ಸಮಗ್ರ ದಾಸಸಾಹಿತ್ಯ ಸಂಪುಟಗಳ ಒಳ-ಹೊರಗು
Main Article Content
Abstract
ದಾಸಸಾಹಿತ್ಯದ ಪ್ರಕಟಣೆಯ ಸುವರ್ಣಯುಗವೆಂದರೆ ಅದು ಪಾವಂಜೆ ಮತ್ತು ಗೊರೇಬಾಳರ ಕಾಲದಲ್ಲಾದ ಪ್ರಕಟಣೆಗಳು. ಆದರೆ ಈ ಕಾಲದಲ್ಲಿ ಕೇವಲ ದಾಸಸಾಹಿತ್ಯದ ಸಂಪಾದನೆಯನ್ನಷ್ಟೇ ಮುಖ್ಯವಾಗಿರಿಸಿಕೊಂಡು ಸಂಪಾದನೆಗಳು ನಡೆದವು. ಕಾಲಾ ನಂತರದ ದಾಸಸಾಹಿತ್ಯದ ಸಂಪಾದನೆ ಆಧುನಿಕ ಸಂಪಾದನಾ ವಿಧಾನದನ್ವಯ ಜರುಗಲಾರಂಭಿಸಿ ಅನೇಕ ಕೃತಿಗಳು ಸಂಪಾದನೆಯಾಗಿ ಪ್ರಕಟಣೆಗೊಂಡವು. ಇವುಗಳಲ್ಲಿ ಕೆಲವು ಕೃತಿಗಳನ್ನು ಹೊರತುಪಡಿಸಿ ಉಳಿದೆಲ್ಲ ಕೃತಿಗಳು ವೈಯಕ್ತಿಕ ಪ್ರಕಟಣೆಗಳಾಗಿದ್ದವು. ಹಾಗಾಗಿ ಸರ್ಕಾರಕ್ಕೆ ದಾಸಸಾಹಿತ್ಯದ ಸಂಪಾದನಾ ಕೃತಿಗಳನ್ನು ಪ್ರಕಟಿಸುವ ಒಂದು ಯೋಜನೆಯನ್ನು ರೂಪಿಸಬೇಕೆಂದು ಹಲವು ವರ್ಷಗಳಿಂದ ಕೇಳಿಬರುತ್ತಿದ್ದ ಕೂಗು. ಇಂತಹ ಕೋರಿಕೆಯ ಫಲವಾಗಿ 2003ರಲ್ಲಿ ಕರ್ನಾಟಕ ಸರ್ಕಾರವು ಸಮಗ್ರ ದಾಸಸಾಹಿತ್ಯವನ್ನು ಪ್ರಕಟಿಸುವ ಒಂದು ಯೋಜನೆಯನ್ನು ರೂಪಿಸಿತು. ಅದರ ಫಲವೇ ಈ 35 ಸಂಪುಟಗಳ 50 ಕೃತಿಗಳು. ಈ ಯೋಜನೆಯಲ್ಲಿ ಮೂಡಿಬಂದ ಕೃತಿಗಳ ಆಂತರಿಕ ಮತ್ತು ಬಾಹ್ಯವಾಗಿರುವ ಕೆಲವು ವಿಚಾರಗಳನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಅರಳುಮಲ್ಲಿಗೆ ಪಾರ್ಥಸಾರಥಿ, ಕನ್ನಡ ಹರಿದಾಸ ಸಾಹಿತ್ಯ (1989), ಅಖಿಲ ಭಾರತ ಮಾಧ್ವ ಮಹಾಮಂಡಲ ಪ್ರಕಾಶನ, ಬೆಂಗಳೂರು.
ಶ್ರೀನಿವಾಸ ಹಾವನೂರ, ನಾಗರತ್ನ ಟಿ.ಎನ್, ವಸಂತ ಕುಷ್ಟಗಿ (ಪ್ರ.ಸಂ)., ಸಮಗ್ರ ದಾಸಸಾಹಿತ್ಯ 35 ಸಂಪುಟಗಳು (2003), ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು.