ವಚನ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆಗಳು
Main Article Content
Abstract
ʼಕಾಯಕವೇ ಕೈಲಾಸʼ ವೆಂದು ಸಾರಿ, ಜನರಲ್ಲಿ ದುಡಿದು ತಿಂದು ಬದುಕುವ ಮಹತ್ವವನ್ನು ತಿಳಿಸಿದ್ದು ವಚನ ಸಾಹಿತ್ಯ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳಲ್ಲಿ ಸ್ತ್ರೀಯರಿಗೆ ಭಾಗವಹಿಸುವ ಸಮಾನ ಅವಕಾಶ ನೀಡುವ ಮೂಲಕ ಮಹಿಳಾ ಸ್ವಾತಂತ್ರ್ಯಕ್ಕೊಂದು ಅರ್ಥವನ್ನು ಕಲ್ಪಿಸಿದರು. ಕಲುಷಿತಗೊಂಡಿದ್ದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ದಿಕ್ಕರಿಸಿ, ಘನ ಬದಲಾವಣೆಯನ್ನು ಗುರಿಯಿಟ್ಟು ನಡೆದ ದಾರ್ಶನಿಕ ಚಳುವಳಿ ವಚನ ಸಾಹಿತ್ಯ. ಸಾಮಾಜಿಕ ಬದಲಾವಣೆಗೆ ಹೊಸ ಭಾಷ್ಯ ಬರೆಯುವ ಮೂಲಕ ಉತ್ತಮ ಸಮಾಜ ವ್ಯವಸ್ಥೆಗೆ ನಿಜವಾದ ಅರ್ಥ ಕಲ್ಪಿಸಿ ಕೊಟ್ಟವರು. ಸಮಾಜದ ಕೀಳುಮಟ್ಟದ ಶೋಷಣೆಯಿಂದಾಗಿಯೇ ಸಮಾಜದಲ್ಲಿ ದುಡಿಯುವ ಮತ್ತು ಕೂತು ಉಣ್ಣುವ ವರ್ಗಗಳು ನಿರ್ಮಾಣವಾಗುವುದಕ್ಕೆ ಕಾರಣವಾಗಿರಬೇಕು, ಸಮಾಜದಲ್ಲಿ ಮೇಲ್ವರ್ಗವೆಂದು ಕರೆಸಿಕೊಂಡ ಜನರು ಸಮಾಜದ ಇತರರನ್ನು ಕೀಳಾಗಿ ಕಾಣುತ್ತಿದ್ದ ಸಂದರ್ಭಗಳು ಶರಣರು ತಮ್ಮ ಚಿಕಿತ್ಸಕ ದೃಷ್ಟಿಯಿಂದ ನೋಡಿದಾಗ ಸಾಮಾಜಿಕ ಅಸಮಾನತೆಯೆಂಬ ಸಾಮಾಜಿಕ ರೋಗಗಳಿಗೆ ಮದ್ದು ಅರೆದದುರ ಪರಿಣಾಮದಿಂದಲೇ ಅವರ ಮನಸ್ಸಿನ ವಿಚಾರಗಳೆಲ್ಲ ವಚನಗಳಾಗಿ ಮಾರ್ಪಟ್ಟವಾಗಿರಬೇಕು. ಅಂದಿನಿಂದಲೇ ಬಸವಣ್ಣನವರ ನೇತೃತ್ವದಲ್ಲಿ ಶರಣರು ಸಾಮಾಜಿಕ ಬದಲಾವಣೆಗೆ ಕ್ರಾಂತಿಕಾರಿ ಹೆಜ್ಜೆ ಇಟ್ಟರೆಂದು ಕಾಣಿಸುತ್ತದೆ. ಅವರ ವಚನಗಳ ಮೂಲಕ ಸಾಮಾಜಿಕ ವ್ಯವಸ್ಥೆಯ ಅಂಕುಡೊಂಕುಗಳನ್ನು ತಿದ್ದಿ, ಸಮ ಸಮಾಜ ವ್ಯವಸ್ಥೆಯನ್ನು ಸರಿಪಡಿಸುವ ಕಾಯಕಕ್ಕೆ ಮುಂದಾದರು. ಒಂದಷ್ಟು ಸಮಾಜ ವ್ಯವಸ್ಥೆಯನ್ನು ಬದಲಿಸಲು ಪಟ್ಟ ಪ್ರಯತ್ನ ಇಂದಿಗೂ ಮುಂದಿಗೂ ಮಾದರಿಯಾಗುವಂತಿದೆ. ಸಮಾಜದ ಬಗೆಗೆ ಅವರಿಗಿದ್ದ ಕಾಳಜಿಯಿಂದಾಗಿಯೇ ಸಮಾಜ ಬದಲಾಣೆ ಕಾಣಲು ಸಾಧ್ಯವಾಯಿತು.
