ಅಕ್ಕಮಹಾದೇವಿಯ ವಚನಗಳಲ್ಲಿ ಆಧ್ಯಾತ್ಮ ಮತ್ತು ವೈರಾಗ್ಯ

Main Article Content

ಗೀತಾ ಎ. ಸಿ.

Abstract

೧೨ನೇ ಶತಮಾನದ ಶರಣೆ ಅಕ್ಕಮಹಾದೇವಿಯವರ ವಚನಗಳಲ್ಲಿ ಅಂತರ್ಗತವಾಗಿರುವ ಆಧ್ಯಾತ್ಮಿಕ ನಿಲುವುಗಳು ಹಾಗೂ ವೈರಾಗ್ಯದ ಸ್ವರೂಪವನ್ನು ಚರ್ಚಿಸಲಾಗಿದೆ. ಚೆನ್ನಮಲ್ಲಿಕಾರ್ಜುನನನ್ನೇ ಪತಿಯೆಂದು ಸ್ವೀಕರಿಸಿ, ಲೌಕಿಕ ಬಂಧನಗಳನ್ನು ತ್ಯಜಿಸಿ ವಿರಕ್ತಿಯ ಪಥದಲ್ಲಿ ಸಾಗಿದ ಅಕ್ಕನ ಭಕ್ತಿ ಮಾರ್ಗವನ್ನು ವಚನಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಲಾಗಿದೆ. ಬಾಹ್ಯ ಆಡಂಬರದ ಪೂಜೆಗಿಂತ ಅಂತರಂಗದ ಶುದ್ಧಿ, ಮನಸ್ಸಿನ ನಿಯಂತ್ರಣ ಹಾಗೂ ಶಿವನ ಮೇಲಿನ ಅನನ್ಯ ಪ್ರೇಮವು ಅವರ ವಚನಗಳ ಪ್ರಮುಖ ಆಶಯವಾಗಿದೆ. ಲೌಕಿಕ ಮಾಯೆಯನ್ನು ಗೆಲ್ಲುವ ಬಗೆ, ಅಜ್ಞಾನ-ಅಹಂಕಾರಗಳ ನಿರ್ಮೂಲನೆ ಮತ್ತು ಶರಣರ ಸಹವಾಸದ ಮಹತ್ವವನ್ನು ಅಕ್ಕಮಹಾದೇವಿಯವರ ಅನುಭಾವಿಕ ದೃಷ್ಟಿಕೋನದ ಮೂಲಕ ಕಟ್ಟಿಕೊಡಲಾಗಿದೆ.

Article Details

Section

Research Articles

Author Biography

ಗೀತಾ ಎ. ಸಿ.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಡಾ. ಎನ್.ಎಸ್.ಎ.ಎಂ. ಪ್ರಥಮ ದರ್ಜೆ ಕಾಲೇಜು, ಕೃಷ್ಣರಾಜಪುರ, ಬೆಂಗಳೂರು.

References

ಸಂ. ಡಾ. ಎಲ್. ಬಸವರಾಜು, ಅಕ್ಕನ ವಚನಗಳು, ಗೀತಾ ಬುಕ್ ಹೌಸ್, 1997.

ಓ. ಎಲ್. ನಾಗಭೂಷಣಸ್ವಾಮಿ, ವಚನ ವಿಚಾರ, ಅಲ್ಲಮ ಪ್ರಕಾಶನ, 2014.

ಡಾ. ಶೈಲಜಾ ಉಡಚಣ, ವಚನಕಾರ್ತಿಯರು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, 1996.

ಡಾ. ಸವಿತ ಕೊಟಬಾಗಿ, ಸಾಹಿತ್ಯ ಮಂಥನ, ಆತ್ಮಶ್ರಿ ಪ್ರಕಾಶನ, 2014.