ಕನ್ನಡ ಶಾಸನಗಳಲ್ಲಿ ಕಂದ ಪದ್ಯಗಳನ್ನು ಗುರುತಿಸುವಲ್ಲಿ ಕೃತಕ ಬುದ್ಧಿಮತ್ತೆ

Main Article Content

ಡಾ. ಬಸವರಾಜು ಪಿ.

Abstract

ಕನ್ನಡದ ಪ್ರಾಚೀನ ಗ್ರಂಥ ಹಾಗೂ ಶಾಸನ ಸಾಹಿತ್ಯದಲ್ಲಿ ಚೊಕ್ಕವಾದ ಭಾವಾಭಿವ್ಯಕ್ತಿಗೆ ಕಂದಪದ್ಯಗಳನ್ನು ವ್ಯಾಪಕವಾಗಿ ಬಳಸಲಾಗಿದೆ. ಇತಿಹಾಸದ ಇಂತಹ ಅಮೂಲ್ಯ ಸಾಹಿತ್ಯಿಕ ಕುರುಹುಗಳನ್ನು ಪತ್ತೆಹಚ್ಚಲು ಹಾಗೂ ಕಂದಪದ್ಯಗಳನ್ನು ಶಾಸ್ತ್ರೀಯವಾಗಿ ಗುರುತಿಸಲು ಕೃತಕ ಬುದ್ಧಿಮತ್ತೆ (AI) ಮತ್ತು ಯಂತ್ರಕಲಿಕೆ ತಂತ್ರಜ್ಞಾನದ ಬಳಕೆಯ ಸಾಧ್ಯತೆಗಳನ್ನು ಇಲ್ಲಿ ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಶಾಸನಗಳ ಲಿಪಿ ಸವೆತವನ್ನು ನಿವಾರಿಸಿ, ಅಕ್ಷರಗಳನ್ನು ಓದುವಲ್ಲಿ ಮತ್ತು ಕಾಲನಿರ್ಣಯ ಮಾಡುವಲ್ಲಿ ತಂತ್ರಜ್ಞಾನವು ಯಶಸ್ವಿಯಾಗಿದೆ. ಆದರೆ, ತುಮಕೂರು ಜಿಲ್ಲೆಯ ಪುರ ಗ್ರಾಮದ ಹೊಯ್ಸಳ ಕಾಲದ ಶಾಸನವನ್ನು ಆಧರಿಸಿದ ಪ್ರಾಯೋಗಿಕ ಅಧ್ಯಯನದಲ್ಲಿ, ಕಂದಪದ್ಯಗಳ ಲಘು-ಗುರು ಪ್ರಸ್ತಾರ ಹಾಗೂ ಗಣವಿಂಗಡಣೆಯನ್ನು ನಿಖರವಾಗಿ ಗುರುತಿಸುವಲ್ಲಿ ಎಐ ಇನ್ನು ಸಂಪೂರ್ಣವಾಗಿ ಸಫಲವಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಶಾಸನಗಳಲ್ಲಿನ ಮಾತ್ರಾ ಸಡಿಲಿಕೆಯನ್ನು ಅರ್ಥೈಸಿಕೊಳ್ಳುವಲ್ಲಿ ಯಂತ್ರಗಳು ಎಡವುತ್ತವೆ. ಆದ್ದರಿಂದ, ಸಾಂಪ್ರದಾಯಿಕ ಛಂದೋನಿಯಮಗಳನ್ನು ಎಐ ತಂತ್ರಜ್ಞಾನಕ್ಕೆ ಸಂಪೂರ್ಣವಾಗಿ ಅಳವಡಿಸುವ ಮೂಲಕ ಭವಿಷ್ಯದಲ್ಲಿ ಶಾಸನಗಳ ಸಾಹಿತ್ಯಿಕ ವಿಶ್ಲೇಷಣೆಯನ್ನು ಅಧ್ಯಯನಕಾರರಿಗೆ ಮತ್ತಷ್ಟು ಸುಗಮಗೊಳಿಸಬಹುದಾದ ತುರ್ತು ಅಗತ್ಯವನ್ನು ಇಲ್ಲಿ ಪ್ರತಿಪಾದಿಸಲಾಗಿದೆ.

Article Details

Section

Research Articles

Author Biography

ಡಾ. ಬಸವರಾಜು ಪಿ.

ಸಹಾಯಕ ಪ್ರಾಧ್ಯಾಪಕರು, ಶ್ರೀ ಸಿದ್ಧಗಂಗಾ ಕಲಾ ಮತ್ತು ವಾಣಿಜ್ಯ ಸಂಜೆ ಕಾಲೇಜು, ಬಿ.ಹೆಚ್.ರಸ್ತೆ, ತುಮಕೂರು.

How to Cite

ಬಸವರಾಜು ಪಿ. (2026). ಕನ್ನಡ ಶಾಸನಗಳಲ್ಲಿ ಕಂದ ಪದ್ಯಗಳನ್ನು ಗುರುತಿಸುವಲ್ಲಿ ಕೃತಕ ಬುದ್ಧಿಮತ್ತೆ. ಅಕ್ಷರಸೂರ್ಯ (AKSHARASURYA), 16(03), 44 to 48. https://aksharasurya.com/index.php/latest/article/view/2157

References

Most read articles by the same author(s)