ಡಾ. ರಂ. ಶ್ರೀ. ಮುಗಳಿರವರ ವಿಮರ್ಶಾ ಸಾಹಿತ್ಯ : ಒಂದು ನೋಟ

Main Article Content

ಎಸ್. ಎಂ. ಗೋಪಿ

Abstract

ಕನ್ನಡ ಸಾಹಿತ್ಯ ಚರಿತ್ರೆಯ ಪ್ರಮುಖ ವಿದ್ವಾಂಸರಾದ ಡಾ. ರಂ. ಶ್ರೀ. ಮುಗಳಿಯವರ ವಿಮರ್ಶಾ ಸಾಹಿತ್ಯದ ಸ್ವರೂಪ ಮತ್ತು ವೈಶಿಷ್ಟ್ಯಗಳನ್ನು ಇಲ್ಲಿ ಚರ್ಚಿಸಲಾಗಿದೆ. 'ಕನ್ನಡ ಸಾಹಿತ್ಯದಲ್ಲಿ ಸರಸ್ವತಿಯ ದರ್ಶನ' ಮತ್ತು 'ಸಾಹಿತ್ಯ ವಿಮರ್ಶೆಯ ಮಾರ್ಗದರ್ಶಕ ಸೂತ್ರಗಳು' ಮುಂತಾದ ಕೃತಿಗಳ ಮೂಲಕ ಮುಗಳಿಯವರು ಭಾರತೀಯ ಕಾವ್ಯ ಮೀಮಾಂಸೆ ಮತ್ತು ಪಾಶ್ಚಾತ್ಯ ವಿಮರ್ಶಾ ತತ್ವಗಳನ್ನು ಹೇಗೆ ಸಮನ್ವಯಗೊಳಿಸಿದ್ದಾರೆ ಎಂಬುದನ್ನು ಲೇಖಕರು ವಿಶ್ಲೇಷಿಸಿದ್ದಾರೆ. ಮಹಾಕೃತಿಯ ಪರಿಕಲ್ಪನೆ, ರಸಾನುಭವ ಮತ್ತು ವಿಮರ್ಶಕನ ಜವಾಬ್ದಾರಿಗಳ ಬಗ್ಗೆ ಮುಗಳಿಯವರ ಚಿಂತನೆಗಳು ಇಲ್ಲಿ ವ್ಯಕ್ತವಾಗಿವೆ. ನಿಷ್ಪಕ್ಷಪಾತ ಮತ್ತು ಸೌಂದರ್ಯ ಪ್ರಜ್ಞೆಯುಳ್ಳ ವಿಮರ್ಶೆಯ ಅಗತ್ಯವನ್ನು ಈ ಬರಹವು ಎತ್ತಿ ತೋರಿಸುತ್ತದೆ. ಮುಗಳಿಯವರ ವಿಮರ್ಶೆಯು ಸಹೃದಯತೆ ಮತ್ತು ಪಾಂಡಿತ್ಯದ ಸಂಗಮವಾಗಿದೆ.

Article Details

Section

Research Articles

Author Biography

ಎಸ್. ಎಂ. ಗೋಪಿ

ಕನ್ನಡ ಸಹಾಯಕ ಪ್ರಾಧ್ಯಾಪಕ, ರಾಮನಗರ ಸ್ನಾತಕೋತ್ತರ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು. 

References

ಕನ್ನಡ ಸಾಹಿತ್ಯ ಚರಿತ್ರೆ ಡಾ. ರಂ.ಶ್ರೀ. ಮುಗಳಿ.

ಕನ್ನಡ ಸಾಹಿತ್ಯ ವಿಮರ್ಶೆಯ ತಾತ್ವಿಕ ವಿವೇಚನೆ ಡಾ. ರಂ.ಶ್ರೀ. ಮುಗಳಿ.

ಸಾಹಿತ್ಯ ವಿಮರ್ಶೆಯ ಮಾರ್ಗದರ್ಶಕ ಸೂತ್ರಗಳು ಡಾ. ರಂ.ಶ್ರೀ. ಮುಗಳಿ.