ದೇಶಿ ಅನುಭವ ಸಾಹಿತ್ಯದ ವಸ್ತುವಾಗಬೇಕು (ಕರ್ವಾಲೊ ಕಾದಂಬರಿಯನ್ನು ಅನುಲಕ್ಷಿಸಿ)

Main Article Content

ರವಿಚಂದ್ರ

Abstract

ಪೂರ್ಣಚಂದ್ರ ತೇಜಸ್ವಿಯವರ ‘ಕರ್ವಾಲೊ’ ಕಾದಂಬರಿಯ ಹಿನ್ನೆಲೆಯಲ್ಲಿ, ಪುಸ್ತಕದ ಜ್ಞಾನ ಮತ್ತು ದೇಶಿ ಅನುಭವಗಳ ಅನುಸಂಧಾನದ ಮಹತ್ವವನ್ನು ವಿಶ್ಲೇಷಿಸಲಾಗಿದೆ. ಕೇವಲ ಪಾಶ್ಚಾತ್ಯ ಅಥವಾ ಬ್ರಾಹ್ಮಣ ಪ್ರಜ್ಞೆಯ ಚಿಂತನೆಗಿಂತ, ಮಣ್ಣಿನ ಮಕ್ಕಳಾದ ಮಂದಣ್ಣನಂತಹವರ ಅನುಭವಜನ್ಯ ಜ್ಞಾನವು ಸಾಹಿತ್ಯದ ವಸ್ತುವಾಗಬೇಕಾದ ಅಗತ್ಯವನ್ನು ಪ್ರತಿಪಾದಿಸಲಾಗಿದೆ. ವಿಜ್ಞಾನಿ ಕರ್ವಾಲೊ ಮತ್ತು ಹಳ್ಳಿಯ ಮಂದಣ್ಣನ ಸಂಬಂಧದ ಮೂಲಕ, ಶಿಷ್ಟ ಮತ್ತು ಜಾನಪದ ಪ್ರಜ್ಞೆಗಳು ಒಂದಾದಾಗ ಮಾತ್ರ ಅಖಂಡ ಸಾಹಿತ್ಯ ಸೃಷ್ಟಿಯಾಗಲು ಸಾಧ್ಯ. ಜ್ಞಾನವೆಂಬುದು ಕೇವಲ ಲಾಭದ ದೃಷ್ಟಿಯಾಗದೆ, ಜೀವನ ಪ್ರೀತಿ ಮತ್ತು ಕುತೂಹಲದ ಸಂಕೇತವಾಗಬೇಕು ಎಂಬುದನ್ನು ಲೇಖನವು ಚರ್ಚಿಸುತ್ತದೆ. ಬದುಕಿನ ನೈಜ ಅನುಭವಗಳು ಮತ್ತು ವೈಜ್ಞಾನಿಕ ದೃಷ್ಟಿಕೋನಗಳ ಬೆಸುಗೆಯೇ ನಿಜವಾದ ಜ್ಞಾನ ಎಂಬುದನ್ನು ಇಲ್ಲಿ ಪ್ರತಿಪಾದಿಸಲಾಗಿದೆ.

Article Details

Section

Research Articles

Author Biography

ರವಿಚಂದ್ರ

ಸಂಶೋಧನಾರ್ಥಿ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ ಹಂಪಿ.

References

ಯು. ಆರ್ ಅನಂತಮೂರ್ತಿ, ಪ್ರಜ್ಞೆ ಮತ್ತು ಪರಿಸರ, ಪುಟ-51, 2014.

ಎಚ್ ಶಶಿಕಲಾ, ಏಕ-ಅನೇಕ, ಪುಟ-209, 2005.

ನಾಯಕ. ಜಿ.ಎಚ್, 2011, ಮೌಲ್ಯಮಾರ್ಗ ಸಂಪುಟ 1, ಸಿರಿವರ ಪ್ರಕಾಶನ, ಬೆಂಗಳೂರು.

ಪೂರ್ಣಚಂದ್ರ ತೇಜಸ್ವಿ ಕೆ. ಪಿ., 2016, ಕರ್ವಾಲೊ, ಪುಸ್ತಕ ಪ್ರಕಾಶನ, ಮೈಸೂರು.

ನಾರಾಯಣ ಕೆ. ವಿ., 2016, ತೊಂಡುಮೇವು-3, ಬರಹ ಪಬ್ಲಿಷಿಂಗ್ ಹೌಸ್, ಬೆಂಗಳೂರು.