸೆ, ಕಂಬಾಲಪಲ್ಲಿಯಂತಹ ಹತ್ಯಾಕಾಂಡಗಳು, ನಗರ ಪ್ರದೇಶದ ಸ್ಲಂಗಳಲ್ಲಿನ ಅಸ್ಪೃಶ್ಯತೆ ಹಾಗೂ ಶವಗಳ ಮೇಲೂ ನಡೆಯುವ ತಾರತಮ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಶಿಕ್ಷಣ, ಸಂಘಟನೆ ಮತ್ತು ಅಂಬೇಡ್ಕರ್ ವಿಚಾರಧಾರೆಗಳ ಮೂಲಕ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ಭರವಸೆಯನ್ನು ಕಾವ್ಯಗಳು ಮೂಡಿಸುತ್ತವೆ.

Article Details

Section

Research Articles

Author Biography

ಕುಮಾರ ಇಂದ್ರಬೆಟ್ಟ

ಕನ್ನಡ ಸಹಾಯಕ ಪ್ರಧ್ಯಾಪಕರು, ಬಿ. ಎಂ. ಎಸ್. ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ವಿ.ವಿ. ಪುರಂ, ಬೆಂಗಳೂರು.

References

ರಾಮಲಿಂಗಪ್ಪ ಟಿ. ಬೇಗೂರು-ನುಡಿಯಾಟ, ಸಪ್ನ ಬುಕ್ ಹೌಸ್, 2017.

ರಾಮಲಿಂಗಪ್ಪ ಟಿ. ಬೇಗೂರು-ಮಹಿಳೆ: ಚರಿತ್ರೆ ಮತ್ತು ಪುರಾಣ, ಅಂಕಿತ ಪುಸ್ತಕ, ಬೆಂಗಳೂರು, 2014.

ವೀರಣ್ಣ ಸಿ.-ಕನ್ನಡ ಕಾವ್ಯ ಕಂಡ ಹೆಣ್ಣು, ಕಾವ್ಯ ಕಲಾ ಪ್ರಕಾಶನ, 1999.

ಶಿವರುದ್ರಪ್ಪ ಜಿ.ಎಸ್.-ಮಹಿಳೆ ಮತ್ತು ಕನ್ನಡ ಸಾಹಿತ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ಶ್ರೀಮತಿ ಹೆಚ್.ಎಸ್.-ಮಹಿಳಾ ಸಾಹಿತ್ಯ ಚರಿತ್ರೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ಶ್ರೀಮತಿ ಹೆಚ್.ಎಸ್.-ಸ್ತ್ರೀವಾದ ಅನ್ವಯಿಕತೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ಡಾ. ಕೆ. ಷರೀಫಾ-ಮಹಿಳೆ, ಚಳುವಳಿ ಮತ್ತು ರಾಜಕಾರಣ, ಸಿರಿವರ ಪ್ರಕಾಶನ, ಬೆಂಗಳೂರು.

ಡಾ. ಸಬೀಹ ಭೂಮಿಗೌಡ & ಡಾ. ಮಲ್ಲಿಕಾ ಘಂಟಿ (ಸಂ)-ಕನ್ನಡ ಸಾಹಿತ್ಯ ಮತ್ತು ಮಹಿಳೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, 2006.

ಸಬೀಹಾ ಭೂಮಿಗೌಡ(ಸಂ)-ಮಹಿಳಾ ಸಾಹಿತ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ಸುರೇಶ ನಾಗಲಮಡಿಕೆ - ಹಲವು ಬಣ್ಣದ ಹಗ್ಗ, ದೀಪಂಕರ ಪ್ರಕಾಶನ, 2018.

ಡಾ. ಎಫ್.ಟಿ. ಹಳ್ಳಿ ಕೇರಿ & ಡಾ. ಕೆ. ರವೀಂದ್ರನಾಥ (ಸಂ) ದಶಕದ ಕನ್ನಡ ಸಾಹಿತ್ಯ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2002.