ಪದವಿ ತರಗತಿಗಳಲ್ಲಿ ಛಂದಸ್ಸಿನ ಬೋಧನಾ ವಿಧಾನಗಳು

Main Article Content

ಶಿವರಾಜು ಎನ್.

Abstract

ಪದವಿ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಕಠಿಣವೆನಿಸುವ ಛಂದಸ್ಸನ್ನು ಅತ್ಯಂತ ಸರಳ ಮತ್ತು ಪರಿಣಾಮಕಾರಿಯಾಗಿ ಬೋಧಿಸುವ ವಿವಿಧ ವಿಧಾನಗಳನ್ನು ಇಲ್ಲಿ ವಿವೇಚಿಸಲಾಗಿದೆ. ಕಾವ್ಯ ಮತ್ತು ಶಾಸ್ತ್ರಗಳೆರಡೂ ಪರಸ್ಪರ ಪೂರಕವಾಗಿದ್ದು, ಶಾಸ್ತ್ರವನ್ನು ಬೋಧಿಸುವಾಗ ಕಾವ್ಯದ ರಮ್ಯತೆಯನ್ನು ಬಳಸಿಕೊಳ್ಳಬೇಕು. ಛಂದಸ್ಸಿನ ಬೋಧನೆಯು ವರ್ಣಮಾಲೆ, ಹ್ರಸ್ವ-ದೀರ್ಘ ಸ್ವರಗಳು ಹಾಗೂ ಲಘು-ಗುರುಗಳ ಮೂಲಭೂತ ಜ್ಞಾನದಿಂದ ಆರಂಭವಾಗಬೇಕು. ಶಿಕ್ಷಕರು ಕಪ್ಪು ಹಲಗೆಯನ್ನು ಬಳಸುವುದು, ವಿದ್ಯಾರ್ಥಿಗಳನ್ನು ಪಾಲ್ಗೊಳ್ಳುವಂತೆ ಮಾಡುವುದು, ಸಂಗೀತದ ಅಳವಡಿಕೆ ಹಾಗೂ ಸಿನಿಮಾ ಹಾಡುಗಳನ್ನು ಪದ್ಯಗಳಾಗಿ ಪರಿವರ್ತಿಸಿ ಹೇಳಿಕೊಡುವುದು ಕಲಿಕೆಯನ್ನು ಆಸಕ್ತಿದಾಯಕವಾಗಿಸುತ್ತದೆ. ಸರಳ ಉದಾಹರಣೆಗಳನ್ನು ನೀಡುವುದರಿಂದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಸುಲಭವಾಗಿ ಅಂಕ ಗಳಿಸಬಹುದು.

Article Details

Section

Research Articles

Author Biography

ಶಿವರಾಜು ಎನ್.

ಸಂಶೋಧನಾರ್ಥಿ, ಕುವೆಂಪು ಕನ್ನಡ ಅಧ್ಯಯನ ಕೇಂದ್ರ, ಕುಪ್ಪಳ್ಳಿ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.

References

ಕಲಬುರ್ಗಿ ಎಂ. ಎಂ., ಹರಿಹರನ ರಗಳೆಗಳು (ಸಂ.), ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು. ೧೦೦.

ಕಲಬುರ್ಗಿ ಎಂ. ಎಂ., ಹರಿಹರನ ರಗಳೆಗಳು (ಸಂ.), ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು. ೫೦೦.

ರಂ. ಶ್ರೀ ಮುಗಳಿ, ಕನ್ನಡ ಸಾಹಿತ್ಯ ಚರಿತ್ರೆ, ಗೀತಾ ಬುಕ್ ಹೌಸ್, ಮೈಸೂರು, ೧೯೯೭.

ತ. ಸು. ಶಾಮರಾಯ, ಕನ್ನಡ ಸಾಹಿತ್ಯ ಚರಿತ್ರೆ, ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥ ಮಾಲೆ, ಮೈಸೂರು, ೧೯೯೭.

ಕಲಬುರ್ಗಿ ಎಂ. ಎಂ. ಹರಿಹರನ ರಗಳೆಗಳು (ಸಂ) ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯.