ವೈದೇಹಿಯವರ ಕೆಲವು ಕಥೆಗಳ ಅವಲೋಕನ
Main Article Content
Abstract
ಖ್ಯಾತ ಕನ್ನಡ ಲೇಖಕಿ ವೈದೇಹಿಯವರ ಕತೆಗಳಲ್ಲಿನ ಸ್ತ್ರೀಪರ ಕಾಳಜಿ ಹಾಗೂ ಬದಲಾಗುತ್ತಿರುವ ಮಾನವೀಯ ಸಂಬಂಧಗಳ ಸೂಕ್ಷ್ಮ ಚಿತ್ರಣವನ್ನು ಇಲ್ಲಿ ಸಮಗ್ರವಾಗಿ ವಿಶ್ಲೇಷಿಸಲಾಗಿದೆ. ‘ಮರ ಗಿಡ ಬಳ್ಳಿ’ ಕತೆಯ ಮೂಲಕ ಆಧುನಿಕ ಸ್ವಾರ್ಥಮಯ ಜಗತ್ತಿನಲ್ಲಿ ಪೋಷಕರು ಮತ್ತು ಮಕ್ಕಳ ನಡುವಿನ ಯಾಂತ್ರಿಕ ಹಾಗೂ ಒಣ ಔಪಚಾರಿಕ ಸಂಬಂಧಗಳ ಶೋಧವನ್ನು ಮಾಡಲಾಗಿದೆ. ‘ಅಕ್ಕು’ ಕಥೆಯಲ್ಲಿ ಪುರುಷಪ್ರಧಾನ ಸಮಾಜದ ಮದುವೆ ಎಂಬ ಕಡ್ಡಾಯ ವ್ಯವಸ್ಥೆಯಿಂದ ಮಾನಸಿಕವಾಗಿ ಜರ್ಜರಿತಳಾಗುವ ಹೆಣ್ಣಿನ ದುರಂತ ಸ್ಥಿತಿಯನ್ನು ಮನೋವೈಜ್ಞಾನಿಕವಾಗಿ ವಿವರಿಸಲಾಗಿದೆ. ‘ಶಕುಂತಲೆಯೊಂದಿಗೆ ಕಳೆದ ಅಪರಾಹ್ನ’ ಕತೆಯಲ್ಲಿ ಪೌರಾಣಿಕ ಕಟ್ಟುಕತೆಗಳನ್ನು ಹೆಣ್ಣಿನ ದೃಷ್ಟಿಕೋನದಿಂದ ಮರುಪರಿಶೀಲಿಸಿ, ಪುರುಷರ ಲಂಪಟತ್ವವನ್ನು ಸಭ್ಯತೆಯ ಹೆಸರಿನಲ್ಲಿ ಮುಚ್ಚಿಡುವ ಪಾರಂಪರಿಕ ವ್ಯವಸ್ಥೆಯನ್ನು ತೀಕ್ಷ್ಣವಾಗಿ ಪ್ರಶ್ನಿಸಲಾಗಿದೆ. ಒಟ್ಟಾರೆಯಾಗಿ, ಸಾಂಪ್ರದಾಯಿಕ ಚೌಕಟ್ಟಿನೊಳಗೇ ಹೆಣ್ಣಿನ ಅಂತರಂಗದ ತಲ್ಲಣಗಳು ಮತ್ತು ಸಾಮಾಜಿಕ ಮುಖವಾಡಗಳನ್ನು ಬಯಲುಮಾಡುವ ವೈದೇಹಿಯವರ ಸೃಜನಶೀಲತೆಯ ಅನನ್ಯತೆಯನ್ನು ಕಟ್ಟಿಕೊಡಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕರೀಗೌಡ ಬೀಚನಹಳ್ಳಿ, (2003), ಶತಮಾನದ ಸಣ್ಣಕಥೆಗಳ ಸಮೀಕ್ಷೆ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.
ವೈದೇಹಿ, (1990), ಆಯ್ದ ಕಥೆಗಳು, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ.