ತೇಜಸ್ವಿ: ಪ್ರೀತಿ, ಜಾತಿ ಇತ್ಯಾದಿ
Main Article Content
Abstract
ತೇಜಸ್ವಿಯವರ ಸಾಹಿತ್ಯ ಕುರಿತು ಒಂದು ನಿಟ್ಟಿನಿಂದ ತಮಾಷೆಯಾಗಿ ಅದರಲ್ಲಿ ಬರುವ ಬೈಗುಳಗಳನ್ನು ಸೀಮಿತ ದೃಷ್ಟಿಕೋನದಿಂದ ನೋಡುವ ಒಂದು ನೋಟ. ಅದರಂತೆ ಅದನ್ನು ತಪ್ಪಾಗಿ ಅರ್ಥೈಸಿಕೊಂಡು ತೇಜಸ್ವಿ ಎಂಬ ಜಾತ್ಯಾತೀತವಾದಿ ನಿಲುವಿನ ವ್ಯಕ್ತಿತ್ವವನ್ನೇ ಜಾತಿವಾದಿ ವ್ಯಕ್ತಿಯಾಗಿ ಒಂದೇ ದೃಷ್ಟಿಕೋನದಿಂದ ಏಕಮುಖಿ ಗ್ರಹಿಕೆಯಲ್ಲಿ ಕಂಡುಕೊಂಡಿರುವುದಕ್ಕೆ ಒಂದು ಪ್ರತಿಕ್ರಿಯಾತ್ಮಕ ವಿವೇಚನೆಯಾಗಿ ಈ ಲೇಖನ ನಿರೂಪಿತವಾಗಿದೆ.
ಉದಾಹರಣೆಗೆ ತೇಜಸ್ವಿಯವರ ಪರಿಸರದ ಕತೆ ಪುಸ್ತಕದಲ್ಲಿನ ಪಾತ್ರ ಕರಿಯಪ್ಪ ಮೇಲು ಜಾತಿಯ ಒಕ್ಕಲಿಗರ ಗೌಡ ಸಮುದಾಯದವನಾದುದರಿಂದ ಕೆಳವರ್ಗವೊಂದರ ಸಮುದಾಯದ ಪಾತ್ರವಾದ ಎಂಗ್ಟನನ್ನು ಬೈಗುಳದಲ್ಲಿ ಕೆಟ್ಟಪದಗಳನ್ನು ಬಳಸಿ ನಿಂದಿಸಿದ್ದಾನೆ; ಇದರಲ್ಲಿ ಹುಟ್ಟಿನ ಜಾತಿಯಿಂದ ಕರಿಯಪ್ಪನನ್ನೇ ಪ್ರತಿನಿಧಿಸುವ ತೇಜಸ್ವಿಯವರ ಒಕ್ಕಲಿಗ ಗೌಡ ಜಾತಿಯ ಅಹಂಮಿಕೆಯೂ ಈ ಹಿನ್ನೆಲೆಯಲ್ಲಿ ಕೆಲಸಮಾಡಿದೆ ಎಂಬ ಭಾವದಲ್ಲಿ ಸಿ. ಜಿ. ಲಕ್ಷ್ಮೀಪತಿ ಅವರು ಇತ್ತೀಚೆಗೆ ಪತ್ರಿಕೆವೊಂದರಲ್ಲಿ ಲೇಖನ ಬರೆದು ಜಾತ್ಯತೀತ ಧೋರಣೆಯ ತೇಜಸ್ವಿಯವರನ್ನು ಇದೇ ಪ್ರಥಮ ಬಾರಿಗೆ ಜಾತಿವಾದಿ ಎಂಬಂತೆ ಬರೆದಿದ್ದಾರೆ. ಹೀಗೆ ಮಾಸ್ತಿ ಮತ್ತು ಬೈರ ಎಂಬ ಪಾತ್ರಗಳನ್ನೂ ಜಾತಿ ಹಿನ್ನೆಲೆಯೊಳಗೆ ತೇಜಸ್ವಿ ಚಿತ್ರಿಸಿದ್ದಾರೆ ಎಂದು ಚಿಂತನೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ನಾನು “ಪ್ರೀತಿವಾದಿ ತೇಜಸ್ವಿ ಯಾವತ್ತೂ ಜಾತಿವಾದಿ ಆಗಿರಲಿಲ್ಲ!” ಎಂದು ಇಲ್ಲಿ ಕೆಲವು ನಿದರ್ಶನಗಳ ಮೂಲಕ ಈ ಲೇಖನದಲ್ಲಿ ವಿವರಿಸಿದ್ದೇನೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಪೂರ್ಣಚಂದ್ರ ತೇಜಸ್ವಿ ಕೆ. ಪಿ. (1991). ಪರಿಸರದ ಕಥೆ. ಪುಸ್ತಕ ಪ್ರಕಾಶನ. ಮೈಸೂರು.
