ಯಯಾತಿ ನಾಟಕದಲ್ಲಿ ಸಾಮಾಜಿಕ ಸಂಘರ್ಷ
Keywords:
ವಚನ ಚಳವಳಿ, ದಾಸಿ, ನೈತಿಕ ಮೌಲ್ಯಗಳು, ಮಾನವೀಯತೆ, ಆಧ್ಯಾತ್ಮ, ಪಿತೃವಿನ ಪ್ರೀತಿ, ಹೆಣ್ಣಿನ ದುಃಖAbstract
ಗಿರೀಶ್ ಕಾರ್ನಾಡರು ಬಹುಮುಖ ವ್ಯಕ್ತಿತ್ವವುಳ್ಳವರು ನಾಟಕಕಾರ ನಿರ್ದೇಶಕ ನಟ ಪ್ರಾಧ್ಯಾಪಕರಾಗಿ ಹಲವು ಕ್ಷೇತ್ರಗಳಲ್ಲಿ ದುಡಿದವರು ಪದ್ಮಶ್ರೀ, ಪದ್ಮಭೂಷಣ, ಕರ್ನಾಟಕ ನಾಟಕ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಜ್ಞಾನಪೀಠ ಪ್ರಶಸ್ತಿ ವಿಜೇತರು ನಾನಾ ಕ್ಷೇತ್ರಗಳಲ್ಲಿ ಪಾಂಡಿತ್ಯ ಪಡೆದವರು ನಾಗಮಂಡಲ, ತುಘಲಕ್, ಹಯವದನ, ಹಿಟ್ಟಿನ ಹುಂಜ, ತಲೆದಂಡ ಯಯಾತಿ ನಾಟಕಗಳನ್ನು ರಚಿಸಿದ್ದಾರೆ. ಕನ್ನಡಕ್ಕೆ ವಿಶ್ವ ಮಾನ್ಯತೆಯನ್ನು ತಂದುಕೊಟ್ಟವರು.
ಯಯಾತಿ ಪೌರಾಣಿಕ ವ್ಯಕ್ತಿ, ಪಾಂಡವರ ಪೂರ್ವಜರಲ್ಲಿ ಒಬ್ಬ ನಹುಷನ ಮಗ ಅವನಿಗೆ ಇಬ್ಬರು ಹೆಂಡತಿಯರು, ಶರ್ಮಿಷ್ಠೆ ಮತ್ತು ದೇವಯಾನಿ ಶರ್ಮಿಷ್ಠೆ ರಾಕ್ಷಸರಾಜನ ಮಗಳು, ದೇವಯಾನಿ ಅಸುರರ ಗುರು ಶುಕ್ರಾಚಾರ್ಯರ ಮಗಳು ಪುರಾಣಗಳಲ್ಲಿ ಬರುವ ಯಯಾತಿ ಬದುಕನ್ನು ಆಯ್ಕೆ ಮಾಡಿಕೊಂಡು ದೇವಯಾನಿ ಮದುವೆಯ ನಂತರದ ಕಥೆಯ ಆಧಾರದ ಮೇಲೆ ನಾಟಕವನ್ನು ರಚಿಸಿದ್ದಾರೆ. ಮೂಲ ಯಯಾತಿ ಕತೆಯಲ್ಲಿ ಇಲ್ಲದಿರುವ ಚಿತ್ರಲೇಖೆ ಎಂಬ ಪುರುವಿನ ಹೆಂಡತಿ ಪಾತ್ರವನ್ನು ಸೃಷ್ಟಿಸಿ ಹೊಸ ದೃಷ್ಟಿಕೋನದಿಂದ ಯಯಾತಿ ನಾಟಕ ರಚಿಸಿದ್ದಾರೆ. ಸ್ವರ್ಣಲತೆ ಎಂಬ ದಾಸಿ ಪಾತ್ರವನ್ನು ಹೊಸದಾಗಿ ಹುಟ್ಟು ಹಾಕಿದ್ದಾರೆ. ಇಲ್ಲಿ ಪುರು ಆಧುನಿಕ ಯುವಜನಾಂಗದ ಪ್ರತಿನಿಧಿಯಂತೆ ಕಂಡುಬರುತ್ತಾರೆ. ಯಯಾತಿ, ಪುರು, ದೇವಿಯಾನಿ, ಶರ್ಮಿಷ್ಠೆ, ಸ್ವರ್ಣಲತೆ, ಚಿತ್ರಲೇಖೆ ಪಾತ್ರಗಳಲ್ಲದೆ ಕಚ, ಶುಕ್ರಾಚಾರ್ಯ, ಪುರುವಿನ ತಾಯಿ ಪಾತ್ರಗಳ ಪ್ರಸ್ತಾಪವಿದೆ.
References
ಅರವಿಂದ ಮಾಲಗತ್ತಿ (ಸಂ), (1999), ದಲಿತಯುಗ ಮತ್ತು ಕನ್ನಡ ಸಾಹಿತ್ಯ, ಚೇತನ ಬುಕ್ಹೌಸ್, ಮ್ಯೆಸೂರು.
ಗಿರೀಶ್ ಕಾರ್ನಾಡ, (2000), ಟಿಪ್ಪೂಸುಲ್ತಾನ್ ಕಂಡ ಕನಸು, ಮನೋಹರ ಗ್ರಂಥಮಾಲಾ, ಧಾರವಾಡ.
ಗಿರೀಶ್ ಕಾರ್ನಾಡ, (2000), ತುಘಲಕ್, ಮನೋಹರ ಗ್ರಂಥಮಾಲಾ, ಧಾರವಾಡ.
ಗಿರೀಶ್ ಕಾರ್ನಾಡ, (2000), ತಲೆದಂಡ, ಮನೋಹರ ಗ್ರಂಥಮಾಲಾ, ಧಾರವಾಡ.
ಗಿರೀಶ್ ಕಾರ್ನಾಡ, (1971), ಹಯವದನ, ಮನೋಹರ ಗ್ರಂಥಮಾಲಾ, ಧಾರವಾಡ.
ಗಿರೀಶ್ ಕಾರ್ನಾಡ, (1989), ನಾಗಮಂಡಲ, ಮನೋಹರ ಗ್ರಂಥಮಾಲಾ, ಧಾರವಾಡ.
ಗಿರೀಶ್ ಕಾರ್ನಾಡ, (1994), ಅಗ್ನಿ ಮತ್ತು ಮಳೆ, ಮನೋಹರ ಗ್ರಂಥಮಾಲಾ, ಧಾರವಾಡ.
ಲಂಕೇಶ ಪಿ. , (1985), ಸಂಕ್ರಾಂತಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು.
Downloads
Published
How to Cite
Issue
Section
License
Copyright (c) 2025 ಅಕ್ಷರಸೂರ್ಯ (AKSHARASURYA)

This work is licensed under a Creative Commons Attribution 4.0 International License.