ಸಂಸ್ಕಾರ ಕಾದಂಬರಿಯ ತಾತ್ವಿಕ ಚರ್ಚೆ
Main Article Content
Abstract
ಯು.ಆರ್. ಅನಂತಮೂರ್ತಿಯವರ 'ಸಂಸ್ಕಾರ' ಕಾದಂಬರಿಯು ಕನ್ನಡ ಸಾಹಿತ್ಯದಲ್ಲಿ ಮಹತ್ವದ ಚರ್ಚೆಗೆ ಕಾರಣವಾದ ಕೃತಿ. ಕಾದಂಬರಿಯಲ್ಲಿನ ನೈತಿಕ ಸಂಘರ್ಷ, ಬ್ರಾಹ್ಮಣ್ಯದ ಮೌಲ್ಯಗಳ ಕುಸಿತ ಮತ್ತು ವ್ಯಕ್ತಿಯ ಅಸ್ತಿತ್ವದ ಹುಡುಕಾಟವನ್ನು ತಾತ್ವಿಕವಾಗಿ ಇಲ್ಲಿ ವಿಶ್ಲೇಷಿಸಲಾಗಿದೆ. ಪ್ರಾಣೇಶಾಚಾರ್ಯ ಮತ್ತು ನಾರಣಪ್ಪ ಎಂಬ ಎರಡು ಭಿನ್ನ ವ್ಯಕ್ತಿತ್ವಗಳ ಮೂಲಕ ಸಂಪ್ರದಾಯ ಮತ್ತು ಆಧುನಿಕತೆಯ ಸಂಘರ್ಷವನ್ನು ಗುರುತಿಸಲಾಗಿದೆ. ನಾರಣಪ್ಪನ ಸಾವು ಅಗ್ರಹಾರದಲ್ಲಿ ಉಂಟುಮಾಡುವ ಅಲ್ಲೋಲಕಲ್ಲೋಲ ಮತ್ತು ಪ್ರಾಣೇಶಾಚಾರ್ಯರ ಆತ್ಮಶೋಧನೆಯ ಪ್ರಕ್ರಿಯೆಯನ್ನು ಚರ್ಚಿಸಲಾಗಿದೆ. ಕಾದಂಬರಿಯು ಹೆಣ್ಣು, ಹೊನ್ನು ಮತ್ತು ಮಣ್ಣಿನ ಸಂಬಂಧವನ್ನು ಹೇಗೆ ಹೊಸದಾಗಿ ವ್ಯಾಖ್ಯಾನಿಸುತ್ತದೆ ಎಂಬುದನ್ನು ವಿವರಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಅನಂತಮೂರ್ತಿ.ಯು.ಆರ್ 2020, ಸಂಸ್ಕಾರ, ಅಕ್ಷರ ಪ್ರಕಾಶನ ಹೆಗ್ಗೋಡು ಸಾಗರ ಕರ್ನಾಟಕ.
ಅಶೋಕ. ಟಿ.ಪಿ, 2014, ಅನಂತಮೂರ್ತಿ ವಾಹ್ಮಯ, ಅಕ್ಷರ ಪ್ರಕಾಶನ ಹೆಗ್ಗೋಡು ಸಾಗರ ಕರ್ನಾಟಕ.
ಕೃಷ್ಣಮೂರ್ತಿ.ಎಂ.ಜಿ, 1994, ಕೃತಿ ಸಂಸ್ಕೃತಿ, ಋಜುವಾತು ಪ್ರಕಾಶನ ಮೈಸೂರು.
ನಾಯಕ.ಜಿ.ಎಚ್, 2011, ಮೌಲ್ಯ ಮಾರ್ಗ ಸಂ-ಒಂದು, ಸಿರಿವರ ಪ್ರಕಾಶನ ಬೆಂಗಳೂರು.
ಶೂದ್ರ ಶ್ರೀನಿವಾಸ್ 2011, ಯು. ಆರ್. ಅನಂತಮೂರ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು.