ಕರ್ನಾಟಕ ಜಾನಪದ ಸಂಸ್ಕೃತಿ: ಅವಲೋಕನ
Main Article Content
Abstract
ಕರ್ನಾಟಕದ ಜಾನಪದ ಅಧ್ಯಯನದ ಐತಿಹಾಸಿಕ ಹೆಜ್ಜೆಗುರುತುಗಳು ಮತ್ತು ಅದರ ವಿಕಾಸವನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ೧೯ನೇ ಶತಮಾನದಲ್ಲಿ ಪಾಶ್ಚಾತ್ಯ ವಿದ್ವಾಂಸರಾದ ಅಬ್ಬೆ ಡುಬಾಯ್, ಕಿಟೆಲ್, ಫ್ಲೀಟ್ ಮುಂತಾದವರಿಂದ ಆರಂಭವಾದ ಜಾನಪದ ಸಂಗ್ರಹ ಕಾರ್ಯವು, ತದನಂತರ ಮಾಸ್ತಿ, ಬಿ.ಎಂ.ಶ್ರೀ, ಬೇಂದ್ರೆ ಮತ್ತು ಹಲಸಂಗಿ ಗೆಳೆಯರ ಮೂಲಕ ದೇಶೀಯ ರೂಪ ಪಡೆದುಕೊಂಡಿತು. 'ಗರತಿಯ ಹಾಡು', 'ಹುಟ್ಟಿದ ಹಳ್ಳಿ ಹಳ್ಳಿಯ ಹಾಡು', 'ನಾಡಪದಗಳು' ಮೊದಲಾದ ಪ್ರಾತಿನಿಧಿಕ ಕೃತಿಗಳು ಕನ್ನಡ ಜಾನಪದ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದವು. ೧೯೯೦ರ ದಶಕದ ನಂತರ ಜಾನಪದ ಅಧ್ಯಯನವು ಕೇವಲ ಸಂಗ್ರಹಣೆಯಾಗಿ ಉಳಿಯದೆ, ದಲಿತ, ಬಂಡಾಯ, ಸ್ತ್ರೀವಾದಿ ಮತ್ತು ಅಂತರ್ಶಾಸ್ತ್ರೀಯ ನೆಲೆಗಳಲ್ಲಿ ವಿಸ್ತಾರಗೊಂಡ ಬಗೆಯನ್ನು ಇಲ್ಲಿ ದಾಖಲಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಜಾನಪದ ಅಧ್ಯಯನದ ಸಂಕ್ಷಿಪ್ತ ಇತಿಹಾಸ - ಡಾ.ನಂ.ತಪಸ್ವೀಕುಮಾರ್
ಕರ್ನಾಟಕ ಸಂಶೋಧನಾ ಜಾನಪದ ಸಂ.ಪ್ರೊ.ಅಂಬಳಿಕೆ ಹಿರಿಯಣ್ಣ
ದಕ್ಷಿಣ ಕರ್ನಾಟಕದ ಜಾನಪದ ಕಾವ್ಯ ಪ್ರಕಾರಗಳು - ಡಾ.ಜೀ.ಶಂ.ಪರಮಶಿವಯ್ಯ
ಜಾನಪದ ಅಧ್ಯಯನ ಡಾ.ದೇ.ಜ.ಗೌ
ಹೊನ್ನ ಬಿತ್ತೇವು ಹೊಲಕ್ಕೆಲ್ಲ - ಕರ್ನಾಟಕ ಜಾನಪದ ಅಕಾಡೆಮಿ (ಸ್ಮರಣ ಸಂಚಿಕೆ)