ನಿರಂಜನರ ಬರವಣಿಗೆಯಲ್ಲಿ ಮಾರ್ಕ್ಸ್‌ವಾದ

Authors

  • ರಮೇಶ್ ಸಹಾಯಕ ಪ್ರಾದ್ಯಾಪಕರು, ಕನ್ನಡ ವಿಭಾಗ ವಿಶ್ವೇಶ್ವರಪುರ ಕಲೆ ಮತ್ತು ವಾಣಿಜ್ಯ ಕಾಲೇಜು, ಕೆ.ಆರ್. ರಸ್ತೆ, ಬೆಂಗಳೂರು.

Keywords:

ಸಮತಾವಾದ, ಶಿವರಾಯ ಮೌಲ್ಯಗಳು, ನಿರಂಜನರ ಬಾಲ್ಯ, ಮಾರ್ಕ್ಸ್‌ವಾದ, ಜಮೀನ್ದಾರ, ಪ್ರಗತಿಪರ ಚಳವಳಿ

Abstract

ನಿರಂಜನರು ಸಾಹಿತ್ಯವಲಯದಲ್ಲಿ ಉಂಟುಮಾಡಿದ ಸಾಮಾಜಿಕ ಹೋರಾಟ ಬಹಳ ಮುಖ್ಯವಾದುದು. ಸಾಹಿತ್ಯ ಮತ್ತು ಬದುಕನ್ನು ಏಕ ರೀತಿಯಲ್ಲಿ ಕಂಡುಕೊಂಡವರು. ಸಾಮಾಜಿಕ ಬದ್ಧತೆಯನ್ನು ಕೊನೆಯವರೆಗೂ ಉಳಿಸಿಕೊಂಡವರು. ಬಾಲ್ಯದಲ್ಲಿ ಗಾಂಧಿವಾದಕ್ಕೆ ಮನಸೋತು, ಅನಂತರ ಸಮಾಜವಾದದತ್ತ ಒಲವು ಬೆಳಸಿಕೊಂಡರು. ಹರೆಯದಲ್ಲಿ ಸಮತಾವಾದದ ಸಿದ್ದಾಂತಗಳಿಂದ ಪ್ರಭಾವಿತರಾಗಿ ಮಾರ್ಕ್ಸ್‌ವಾದಿಯಾಗಿ ಕಮ್ಯೂನಿಸ್ಟ್ ಪಕ್ಷದ ಸಕ್ರಿಯ ಸದಸ್ಯರಾಗಿ ದುಡಿದವರು ನಿರಂಜನರು. ʼಸ್ವಾತಂತ್ರ್ಯ ಚಳವಳಿ, ಏಕೀಕರಣ ಚಳವಳಿ, ಹಿಂದೂ ಸಾಂಸ್ಕೃತಿಕ ಪುನರುಜ್ಜೀವನ ಚಳವಳಿಗಳು ಸೊಕ್ಕೇರಿ ಒಟ್ಟಿಗೆ ಕ್ರಿಯಾನಿರತವಾಗಿದ್ದಾಗ, ಮಾರ್ಕ್ಸ್‌ವಾದದಿಂದ ಆಕರ್ಷಿತವಾಗಿ, ಅಖಿಲಭಾರತ ಚಳವಳಿಯ ಒಂದು ಭಾಗವಾಗಿ ಕನ್ನಡ ಪ್ರಗತಿಶೀಲ ಚಳವಳಿಯು ಹುಟ್ಟಿಕೊಂಡಿತು.

ಶಿವರಾಯರು ಬೆಳೆಬೆಳೆಯುತ್ತಾ ಗಾಂಧೀ ಪ್ರಭಾವ ಹೆಚ್ಚಾಗ ತೊಡಗಿತ್ತು ಸಾಮ್ರಾಜ್ಯಶಾಹಿಯನ್ನು ಖಂಡಿಸುತ್ತಿದ್ದು ಹರಿಜನ ಕೇರಿಗಳಲ್ಲಿ ನೈಮರ್ಲ್ಯದ ಕೆಲಸವನ್ನು ಕೈಗೊಂಡದ್ದು ಎಲ್ಲೆಡೆ ಧೈರ್ಯದಿಂದ ಬಂಡವಾಳಶಾಹಿ ವಿರುದ್ಥ ಕಿಡಿಕಾರುತ್ತ ಮುನ್ನೆಡೆಯುತ್ತಿದ್ದು ನೀಲೇಶ್ವರ ಮೊದಲ ಬಾರಿಗೆ ಕೇಳಿದ ʼಇಂಕ್ವಿಲಾಬ್ ಜಿಂದಾಬಾದ್’ ಕಾರ್ಮಿಕ ವಿದ್ಯಾರ್ಥಿಗಳನ್ನು ಸಂಘಟಿಸುವ ರೀತಿ ಹೊಸದಾಗಿ ಕಂಡದ್ದು ಗಾಂಧೀವಾದದ ಬಗೆಗಿನ ಮೋಹಕ ಕೊನೆಗೊಂಡು ಬ್ರಿಟಿಷರಿಂದ ಮುಕ್ತಿ ಹೊಂದಿದ ಭಾರತ ದೇಶದಲ್ಲಿ ಹೊಸ ವ್ಯವಸ್ಥೆಯ ನಿರ್ಮಾಣಕ್ಕೆ ಹಾತೊರೆದು ಮಾರ್ಕ್ಸ್‌ವಾದವನ್ನು ಅವಲಂಭಿಸಿದರು. ಮಾರ್ಕ್ಸ್‌ವಾದ ಎಂದರೆ ಮಾನವೀಯತೆ ಶೋಷಣೆ ವಿರುದ್ಧ ಬಂಡೆದ್ದ ನ್ಯಾಯವಾದ ಒಂದು ಪಥ ದುಡಿಯುವ ಕೆಲಸಕ್ಕೆ ಸೂಕ್ತವಾದ ಕೂಲಿ ಕೇಳುವ ಹಕ್ಕು, ಬಸವಣನ ಸಮಾನತಾ ಧರ್ಮ ಸಕಲ ಜೀವಿಗಳಿಗೆ ಲೇಸನೇ ಬಯಸುವ ಮನುಷ್ಯತ್ವ ಎಲ್ಲವನ್ನು ಮಾರ್ಕ್ಸ್‌ವಾದ ಒಳಗೊಂಡಿದೆ. ನಮ್ಮ ಸುತ್ತ ಪ್ರಪಂಚವನ್ನು ಜಾಗೃಕತೆಯಿಂದ ಪರಿಶೀಲಿಸಿದರೆ ಅದರಲ್ಲಿ ಅಡಕವಾಗಿರುವ ಎಲ್ಲಾ ವಸ್ತುಗಳು ಅದರಲ್ಲಿ ಸಂಭವಿಸುವ ಎಲ್ಲ ಇಂದ್ರೀಯ ಗೋಚರ ಘಟನೆಗಳೂ ಭೌತಿಕವಾದವು ಅಥವಾ ಮಾನಸಿಕವಾದವು ಎಂದು ತಿಳಿದುಬರುತ್ತದೆ. ಮಾರ್ಕ್ಸ್‌ವಾದವು ಅರಿವಿನ ವಿಧಾನವನ್ನು ಪ್ರಭಾವಿಸುವ ನಿಯಮವನ್ನು ಸಹ ಪರಿಶೀಲಿಸುತ್ತದೆ. ಸಾಮಾಜಿಕ ಜೀವನದಲ್ಲಿ ಪ್ರಗತಿಪರ ಮತ್ತು ಪ್ರತಿಗಾಮಿ ಶಕ್ತಿಗಳ ಒಂದನ್ನೊಂದು ಸಂಘರ್ಷಿಸುತ್ತಲೇ ಇರುತ್ತವೆ. ಮಾರ್ಕ್ಸ್‌ವಾದ ಎಲ್ಲ ರೀತಿಯ ಸಮಾಜಗಳ ಮೂಲಾಧಾರವಾದ ಅಂದರೆ ಜನರು ತಮ್ಮ ಜೀವನ ಸಾಗಿಸಲು ಕೈಗೊಳ್ಳಬೇಕಾದ ಚಟುವಟಿಕೆಗಳನ್ನು ಪರಿಶೀಲಿಸಿ ಅದರ ಮೂಲಕ ಮಾನವ ಉತ್ಪಾದನಾ ವಿಧಿಯಲ್ಲಿ ಇತರರೊಡನೆ ಯಾವ ರೀತಿಯ ಸಂಬಂಧ ಹೊಂದಿರುತ್ತಾನೆ ಎಂಬುದನ್ನು ಪರಿಶೀಲಿಸುತ್ತದೆ.

References

ಅನುಪಮನಿರಂಜನ, (2008), ಸಾಹಿತ್ಯ ಮತ್ತು ಪ್ರಗತಿ, ಡಿ.ವಿ.ಕೆ. ಮುರ್ತಿ ಪ್ರಕಾಶಕರು, ಮೈಸೂರು.

ಉಮಾ ಆರ್. (2005), ನಿರಂಜರ ಕಾದಂಬರಿಗಳಲ್ಲಿ ಸಾಮಾಜಿಕ ನಿಲುವು, ಕನಕ ಸಾಹಿತ್ಯ ಪ್ರತಿಷ್ಠಾನ, ಬೆಂಗಳೂರು.

ಕೃಷ್ಞರಾಯ ಅ.ನ. (1944), ಪ್ರಗತಿ ಶೀಲ, ಕರ್ನಾಟಕ ಸಾಹಿತ್ಯ ಮಂದಿರ, ಬೆಂಗಳೂರು.

ನಟರಾಜ್ ಹುಳಿಯಾರ್, (2003), ಮಾರ್ಕ್ಸ್‌್‌, ಗಾಂದಿ, ಸಮಾಜವಾದ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು.

ನಿರಂಜನ, (2007), ಬುದ್ದಿಭಾವ ಬದುಕು, ಡಿ.ವಿ.ಕೆ. ಮೂರ್ತಿ ಪ್ರಕಾಶನ, ಮೈಸೂರು.

Downloads

Published

02.04.2025

How to Cite

ರಮೇಶ್. (2025). ನಿರಂಜನರ ಬರವಣಿಗೆಯಲ್ಲಿ ಮಾರ್ಕ್ಸ್‌ವಾದ . ಅಕ್ಷರಸೂರ್ಯ (AKSHARASURYA), 6(02), 75 TO 83. Retrieved from https://aksharasurya.com/index.php/latest/article/view/620

Issue

Section

ಸಂಶೋಧನಾ ಲೇಖನಗಳು. | RESEARCH ARTICLE.