ಕನ್ನಡ ಸಾಹಿತ್ಯದಲ್ಲಿ ಎಐ ಬಳಕೆ ಮತ್ತು ಭಾಷಾ ಸಂರಕ್ಷಣೆ ಹಾಗೂ ಅಭಿವೃದ್ಧಿ

Main Article Content

ಡಾ. ಅರುಣಕುಮಾರಿ ಬಿ.ಎನ್.

Abstract

ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಕನ್ನಡ ಸಾಹಿತ್ಯ ಮತ್ತು ಭಾಷಾ ಬೆಳವಣಿಗೆಯಲ್ಲಿ ತರುತ್ತಿರುವ ಕ್ರಾಂತಿಕಾರಿ ಬದಲಾವಣೆಗಳ ಸಾಧಕ-ಬಾಧಕಗಳನ್ನು ಇಲ್ಲಿ ಕೂಲಂಕಷವಾಗಿ ವಿಶ್ಲೇಷಿಸಲಾಗಿದೆ. ಎಐ ತಂತ್ರಜ್ಞಾನವು ಕೃತಿಗಳ ಅನುವಾದ, ಹಳೆಯ ಹಸ್ತಪ್ರತಿಗಳ ಡಿಜಿಟಲ್ ಸಂರಕ್ಷಣೆ, ಶಿಕ್ಷಣ-ಸಂಶೋಧನೆಗೆ ಹೊಸ ಆಯಾಮ, ಹಾಗೂ ಹೊಸ ಪದಗಳ ಸೃಷ್ಟಿಗೆ ಮಹತ್ವದ ಕೊಡುಗೆ ನೀಡುತ್ತಿದೆ. ಧ್ವನಿ-ಮಾರ್ಗದ ಟೈಪಿಂಗ್ ಮತ್ತು ಡಿಜಿಟಲ್ ಉಪಕರಣಗಳು ಭಾಷೆಯ ಪ್ರಸರಣವನ್ನು ಸುಲಭಗೊಳಿಸಿವೆ. ಆದಾಗ್ಯೂ, ತಂತ್ರಜ್ಞಾನದ ಮೇಲಿನ ಅತಿಯಾದ ಅವಲಂಬನೆಯಿಂದ ಮಾನವನ ಸಹಜ ಸೃಜನಶೀಲತೆ ಹಾಗೂ ಸ್ವತಂತ್ರ ಆಲೋಚನೆ ಕುಂಠಿತವಾಗುವ ಅಪಾಯವಿದೆ. ನಿಖರತೆಯ ಕೊರತೆ, ಡೇಟಾ ಗೌಪ್ಯತೆಯ ಸವಾಲುಗಳು, ಯಾಂತ್ರಿಕ ರಚನೆ ಹಾಗೂ ಪ್ರಾದೇಶಿಕ ಸೊಗಡಿನ ನಾಶದಂತಹ ಗಂಭೀರ ಸಮಸ್ಯೆಗಳ ಬಗ್ಗೆಯೂ ಎಚ್ಚರಿಸಲಾಗಿದೆ. ಮುಂದಿನ ಪೀಳಿಗೆಗೆ ನಮ್ಮ ಭಾಷೆ, ಸಂಸ್ಕೃತಿ ಮತ್ತು ಜ್ಞಾನಸಂಪತ್ತನ್ನು ದಾಟಿಸಲು ಎಐ ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಹಾಗೂ ಎಚ್ಚರಿಕೆಯಿಂದ ಸ್ವೀಕರಿಸುವ ಅನಿವಾರ್ಯತೆಯನ್ನು ಇಲ್ಲಿ ಪ್ರತಿಪಾದಿಸಲಾಗಿದೆ.

Article Details

Section

Research Articles

Author Biography

ಡಾ. ಅರುಣಕುಮಾರಿ ಬಿ.ಎನ್.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಸ್ವಾಯತ್ತ), ಗುಬ್ಬಿ.

How to Cite

ಅರುಣಕುಮಾರಿ ಬಿ.ಎನ್. (2026). ಕನ್ನಡ ಸಾಹಿತ್ಯದಲ್ಲಿ ಎಐ ಬಳಕೆ ಮತ್ತು ಭಾಷಾ ಸಂರಕ್ಷಣೆ ಹಾಗೂ ಅಭಿವೃದ್ಧಿ. ಅಕ್ಷರಸೂರ್ಯ (AKSHARASURYA), 16(03), 54 to 58. https://aksharasurya.com/index.php/latest/article/view/2159

References

Most read articles by the same author(s)