ಕನ್ನಡ ನಾಡು ನುಡಿಗೆ ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆಗಳು

Main Article Content

ಲಕ್ಷ್ಮಿನರಸಮ್ಮ

Abstract

ನಾಲ್ವಡಿ ಕೃಷ್ಣರಾಜ ಒಡೆಯರು ಆಧುನಿಕ ಕನ್ನಡ ನಾಡಿನ ನಿರ್ಮಾತೃ ಆಗಿದ್ದು ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರನ್ನು ಬಹಳಷ್ಟು ಅಭಿವೃದ್ಧಿ ಪಡಿಸುವ ಮೂಲಕ ಸಿಲಿಕಾನ್ ಸಿಟಿಯನ್ನಾಗಿ ಜನಪ್ರಿಯಗೊಳಿಸಿದ್ದಾರೆ. ಕನ್ನಡ ನಾಡಿನ ಮೈಸೂರು ಸಂಸ್ಥಾನದ 24ನೇಯ ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ಸಂಗೀತ ಮತ್ತು ಕುದುರೆ ಸವಾರಿಯನ್ನು ಕಲಿತಿದ್ದರು. ಇವರು 1902ರಲ್ಲಿ ಕರ್ನಾಟಕದ ಶಿವನಸಮುದ್ರದಲ್ಲಿ ಜಲ ವಿದ್ಯುತ್ ಯೋಜನೆಯನ್ನು, 1903ರಲ್ಲಿ ಮಿಂಟೋ ಕಣ್ಣಿನ ಆಸ್ಪತ್ರೆಯನ್ನು, 1905ರಲ್ಲಿ ಬೆಂಗಳೂರಿನಲ್ಲಿ ಬೀದಿ ದೀಪಗಳನ್ನು ಸ್ಥಾಪನೆ ಮಾಡುವ ಮೂಲಕ ಬೆಂಗಳೂರನ್ನು ಏಷ್ಯಾದಲ್ಲಿಯೇ ಮೊದಲ ನಗರವನ್ನಾಗಿ ಮಾಡಿ ಅಪಾರವಾದ ಕೊಡುಗೆಗಳನ್ನು ನೀಡಿದ್ದಾರೆ. ಇಷ್ಟೇ ಅಲ್ಲದೇ ನಾಲ್ವಡಿ ಕೃಷ್ಣರಾಜ ಒಡೆಯರು ಕನ್ನಡ ನುಡಿಯನ್ನು ಬೆಳೆಸಿ ಉಳಿಸಬೇಕೆಂಬ ಮಹಾದಾಸೆಯಿಂದ 1915ರಲ್ಲಿ ಮೊಟ್ಟ ಮೊದಲಿಗೆ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿ ಹಲವಾರು ಕವಿಗಳನ್ನು ಗುರುತಿಸುತ್ತಾರೆ. 1916 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು, 1917ರಲ್ಲಿ ಮೈಸೂರು ಮಹಾರಾಣಿ ಕಾಲೇಜನ್ನು, ಮೈಸೂರು ಪೇಪರ್ಸ್ ಮಿಲ್ ಅನ್ನು ಸ್ಥಾಪಿಸಿ ಬೆಳೆಸುವಲ್ಲಿ ಮುಂದಾಗುತ್ತಾರೆ. ಕನ್ನಡ ನಾಡು ನುಡಿಗಾಗಿ ಮಾಡಿದ ಸೇವೆಗಳಿಂದ ಅವರು ನವ ಕರ್ನಾಟಕದ ಪಿತಾಮಹ ಎಂಬ ಬಿರುದಿಗೆ ಭಾಜನರಾಗುತ್ತಾರೆ. ನಾಲ್ವಡಿ ಕೃಷ್ಣರಾಜ ಒಡೆಯರು ಕನ್ನಡ ನಾಡು ನುಡಿಗಾಗಿ ಸಲ್ಲಿಸಿದ ಕೊಡುಗೆಗಳನ್ನು ಕುರಿತಂತೆ ಸವಿಸ್ತಾರವಾಗಿ ವಿಶ್ಲೇಷಣೆ ಮಾಡುವುದೇ ಈ ಲೇಖನದ ಪ್ರಧಾನ ಧೋರಣೆಯಾಗಿದೆ.

Article Details

Section

Essay

Author Biography

ಲಕ್ಷ್ಮಿನರಸಮ್ಮ

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಣಿಗಲ್.

References

ಗೋಪಾಲ್ ಟಿ. ಎಸ್. (ಲೇ). ಸೋಮೇಶ್ವರ ನಾ. (ಸಂ). (2015). ಎಲ್ಲರೊಳಗೆ ಒಂದಾದ ನಾಲ್ವಡಿ ಕೃಷ್ಣರಾಜ ಒಡೆಯರ್. ನವಕರ್ನಾಟಕ ಪ್ರಕಾಶನ. ಬೆಂಗಳೂರು.

ನಂಜರಾಜ ಅರಸ್ ಪಿ. ವಿ. (2015). ಮರೆಯಲಾಗದ ಮಹಾನುಭಾವ ನಾಲ್ವಡಿ ಕೃಷ್ಣರಾಜ ಒಡೆಯರು. ಅಭಿರುಚಿ ಪ್ರಕಾಶನ. ಮೈಸೂರು.

ವೇದಾ ಎಂ. ಎಸ್. (2014). ರಾಜ ಒಡೆಯರ್. ಸಂವಹನ ಪ್ರಕಾಶನ. ಮೈಸೂರು.

ಚಿನ್ನಸ್ವಾಮಿ ಸೋಸಲೆ ಎನ್. (2018). ವಸಾಹತು ಕಾಲಘಟ್ಟದ ಮೈಸೂರು ಸಂಸ್ಥಾನ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.

ತಿರುಮಲೆ ತಾತಾಚಾರ್ಯ ಶರ್ಮ. (2006). ಮೈಸೂರು ಇತಿಹಾಸದ ಹಳೆಯ ಪುಟಗಳು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಬೆಂಗಳೂರು.