ಬಯಲಾಟ ಪರಂಪರೆ: ಆಧುನಿಕತೆಯ ಪ್ರಭಾವಗಳು

Main Article Content

ವಿರೂಪಾಕ್ಷಿ ಎನ್.ಬಿ.

Abstract

ಕರ್ನಾಟಕದ ಸಮೃದ್ಧ ಜನಪದ ರಂಗಭೂಮಿ ಪ್ರಕಾರಗಳಾದ ಬಯಲಾಟ ಮತ್ತು ದೊಡ್ಡಾಟಗಳ ಉಗಮ, ವಿಕಾಸ ಹಾಗೂ ಪ್ರಸ್ತುತ ಸ್ಥಿತಿಗತಿಗಳನ್ನು ಈ ಲೇಖನವು ಚರ್ಚಿಸುತ್ತದೆ.  ದ್ರಾವಿಡ ಮೂಲದ ಈ ಕಲೆಗೆ ಆಧುನಿಕತೆಯ ಸ್ಪರ್ಶದಿಂದಾಗಿ ಆಗಿರುವ ಬದಲಾವಣೆಗಳನ್ನು ಲೇಖಕರು ವಿಶ್ಲೇಷಿಸಿದ್ದಾರೆ. ಪ್ರಮುಖವಾಗಿ ವೇಷಭೂಷಣ, ರಂಗಸಜ್ಜಿಕೆ, ಮತ್ತು ಸಂಗೀತದಲ್ಲಿ ಚಲನಚಿತ್ರದ ಪ್ರಭಾವಗಳು ನುಸುಳಿರುವುದನ್ನು, ಸ್ತ್ರೀ ಪಾತ್ರಗಳಲ್ಲಿನ ಬದಲಾವಣೆಗಳನ್ನು ಇಲ್ಲಿ ಗುರುತಿಸಲಾಗಿದೆ. ಯಕ್ಷಗಾನದಂತೆ ಕಾಲಕ್ಕೆ ಒಗ್ಗಿ ಬದಲಾಗದ ಕಾರಣ, ಈ ಕಲೆ ಎದುರಿಸುತ್ತಿರುವ ಸವಾಲುಗಳು ಮತ್ತು ಭಾಷಾ ಕ್ಲಿಷ್ಟತೆಯನ್ನು ನಿವಾರಿಸಿ  ಸರಳೀಕರಣಗೊಳಿಸುವ ಅಗತ್ಯವನ್ನು ಇಲ್ಲಿ ಪ್ರತಿಪಾದಿಸಲಾಗಿದೆ. ಜಾಗತೀಕರಣದ ಅಬ್ಬರದ ನಡುವೆಯೂ ದೇಸಿ ಸೊಗಡನ್ನು ಉಳಿಸಿಕೊಳ್ಳುವ ಅನಿವಾರ್ಯತೆಯನ್ನು ಲೇಖನವು ಒತ್ತಿಹೇಳುತ್ತದೆ.

Article Details

Section

Research Articles

Author Biography

ವಿರೂಪಾಕ್ಷಿ ಎನ್.ಬಿ.

ಸಹಾಯಕ ಪ್ರಾಧ್ಯಾಪಕರು, ಬಸವೇಶ್ವರ ಕಲಾ ಮಹಾವಿದ್ಯಾಲಯ, ಬಾಗಲಕೋಟೆ.

References

ಚಂದ್ರಶೇಖರ ಕಂಬಾರ, (1965), ಉತ್ತರ ಕರ್ನಾಟಕದ ಜಾನಪದ ರಂಗಭೂಮಿ, ಧಾರವಾಡ: ಮನ್ವಂತರ ಪ್ರಕಾಶನ.

ಚಂದ್ರಶೇಖರ ಕಂಬಾರ, (2004), ದೇಶೀಯ ಚಿಂತನೆ, ಬೆಂಗಳೂರು: ಅಂಕಿತ ಪುಸ್ತಕ.

ದುರ್ಗಾದಾಸ್ ಕೆ.ಆರ್., (1996), ಬಳ್ಳಾರಿ ಜಿಲ್ಲೆಯ ಬಯಲಾಟಗಳು, ಬೆಳಗಾವಿ: ಸಮತಾ ಪ್ರಕಾಶನ.

ಬಸವರಾಜ ಮಲಶೆಟ್ಟಿ, (1983), ಉತ್ತರ ಕರ್ನಾಟಕದ ಬಯಲಾಟಗಳು, ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ.

ರಾಜೇಂದ್ರ ಡಿ.ಕೆ., (2011), ದಕ್ಷಿಣ ಕರ್ನಾಟಕದ ಜನಪದ ರಂಗಭೂಮಿ, ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ.

ವೈಕುಂಠರಾಜು ಬಿ.ವಿ., (1997), ಕನ್ನಡ ರಂಗಭೂಮಿ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ಶಿವರಾಮ ಕಾರಂತ, (2007), ಯಕ್ಷಗಾನ ಬಯಲಾಟ, ಸಾಗರ: ರವೀಂದ್ರ ಪುಸ್ತಕಾಲಯ.