ಕುವೆಂಪು ಮತ್ತು ಕಂಬಾರರ ನಾಟಕಗಳು ಮುಂದಿಡುವ ರಂಗಕಲ್ಪನೆ
Main Article Content
Abstract
ಕುವೆಂಪು ಮತ್ತು ಕಂಬಾರರ ಕೃತಿಗಳಲ್ಲಿ ಹೊಸತನು ಹುಡುಕುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಕುಂವೆಪು ಅವರಲ್ಲಿ ನವೋದಯ ಪ್ರಜ್ಞೆ ಕಾಣಿಸಿದ್ದರೆ, ಕಂಬಾರರಲ್ಲಿ ದಲಿತರ ಪರ ಪ್ರಜ್ಞೆ ಕಾಣಿಸಿಕೊಂಡಿದೆ. ವೀರೇಶ್ ಬಡೀಗಾರ್ರವರ 'ಕನ್ನಡ ಸಾಹಿತ್ಯ ಪರಂಪರೆ ಮತ್ತು ಕಂಬಾರರು' ಹಾಗೂ ಉತ್ಥಾನಭಾರೀಘಾಟ್ರವರ 'ಕುವೆಂಪು ನಾಟಕಗಳು ಮುಂದಿಡುವ ರಂಗಕಲ್ಪನೆ' ಎಂಬ ಪುಸ್ತಕಗಳ ಹಿನ್ನೆಲೆಯಲ್ಲಿ ಈ ಅಧ್ಯಯನವನ್ನು ರೂಪಿಸಲಾಗಿದೆ. ಕಂಬಾರರ ಸೃಜನಶೀಲ ಹಾಗೂ ಸೃಜನೇತರ ಬರಹಗಳ ಆಳವಾದ ಒಳನೋಟಗಳ ಜೊತೆಗೆ, ಕುವೆಂಪು ನಾಟಕಗಳು ಕನ್ನಡದ್ದೇ ಆದ ರಂಗಕಲ್ಪನೆಯನ್ನು ಹೇಗೆ ಸೃಜಿಸಿಕೊಳ್ಳುತ್ತವೆ ಹಾಗೂ ನಾಟಕದ ವಸ್ತುವಿಗಿಂತ ಸ್ವರೂಪದ ಚರ್ಚೆಯನ್ನು ಹೇಗೆ ಮಂಡಿಸುತ್ತವೆ ಎಂಬುದನ್ನು ವಿಶ್ಲೇಷಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ವಿರೇಶ ಬಡಿಗೇರ. (2012). ಕನ್ನಡ ಸಾಹಿತ್ಯ ಪರಂಪರೆ ಮತ್ತು ಕಂಬಾರರು. ಅಂಕಿತ ಪ್ರಕಾಶನ, ಬೆಂಗಳೂರು.
ಉತ್ಥಾನ ಭಾರೀಘಾಟ್, (2016), ಕುವೆಂಪು ನಾಟಕಗಳು ಮುಂದಿಡುವ ರಂಗಕಲ್ಪನೆ. ಕುವೆಂಪು ಭಾಷಾ ಪ್ರಾಧಿಕಾರ. ಬೆಂಗಳೂರು.
ಶಿವರುದ್ರಪ್ಪ ಜಿ. ಎಸ್. (2015). ಕುವೆಂಪು ಪುನರಾಲೋಕನ ಅಂಕಿತ ಪುಸ್ತಕ, ಬೆಂಗಳೂರು.
ಚಂದ್ರಶೇಖರ ಕಂಬಾರ. (2004). ದೇಶೀಯ ಚಿಂತನೆ. ಅಂಕಿತ ಪುಸ್ತಕ. ಬೆಂಗಳೂರು.