ವಚನ ಸಾಹಿತ್ಯದಲ್ಲಿ ಜೀವನಕೌಶಲ್ಯದ ಆಯಾಮಗಳು

Main Article Content

ಸತ್ಯಮಂಗಲ ಮಹಾದೇವ

Abstract

ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಜೀವನ ಕೌಶಲ್ಯಗಳನ್ನು ಬದುಕಿನ ಮೌಲ್ಯಗಳಾಗಿ ಅಳವಡಿಸಿಕೊಂಡು ‘ಅರಿತೆಡೆ ಶರಣ ಮರೆತೆಡೆ ಮಾನವ’ ಎಂಬ ಮಾತನ್ನು ಸಾಕ್ಷೀಕರಿಸುವಂತೆ ಬದುಕಿದವರು ಶಿವಶರಣರು. ವಚನ ರೂಪದಲ್ಲಿ ಬರೆದ ಅವರ ಅನುಭವದ ನುಡಿಗಳು, ಅವುಗಳಲ್ಲಿ ಅಡಗಿರುವ ಜೀವ ಕೌಶಲ್ಯಗಳನ್ನು, ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ 10 ಮುಖ್ಯವಾದ ಜೀವನ ಕೌಶಲ್ಯಗಳನ್ನು ತೌಲನಿಕವಾಗಿ ಅಧ್ಯಯನ ನಡೆಸಿ, ಜೀವನ ಕೌಶಲ್ಯಗಳನ್ನು ಒಳಗೊಂಡಿರುವ ವಚನಗಳನ್ನು ವಿಶ್ಲೇಷಿಸಲಾಗಿದೆ. ವಚನಗಳ ಅರ್ಥ, ವ್ಯಾಪ್ತಿ ಮತ್ತು ದೃಷ್ಟಿಕೋನ ವಿಶಾಲವಾದದ್ದು ಮನೋವೈಜ್ಞಾನಿಕವಾಗಿ ಅಧ್ಯಯನ ನಡೆಸಿದಾಗ ಅದು ಸಮುದ್ರದ ಅಲೆಗಳಂತೆ ಭಿನ್ನವೂ ಮತ್ತು ವೈವಿದ್ಯಪೂರ್ಣವೂ ಆದ ಅರ್ಥವಿವೇಚನೆಯ ಸಾಧ್ಯತೆಗಳನ್ನು ಓದುಗರಿಗೆ ತೆರೆದಿಡುವುದರ ಜೊತೆಗೆ ಇಂದಿನ ಒತ್ತಡಯುಕ್ತ ಬದುಕಿನಲ್ಲಿ ಕೌಶಲ್ಯಗಳನ್ನು ಅಳವಡಿಸಿಕೊಂಡು ಜೀವನವನ್ನು ನಿರ್ವಹಿಸಲು ಸಹಕಾರಿಯಾಗಿವೆ. 

Article Details

Section

Research Articles

Author Biography

ಸತ್ಯಮಂಗಲ ಮಹಾದೇವ

ಮುಖ್ಯಸ್ಥರು, ಕನ್ನಡ ವಿಭಾಗ, ಶೇಷಾದ್ರಿಪುರಂ ಸಂಜೆ ಕಾಲೇಜು, ಬೆಂಗಳೂರು.

References

ತಿಪ್ಪೇರುದ್ರಸ್ವಾಮಿ ಎಚ್. (2016). ಬಸವೇಶ್ವರ ವಚನ ದೀಪಿಕೆ. ಶ್ರೀ ಜಗದ್ಗುರು ಶಿವರಾತ್ರೀಶ್ವರ ಗ್ರಂಥಮಾಲೆ. ಮೈಸೂರು.

ನಾಗರಾಜ ಕಿ. ರಂ. (ಸಂ). (2022). ವಚನ ಕಮ್ಮಟ. ಸಪ್ನ ಬುಕ್‌ಹೌಸ್. ಬೆಂಗಳೂರು.

ಮಹಾದೇವಯ್ಯ ಟಿ. ಆರ್. (ಸಂ). (1998). ಶರಣತತ್ವ ಚಿಂತನ. ಅಖಿಲಭಾರತ ಶರಣ ಸಾಹಿತ್ಯ ಪರಿಷತ್ತು. ಮೈಸೂರು.

ಬಸವರಾಜು ಎಲ್. (ಸಂ). (2019). ಬಸವ ವಚನಾಮೃತ. ಬಸವ ಸಮಿತಿ. ಬೆಂಗಳೂರು.

ರುದ್ರಮೂರ್ತಿ ಶಾಸ್ತ್ರಿ ಸು. (2018). ವಚನಕಾರರು, ವಚನಗಳು ಹಾಗೂ ಅವುಗಳ ವಿವರಣೆ. ವಸಂತ ಪ್ರಕಾಶನ. ಬೆಂಗಳೂರು.

ವೀರಣ್ಣ ದಂಡೆ. (2022). ಕಲ್ಯಾಣದ ಶರಣರು. ನೀಲಗಂಗಾ ಪ್ರಕಾಶನ. ಗದಗ.

ಬಸವಣ್ಣ ಎಂ. (2015). ಈಡಿಪಸ್ ಕಾಂಪ್ಲೆಕ್ಸ್. ಅಭಿನವ ಪ್ರಕಾಶನ. ಬೆಂಗಳೂರು.