ಕನ್ನಡ ಶಾಸನಗಳಲ್ಲಿ ರಗಳೆ

Main Article Content

ಬಸವರಾಜು ಪಿ.

Abstract

ಕನ್ನಡ ಸಾಹಿತ್ಯದಲ್ಲಿ ಪಂಪನಿಂದ ಪ್ರಾರಂಭವಾಗಿ ಹರಿಹರನ ಮೂಲಕ ಜನಪ್ರಿಯಗೊಂಡ 'ರಗಳೆ' ಛಂದೋಬಂಧವು ಶಾಸನಗಳಲ್ಲಿಯೂ ಬಳಕೆಯಾಗಿರುವುದು ಒಂದು ವಿಶೇಷ ಸಂಗತಿಯಾಗಿದೆ. ನಾಗವರ್ಮನ ಛಂದೋಂಬುಧಿಯಲ್ಲಿ ವಿವರಿಸಲಾದ ಉತ್ಸಾಹ, ಮಂದಾನಿಲ ಮತ್ತು ಲಲಿತ ರಗಳೆಗಳ ಲಕ್ಷಣಗಳನ್ನು ಶಾಸನ ಕವಿಗಳು ಅನುಸರಿಸಿದ್ದಾರೆ. ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ದೊರೆತ ಕ್ರಿ.ಶ. 1055 ರಿಂದ 1177ರ ನಡುವಿನ ಐದು ಶಾಸನಗಳಲ್ಲಿ ಲಲಿತ ರಗಳೆಯ ಬಳಕೆಯನ್ನು ಗುರುತಿಸಲಾಗಿದೆ. ಕೋಗಳಿ, ಕುರುಗೋಡು ಮತ್ತು ಕೊಪ್ಪಳದ ಶಾಸನಗಳಲ್ಲಿ ಜೈನ ಮುನಿಗಳು, ದಾನಿಗಳು ಮತ್ತು ವೀರರ ಗುಣಗಾನ ಮಾಡಲು ರಗಳೆಯನ್ನು ಬಳಸಲಾಗಿದೆ. ತೋಮರ ರಗಳೆ ಅಥವಾ ಲಲಿತ ರಗಳೆಯೆಂದು ಕರೆಯಲ್ಪಡುವ ಈ ಪದ್ಯಬಂಧವು ಪಂಚಮಾತ್ರಾ ಗಣಗಳ ಲಯವನ್ನು ಹೊಂದಿದ್ದು, ಭಾವನಾತ್ಮಕ ಅಭಿವ್ಯಕ್ತಿಗೆ ಶಾಸನಗಳಲ್ಲಿಯೂ ಬಳಕೆಯಾಗಿರುವುದು ಹರಿಹರನ ಸಾಹಿತ್ಯಕ ಪ್ರಭಾವವನ್ನು ಸೂಚಿಸುತ್ತದೆ.

Article Details

Section

Research Articles

Author Biography

ಬಸವರಾಜು ಪಿ.

ಸಹಾಯಕ ಪ್ರಾಧ್ಯಾಪಕರು, ಶ್ರೀ ಸಿದ್ದಗಂಗಾ ಕಾಲೇಜು, ಬಿ.ಹೆಚ್. ರಸ್ತೆ, ತುಮಕೂರು.

References

ಬಸವರಾಜು ಎಲ್. (ಸಂ), ಕನ್ನಡ ಛಂದಸ್ಸಂಪುಟ, ಪ್ರಕಟಣೆ: ಗೀತಾಬುಕ್ ಹೌಸ್. ಮೈಸೂರು-1. 2012.

ಚಿದಾನಂದಮೂರ್ತಿ ಎಂ., ಭಾಷಾವಿಜ್ಞಾನ ಮತ್ತು ಛಂದಸ್ಸು, ಪ್ರಕಟಣೆ: ಸಪ್ನ ಬುಕ್ ಹೌಸ್ ಬೆಂಗಳೂರು, 2002.

ಗಣೇಶ್ ಆರ್. (ಸಂ), ದ್ರಾವಿಡಛಂದಸ್ಸು, ಮೂಲ: ಕೀರ್ತಿಶೇಷಕುಕ್ಕಿಲ ಕೃಷ್ಣಭಟ್ಟರು. ಪ್ರಕಟಣೆ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ. 2002.

ಕನ್ನಡ ವಿಶ್ವ ವಿದ್ಯಾನಿಲಯ ಶಾಸನ ಸಂಪುಟ-1, ಬಳ್ಳಾರಿ ಜಿಲ್ಲೆ, (ಸಂ) ದೇವರಕೊಂಡಾರೆಡ್ಡಿ. ಪ್ರಕಟಣೆ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ. 1998.

ಕನ್ನಡ ವಿಶ್ವ ವಿದ್ಯಾನಿಲಯ ಶಾಸನ ಸಂಪುಟ-2, ಕೊಪ್ಪಳ ಜಿಲ್ಲೆ, (ಸಂ) ದೇವರಕೊಂಡಾರೆಡ್ಡಿ. ಪ್ರಕಟಣೆ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ. ಹಂಪಿ. ವಿದ್ಯಾರಣ್ಯ, 1999.

ಸೇಶ ಅಯ್ಯಂಗಾರ್ ಹೆಚ್.. ಮತ್ತು ರಾಮಸ್ವಾಮಿ ಅಯ್ಯಂಗಾರ್, (ಸಂ) ಛಂದೋಂಬುಧಿ, ಪ್ರಕಟಣೆ: ಶ್ರೀ ಲಲಿತ ಪ್ರಕಾಶನ, ಮೈಸೂರು, 1967.

ವೆಂಕಟಾಚಲ ಶಾಸ್ತ್ರೀ ಟಿ. ವಿ.. ಕನ್ನಡ ಛಂದಃಸ್ವರೂಪ, ಪ್ರಕಟಣೆ: ಡಿ.ವಿ.ಕೆ ಮೂರ್ತಿ ಪ್ರಕಾಶನ, ಮೈಸೂರು, 2014.

ವೆಂಕಟಾಚಲ ಶಾಸ್ತ್ರೀ ಟಿ. ವಿ., (ಸಂ) ಛಂದೋಂಬುಧಿ, ಪ್ರಕಟಣೆ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ. ವಿದ್ಯಾರಣ್ಯ, 2007.