ತಿರುಕ ಅವರ ಜೀವನ ಮತ್ತು ಸಾಹಿತ್ಯ: ಒಂದು ಪಕ್ಷಿನೋಟ
Main Article Content
Abstract
ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು ಮೂಲತಃ ವ್ಯಾಯಾಮ ಶಿಕ್ಷಕರು, ಅವರು ತಿರುಕ ಎಂಬ ಕಾವ್ಯನಾಮದಿಂದ ಕನ್ನಡ ಸಾಹಿತ್ಯ ವಲಯದಲ್ಲಿ ಪ್ರಸಿದ್ಧರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮಲ್ಲಾಡಿಹಳ್ಳಿಯಲ್ಲಿ ಶಿಕ್ಷಣ, ವೈದ್ಯಕೀಯ, ವ್ಯಾಯಾಮ, ಗ್ರಂಥಾಲಯ, ವಾಚನಾಲಯ, ವಿದ್ಯಾರ್ಥಿ ನಿಲಯಗಳಿಂದ ಕೂಡಿದ ಅನಾಥ ಸೇವಾಶ್ರಮ ವಿಶ್ವಸ್ಥ ಸಮಿತಿ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಸುತ್ತಮುತ್ತಲ ಹಳ್ಳಿಗಳ ವಿದ್ಯಾರ್ಥಿಗಳಿಗೆ ವಿದ್ಯಾದೀಪಕರಾಗಿದ್ದಾರೆ. ಆಯುರ್ವೇದ, ಯೋಗ ಮತ್ತು ಸಾಹಿತ್ಯವಲಯದ ವಿದ್ವಾಂಸರನ್ನು ಮಲ್ಲಾಡಿ ಹಳ್ಳಿಗೆ ಕರೆಸಿ ವಿದ್ಯಾರ್ಥಿಳಿಗೆ ಉಪನ್ಯಾಸಗಳನ್ನು ಕೊಡಿಸುವುದಲ್ಲದೆ, ಜನರಿಗೆ ಹರಿಕಥೆ, ಕೀರ್ತನೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಸಿದ್ಧರಾಗಿರುವರು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಶಾಮರಾಯ ತ. ಸು. (ಸಂ), (1978), ನಂದನವನ (ರಾಘವೇಂದ್ರ ಅಭಿನಂದನ ಗ್ರಂಥ). ಅನಾಥ ಸೇವಾಶ್ರಮ ವಿಶ್ವಸ್ಥ ಸಮಿತಿ. ಮಲ್ಲಾಡಿಹಳ್ಳಿ.
ಕನ್ನಡ ಗ್ರಂಥಸೂಚಿ ಸಂಪಾದಕ ಮಂಡಳಿ, (1983). ಆಧುನಿಕ ಕನ್ನಡ ಬರಹಗಾರರು. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.
ಶ್ರೀನಿವಾಸರಾವ್ ಎಸ್. ವಿ. (1989). ಕನ್ನಡ ಸಾಹಿತಿ ದರ್ಶನ. ಸೌರಭ ಪ್ರಕಾಶನ. ಬೆಂಗಳೂರು.