ಚಂದ್ರಶೇಖರ ಕಂಬಾರರ ಶಿವನ ಡಂಗುರ ಕಾದಂಬರಿ: ನಗರ ಮತ್ತು ಗ್ರಾಮ ಸಂಸ್ಕೃತಿಯ ಸಂಘರ್ಷ
Main Article Content
Abstract
ಇಪ್ಪತ್ತೊಂದನೆಯ ಶತಮಾನದ ಕನ್ನಡ ಲೇಖಕರಲ್ಲಿ ಪ್ರಮುಖ ಕವಿ-ನಾಟಕಕಾರ ಚಂದ್ರಶೇಖರ ಕಂಬಾರ ಅವರ ಇತ್ತೀಚಿನ ಕಾದಂಬರಿ ‘ಶಿವನ ಡಂಗುರ’. ಕಂಬಾರರ ಬಹುತೇಕ ಕಥೆ ಮತ್ತು ನಾಟಕಗಳಲ್ಲಿ ಸಮಕಾಲೀನ ಚರಿತ್ರೆಯನ್ನು ಜನಪದ ಕಥೆಗಳ ಮೂಲಕ ಪುರಾಣದ ಮೂಲಕ ಹೇಳುತ್ತಿದ್ದರು. ಆದರೆ ಈಗ ಅವರು ಸಮಕಾಲೀನ ಜೀವನವನ್ನು ನೇರವಾಗಿ ಮುಖಾಮುಖಿಯಾಗಿಸುತ್ತಾ ಕೃತಿಗಳನ್ನು ರಚಿಸುತ್ತಿದ್ದಾರೆ. ಅಂತಹ ಒಂದು ಕೃತಿಗೆ ಒಂದು ಉತ್ತಮ ಉದಾಹರಣೆಯಾಗಿ ‘ಶಿವನ ಡಂಗುರ’ ಕಾದಂಬರಿ ಎಂದು ಹೇಳಬಹುದು. ದೇಸಿ ಪ್ರಜ್ಞೆಯನ್ನು ಮೂಲಸ್ಥಾಯಿಯಾಗಿ ಮತ್ತು ಜಾಗತಿಕ ಪ್ರಜ್ಞೆಯ ಆವರಣದೊಳಗೆ ಕಂಬಾರರು ಕಾದಂಬರಿಯನ್ನು ರಚಿಸಿದ್ದಾರೆ. ಕಂಬಾರರು ಸಂವೇದನೆ, ಆಕೃತಿಗಳೆರಡಲ್ಲೂ ಅಪ್ಪಟ ಭಾರತೀಯ ಲೇಖಕ.
ಭಾರತೀಯ ಸಮಾಜದಲ್ಲಿರುವ ಶೋಷಣೆ, ಜಾತಿ ತಾರತಮ್ಯ, ಲಿಂಗಭೇದ ಹಾಗೂ ಹಿಂಸಾ ಪ್ರವೃತ್ತಿಯು ಪ್ರಸ್ತುತ ಕಾಲಘಟ್ಟದಲ್ಲಿ ಪಡೆದುಕೊಂಡಿರುವ ಹೊಸರೂಪಗಳನ್ನು ಈ ಕಾದಂಬರಿಯು ಬಿಂಬಿಸುತ್ತದೆ. ಕೇವಲ ಲೌಕಿಕ ವಾಸ್ತವಗಳಷ್ಟೆ ಸಂಸ್ಕೃತಿಯನ್ನು ರೂಪಿಸುವುದಿಲ್ಲ, ಭಾವಜಗತ್ತು, ಲೋಕೋತ್ತರ ಸಂಗತಿಗಳು ಕೂಡ ಸಂಸ್ಕೃತಿಯ ಭಾಗವಾಗಿರುತ್ತವೆ. ಲೌಕಿಕ ವ್ಯವಸ್ಥೆಯ ಅಸಮಾನತೆಗಳ ವಿರುದ್ಧ ಮಾನವ ಚೈತನ್ಯ ಹೋರಾಟ ಮಾಡುತ್ತಲೇ ತನ್ನ ಅಂತರಂಗದ ಪೊರೆಯುವ ಶಕ್ತಿಯನ್ನು ಕಾಪಾಡಿಕೊಂಡಿದೆ. ಕನ್ನಡ ಸಂಸ್ಕೃತಿಯಲ್ಲಿ ಇಂತಹ ‘ಮಾರ್ಗ’ದ ವಿರುದ್ಧ ‘ದೇಸಿ’ ಚೈತನ್ಯ ಹೋರಾಡುತ್ತಲೇ ಬಂದಿರುವುದನ್ನು ನಾವು ಇತಿಹಾಸದ ಉದ್ದಕ್ಕೂ ಕಾಣಬಹುದು.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಚಂದ್ರಶೇಖರ ಕಂಬಾರ, (2015), ಶಿವನ ಡುಂಗರ, ಅಂಕಿತ ಪ್ರಕಾಶನ, ಬೆಂಗಳೂರು.
ಬರಗೂರು ರಾಮಚಂದ್ರಪ್ಪ (ಪ್ರ.ಸಂ), (2018), ಕನ್ನಡ ಸಾಹಿತ್ಯ ಸಂಗಾತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.