ಕೊಡಗಿನ ಗೌರಮ್ಮ ಅವರ ಕಥೆಗಳಲ್ಲಿ ಸಾಂಪ್ರದಾಯಿಕ ಪದ್ಧತಿಗಳ ಸಂಕೋಲೆ ಮತ್ತು ಬಿಡುಗಡೆಯ ತುಡಿತಗಳು

Main Article Content

ಸೌಂದರ್ಯ ಎಂ.ಎನ್.

Abstract

ನವೋದಯ ಕಾಲದ ಪ್ರಮುಖ ಲೇಖಕಿ ಕೊಡಗಿನ ಗೌರಮ್ಮ ಅವರ ಕಥೆಗಳಲ್ಲಿ ಹೆಣ್ಣುಮಕ್ಕಳು ಎದುರಿಸುವ ಸಾಂಪ್ರದಾಯಿಕ ಕಟ್ಟುಪಾಡುಗಳು ಮತ್ತು ಆ ಸಂಕೋಲೆಗಳಿಂದ ಬಿಡುಗಡೆಯಾಗುವ ತುಡಿತಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ‘ವಾಣಿಯ ಸಮಸ್ಯೆʼ, ‘ಅವಳಭಾಗ್ಯʼ, ‘ಮನುವಿನರಾಣಿʼ, ‘ಆಹುತಿʼ, ‘ಹೋಗಿಯೇ ಬಿಟ್ಟಿದ್ದʼ ಮತ್ತು ‘ಪುನರ್ವಿವಾಹʼ ಕಥೆಗಳ ಮುಖಾಂತರ ಬಾಲ್ಯವಿವಾಹ, ವರದಕ್ಷಿಣೆ, ವಿಧವಾ ಸಮಸ್ಯೆ, ವೇಶ್ಯಾವಾಟಿಕೆ ಹಾಗೂ ಜಾತಿ-ಧರ್ಮದಂತಹ ಸಾಮಾಜಿಕ ಪಿಡುಗುಗಳನ್ನು ಮಾರ್ಮಿಕವಾಗಿ ಅನಾವರಣಗೊಳಿಸಲಾಗಿದೆ. ಪುರುಷಪ್ರಧಾನ ಸಮಾಜದಲ್ಲಿ ನಾನಾ ಬಗೆಯ ಶೋಷಣೆಗೆ ಒಳಗಾದ ಸ್ತ್ರೀಯರು ಅನುಭವಿಸುವ ಮಾನಸಿಕ ತಲ್ಲಣಗಳು ಹಾಗೂ ಸ್ವತಂತ್ರ ಬದುಕಿಗಾಗಿ ಅವರು ನಡೆಸುವ ಹೋರಾಟವನ್ನು ಈ ಅಧ್ಯಯನವು ಕಟ್ಟಿಕೊಡುತ್ತದೆ. ಸ್ತ್ರೀ ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಅತ್ಯಗತ್ಯವನ್ನು ಎತ್ತಿಹಿಡಿಯುವ ಮೂಲಕ, ಸರ್ವರೂ ಸಮಾನರೆಂಬ ಆಶಯವನ್ನು ಇದರಲ್ಲಿ ವ್ಯಕ್ತಪಡಿಸಲಾಗಿದೆ.

Article Details

Section

Research Articles

Author Biography

ಸೌಂದರ್ಯ ಎಂ.ಎನ್.

ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗ, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ, ನಿಟ್ಟೆ ಡೀಮ್ಡ್‌ ಟು. ಬಿ ಯುನಿವರ್ಸಿಟಿ, ಯಲಹಂಕ, ಬೆಂಗಳೂರು.

How to Cite

ಸೌಂದರ್ಯ ಎಂ.ಎನ್. (2026). ಕೊಡಗಿನ ಗೌರಮ್ಮ ಅವರ ಕಥೆಗಳಲ್ಲಿ ಸಾಂಪ್ರದಾಯಿಕ ಪದ್ಧತಿಗಳ ಸಂಕೋಲೆ ಮತ್ತು ಬಿಡುಗಡೆಯ ತುಡಿತಗಳು. ಅಕ್ಷರಸೂರ್ಯ (AKSHARASURYA), 15(01), 102 to 112. https://aksharasurya.com/index.php/latest/article/view/1228

References

ಕಾಳೇಗೌಡ ನಾಗವಾರ (ಸಂ.), (2014), ಕೊಡಗಿನ ಗೌರಮ್ಮ ಬರೆದ ಕಥೆಗಳು, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.

ಶಾಕುಂತಲಾ ಸಿದ್ದರಾಮ ದುರಗಿ, (1999), ಆಧುನಿಕ ಕನ್ನಡದಲ್ಲಿ ಮಹಿಳಾ ಸಾಹಿತ್ಯ, ಗುಲ್ಬರ್ಗ: ಉಜ್ವಲ ಪ್ರಕಾಶನ.

ರಾಧಾಮಣಿ, (2017), ವಾಣಿ ಮತ್ತು ತ್ರಿವೇಣಿಯವರ ಕಾದಂಬರಿಗಳಲ್ಲಿ ವಿವಾಹ ಸಂಸ್ಥೆಯ ಶೋಧ: ಸ್ತ್ರೀವಾದಿ ವಿಶ್ಲೇಷಣೆ, ಮೈಸೂರು: ಕುವೆಂಪು ಕನ್ನಡ ಅಧ್ಯಯನ ಕೇಂದ್ರ, ಮಾನಸ ಗಂಗೋತ್ರಿ.