ಧರ್ಮ ಮತ್ತು ಅಂಬೇಡ್ಕರ್

Main Article Content

ಗಣೇಶ

Abstract

ಅಂಬೇಡ್ಕರ್ ಭಾರತದ ಒಬ್ಬ ಶ್ರೇಷ್ಠ ಪ್ರತಿಭಾವಂತ ಬುದ್ದಿ ಜೀವಿ ಮತ್ತು ಮೇಧಾವಿ. ಪ್ರಪಂಚದ ಅಪ್ರತಿಮ ಚಿಂತಕರ ಸಾಲಿನಲ್ಲಿ ನಿಲ್ಲಬಲ್ಲ, ಮೇರು ವ್ಯಕ್ತಿತ್ವವುಳ್ಳ ಚಿಂತನಶೀಲ ವ್ಯಕ್ತಿ. ಅವರು ಜಗತ್ತಿನ ಎಲ್ಲಾ ಧಾರ್ಮಿಕ ಗ್ರಂಥಗಳನ್ನು ಆಸಕ್ತಿ ಮತ್ತು ಕುತೂಹಲದಿಂದ ಅಮೂಲಾಗ್ರವಾಗಿ ಅಧ್ಯಯನ ಮಾಡಿದ್ದರು. ಧರ್ಮವನ್ನು ಕುರಿತಂತೆ ರಾಬರ್ಟ್ ಸನ್ ಸ್ಮಿತ್ ಅವರ ಪರಿಕಲ್ಪನೆಯನ್ನು ಅಂಬೇಡ್ಕರ್ ಹಿಂದೂ ಧರ್ಮದ ತತ್ವಜ್ಞಾವನ್ನು ಕುರಿತ ತಮ್ಮ ಕೃತಿಯಲ್ಲಿ ಹೀಗೆ ಉಲ್ಲೇಖಿಸಿದ್ದಾರೆ. ಧರ್ಮ ಯಾವುದೇ ಕಾರಣಕ್ಕೂ ದುರ್ಬಲರನ್ನು ಶೋಷಿಸುವ ಅಸ್ತವಾಗಬಾರದು. ಹಿಂದೂ ಧಾರ್ಮಿಕ ವ್ಯವಸ್ಥೆಯಲ್ಲಿ ದೈವಿಕ ಪ್ರಭುತ್ವದ ಲಿಖಿತ ಸಂವಿಧಾನ ಮತ್ತು ಪುರೋಹಿತಶಾಹಿಯ ಅಘೋಷಿತ ಪ್ರಾಬಲ್ಯವನ್ನು ಕಾಪಾಡಿಕೊಂಡು ಬರಲಾಗಿದೆ. ಈ ಧರ್ಮದಲ್ಲಿ ಬಹುಸಂಖ್ಯಾತ ಹಿಂದುಳಿದ ಸಮುದಾಯಗಳ ಜನತೆ ಸಮಾನತೆಯಿಂದ ವಂಚಿತರಾಗಿದ್ದಾರೆ. ಇಂತಹ ಧಾರ್ಮಿಕ ಕಟ್ಟುಪಾಡುಗಳು ಭಾರತೀಯ ಸಮಾಜದಲ್ಲಿ ಬಹುಜನ ಬಂಧುಗಳಿಗೆ ಉಸಿರು ಕಟ್ಟಿಸುವಂತಹ ವಾತಾವರಣವನ್ನು ನಿರ್ಮಿಸಿವೆ. ಹಿಂದೂಧರ್ಮದ ಸಿದ್ದಾಂತಗಳನ್ನು ವಂಶಪಾರಂಪರ್ಯವಾಗಿ ಪಡೆಯುವ ಚರಾಸ್ತಿಯಂತೆ ವೈದಿಕಶಾಹಿ ಸಂರಕ್ಷಿಸಿದೆ. ಇಂತಹ ಧರ್ಮ ಪ್ರಕೃತಿ ಧರ್ಮಕ್ಕೆ ತದ್ವಿರುದ್ಧವಾಗಿದೆ.

Article Details

Section

Research Articles

Author Biography

ಗಣೇಶ

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೆಗ್ಗಡದೇವನಕೋಟೆ, ಮೈಸೂರು.

How to Cite

ಗಣೇಶ. (2025). ಧರ್ಮ ಮತ್ತು ಅಂಬೇಡ್ಕರ್. ಅಕ್ಷರಸೂರ್ಯ (AKSHARASURYA), 6(05), 46 to 53. https://aksharasurya.com/index.php/latest/article/view/1233

References

ಅಭಿನಂದನ, (2012), ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್, ಕೃಷಿ ವಿಕಾಸ್ ಪಬ್ಲಿಕೇಷನ್, ಬೆಂಗಳೂರು.

ಅಶೋಕ ಎ. ಬಿ., (2014), ಕಣ್ಣು ನೀಡಿದ ಕಣ್ಮಣಿ, ರತ್ನಮಾಲಾ ಪ್ರಕಾಶನ, ಬೀದರ.

ರಾಜಣ್ಣ ಓ., (2014), ವಿಶ್ವವ್ಯಾಪ್ತಿ ಅಂಬೇಡ್ಕರ್‌ವಾದ, ಲೈಟ್ ಆಫ್ ಏಷಿಯ ಪಬ್ಲಿಕೇಷನ್, ಬೆಂಗಳೂರು. ಮಾಯಿಗೌಡ ಕೆ., (2014), ಅಂಬೇಡ್ಕರ್ ದೃಷ್ಟಿಯಲ್ಲಿ ಮನು, ಸಪ್ನ ಬುಕ್ ಹೌಸ್ ಬೆಂಗಳೂರು.

ಜಾಕೋಬ್ ಲೋಬೊ ಸಿ. ಎಚ್., (2015), ಭಾರತ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್, ಸಪ್ನಾ ಬುಕ್ ಹೌಸ್, ಬೆಂಗಳೂರು.

ಶಾಸ್ತ್ರಿ ಜಿ. ವಿ., (2000), ಡಾ. ಬಿ.ಆರ್. ಅಂಬೇಡ್ಕರ್ (ಜೀವನ ಚರಿತ್ರೆ), ಪಾರು ಪ್ರಕಾಶನ, ಗದಗ.

ಭಗವಾನ್ ಕೆ. ಎಸ್., (2014), ಭಾರತದ ಬೇಸಾಯಗಾರರೆಲ್ಲ ಬೌದ್ಧರು, ಅಭಿಶ್ರುತಿ ಪ್ರಕಾಶನ, ಮೈಸೂರು. ಬಂಧು ಸಿದ್ದೇಶ್ವರಕರ್ ಕೆ. ಎಸ್. (ಸಂ), (2013), ಭೀಮ ಗರ್ಜನೆ (ಕವನ ಸಂಕಲನ), ಸಿದ್ಧಾರ್ಥ ಪ್ರಕಾಶನ, ಗುಲಬರ್ಗಾ. ಚರಣಕುಮಾರ್, (2012), ಅಂಬೇಡ್ಕರ್ ಅವರ ನುಡಿಮುತ್ತುಗಳು, ಅಮ್ಮ ಪ್ರಕಾಶನ, ಮೈಸೂರು. ಜೆ. ಸು. ನಾ., (2007), ಅಂಬೇಡ್ಕರ್ ಮಹಾಶಯ, ಐಬಿಎಚ್ ಪ್ರಕಾಶನ, ಬೆಂಗಳೂರು.

ಅಪ್ಪುಗೆರೆ ಸೋಮಶೇಖರ್, (2015), ಸಾಕ್ಷಿಪ್ರಜ್ಞೆ ದಲಿತತ್ವದ ನೆಲೆಗಳು, ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತ, ಕಲಬುರ್ಗಿ.

ವಿದ್ಯಾಸಾಗರ ಐ. ಎಸ್., (2006), ಅಂಬೇಡ್ಕರ್ ಮತ್ತು ಮಾನವೀಯ ಮೌಲ್ಯಗಳು, ಸುಮೇಧ ಪ್ರಕಾಶನ, ಗುಲಬರ್ಗಾ.

ಶ್ರೀನಿವಾಸಮೂರ್ತಿ ಕಾ. ವೆಂ., ಕುಮಾರ್ ಸಮತಳ, ನಾರಾಯಣ ಕೆ. ಕ್ಯಾಸಂಬಳಿ (ಸಂ), (2011), ಹೋರಾಟದ ನೂರು ಹಾಡುಗಳು, ಕರ್ನಾಟಕ ಜನಶಕ್ತಿ ಪ್ರಕಾಶನ, ಬೆಂಗಳೂರು.

ಹರೀಶ ಜಿ. ಬಿ., (2016), ಎಲ್ಲರಿಗೂ ಬೇಕಾದ ಅಂಬೇಡ್ಕರ್, ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ.

ಲೋಖಂಡೆ ಜಿ. ಎಸ್., ಜಾಕೋಬ್ ಲೋಖಂಡೆ ಸಿ. ಎಚ್. (2014), ಭೀಮರಾವ್ ರಾಮಜೀ ಅಂಬೇಡ್ಕರ್, ಸಪ್ನ ಬುಕ್ ಹೌಸ್, ಬೆಂಗಳೂರು.

ಜಯದೇವಿ ಗಾಯಕವಾಡ, (2006), ಬಸವಣ್ಣ-ಅಂಬೇಡ್ಕರ್, ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ, ಗುಲಬರ್ಗಾ. ಜಯದೇವಿ ಗಾಯಕವಾಡ, (2002), ಪ್ರಾಚೀನ ಬೌದ್ಧ ವಿದ್ಯಾಕೇಂದ್ರ: ಸನ್ನತಿ, ಅಮರ ಪ್ರಕಾಶನ, ಗುಲಬರ್ಗಾ. ಭಾಸ್ಕರ್ ಟಿ. ಎಂ., (2003), ಅಂಬೇಡ್ಕರ್ ವಾದ: ದಲಿತರು, ಮರುಗ ಪ್ರಕಾಶನ, ಗುಲಬರ್ಗಾ.

ಭಾಸ್ಕರ್ ಟಿ. ಎಂ., (2003), ಬುದ್ಧ ಚಿಂತನೆ, ಮರುಗ ಪ್ರಕಾಶನ, ಗುಲಬರ್ಗಾ. ಭಾಸ್ಕರ್ ಟಿ. ಎಂ., (2004) ಮಾತಾಡುವ ಎಲುಬುಗಳು, ಮರುಗ ಪ್ರಕಾಶನ, ಗುಲಬರ್ಗಾ.

ಭಾಸ್ಕರ್ ಟಿ. ಎಂ., (2017), ನೀರು ಬೇಕು ನೀರು, ವಸಂತ ಪ್ರಕಾಶನ, ಬೆಂಗಳೂರು.

Most read articles by the same author(s)