ಪೂರ್ಣಚಂದ್ರ ತೇಜಸ್ವಿ ಕೆ. ಪಿ. (1985). ಚಿದಂಬರ ರಹಸ್ಯ. ಪುಸ್ತಕ ಪ್ರಕಾಶನ. ಮೈಸೂರು.
ಪೂರ್ಣಚಂದ್ರ ತೇಜಸ್ವಿ ಕೆ. ಪಿ. (1980). ಕರ್ವಾಲೊ. ಪುಸ್ತಕ ಪ್ರಕಾಶನ. ಮೈಸೂರು.
ಪೂರ್ಣಚಂದ್ರ ತೇಜಸ್ವಿ ಕೆ. ಪಿ. (1991). ಕಿರಗೂರಿನ ಗಯ್ಯಾಳಿಗಳು. ಪುಸ್ತಕ ಪ್ರಕಾಶನ. ಮೈಸೂರು.
ಪೂರ್ಣಚಂದ್ರ ತೇಜಸ್ವಿ ಕೆ. ಪಿ. (2009). ವಿಮರ್ಶೆಯ ವಿಮರ್ಶೆ. ಪುಸ್ತಕ ಪ್ರಕಾಶನ. ಮೈಸೂರು.
ಪೂರ್ಣಚಂದ್ರ ತೇಜಸ್ವಿ ಕೆ. ಪಿ. (2012). ಹೊಸ ವಿಚಾರಗಳು. ಪುಸ್ತಕ ಪ್ರಕಾಶನ. ಮೈಸೂರು.
ಪೂರ್ಣಚಂದ್ರ ತೇಜಸ್ವಿ ಕೆ. ಪಿ. (1964). ವ್ಯಕ್ತಿ ವಿಶಿಷ್ಟ ಸಿದ್ಧಾಂತ. ಪುಸ್ತಕ ಪ್ರಕಾಶನ. ಮೈಸೂರು.
ಪೂರ್ಣಚಂದ್ರ ತೇಜಸ್ವಿ ಕೆ. ಪಿ. (1973). ಅಬಚೂರಿನ ಪೋಸ್ಟಾಫೀಸು. ಪುಸ್ತಕ ಪ್ರಕಾಶನ. ಮೈಸೂರು.
ಬೈರೇಗೌಡ ಎಂ. (ಸಂ.). ವೀರಪ್ಪ ಜಿ. ಟಿ. (2004). ತೇಜಸ್ವಿ-ಸಾಹಿತ್ಯ ಕೃಷಿ. ಕರ್ನಾಟಕ ಸಾಹಿತ್ಯ ಅಕಾಡೆಮಿ. ಬೆಂಗಳೂರು.
ಸಿದ್ದಲಿಂಗಯ್ಯ. (2014). ಊರುಕೇರಿ–೧. ಅಂಕಿತ ಪ್ರಕಾಶನ. ಬೆಂಗಳೂರು.
ಮೋಟಮ್ಮ. ವೀರಣ್ಣ ಕಮ್ಮಾರ (ನಿರೂಪಣೆ). (2022). ಬಿದಿರು ನೀನ್ಯಾರಿಗಲ್ಲದವಳು: ಪ್ರಸಿದ್ಧ ರಾಜಕಾರಣಿ ಶ್ರೀಮತಿ ಮೋಟಮ್ಮ ಅವರ ಆತ್ಮಕಥನ. ವಿಕಾಸ ಪ್ರಕಾಶನ. ಬೆಂಗಳೂರು.
ಲಕ್ಷ್ಮಿಪತಿ ಸಿ. ಜಿ. (ಆಗಸ್ಟ್ 2024). ತೇಜಸ್ವಿ ಪರಿಸರದ ಕತೆಗಳಲ್ಲಿ ಜಾತಿ ವಸಾಹತುಶಾಹಿ. ಜನಪರ ಮಾತುಕತೆ ಪತ್ರಿಕೆ. ಬೆಂಗಳೂರು.