ಕಾಯಕ ಜೀವಿಗಳ ಹೋರಾಟವಾಗಿ ರೂಪುಗೊಂಡ ವಚನ ಚಳವಳಿಯಲ್ಲಿ ಮಹಿಳಾ ಸಮಾನತೆಯ ಆಶಯಗಳು ಸಹಜವಾಗಿಯೇ ಅಡಕವಾಗಿದ್ದವು. ಸಾಮಾಜಿಕ ಸಮಾನತೆ ಆಶಯವೇ ಪ್ರಮುಖವಾದ ವಚನ ಚಳವಳಿ ಮಹಿಳಾ ಸಮಾನತೆಯನ್ನು ಪ್ರತ್ಯೇಕಿಸಿ ನೋಡಲಿಲ್ಲ. ಕ್ರಾಂತಿಯೊಳಗಿನ ಕ್ರಾಂತಿ ಎಂಬಂತೆ ನಡೆಯಿತು. ಪರ್ಯಾಯ ಚಿಂತನೆ, ಪರ್ಯಾಯ ಸಂಸ್ಕೃತಿ ಅಶಯವೂ ಸೇರ್ಪಡೆಗೊಂಡಿತ್ತು, ಶ್ರಮಸಂಸ್ಕೃತಿ ರೂಪುಗೊಳ್ಳುವುದು ಹೆಣ್ಣಿನ ಶ್ರಮದಿಂದ ಎಂದು 12ನೇ ಶತಮಾತನದ ವಚನಕಾರ್ತಿಯರು ಪ್ರತಿಪಾದಿಸಿದ್ದರು. ಹೀಗಾಗಿ ವಚನ ಚಳವಳಿಯಲ್ಲಿ ಮಹಿಳಾ ಸಮಾನತೆ ಅಂತರ್ಗತವಾಗಿತ್ತು. ಹೀಗಾಗಿಯೇ ವಚನಗಳಲ್ಲಿ ಮಹಿಳಾ ಸಮಾನತೆಯ ಆಶಯ ಚಳವಳಿಯ ಜತೆಜತೆಗೇ ಸಾಗಿತು. ಅಗ್ರಹಾರ ಶ್ರೇಷ್ಠ ಎನ್ನುವ ಸಂದರ್ಭದಲ್ಲೇ ಕಾಯಕ ಶ್ರೇಷ್ಠ ಎನ್ನುವ ಸಾಮಾಜಿಕ ಸಮಾನತೆಯ ಆಶಯವನ್ನು ವಚನ ಚಳವಳಿ ಪ್ರಕಟಿಸಿತು ಅರಮನೆ, ದೇವಾಲಯ ಸಂಸ್ಕೃತಿಗಳನ್ನು ವಚನ ಚಳವಳಿ ವಿರೋಧಿಸಿತು. ದೇವರು, ಅರಮನೆ, ಧರ್ಮದ ಸಂಕೋಲೆಯಿಂದ ಬಿಡಿಸಿ ಅಸಮಾನತೆಯನ್ನು ಹೋಗಲಾಡಿಸಲು ಪ್ರಯತ್ನ ಮಾಡಿದರು.
ಭಾರತೀಯ ಸಾಹಿತ್ಯದಲ್ಲಷ್ಟೇ ಅಲ್ಲದೆ ಜಾಗತಿಕ ಸಾಹಿತ್ಯದಲ್ಲಿ ವಚನಕಾರರ ಧ್ವನಿ ವಿಶಿಷ್ಟ ವಿಸ್ತರವಾದುದು ತಾವು ತುಳಿದು ಬಂದ ತಾತ್ವಿಕ ಪರಂಪರೆಯನ್ನೇ ವಿಮರ್ಶಿಸಿ ವಿರೋಧಿಸಿ ಹೊಸ ತಾತ್ವಿಕ ಪರಂಪರೆಯನ್ನು ನಿರ್ಮಿಸಲು/ಕಟ್ಟಲು ಯತ್ನಿಸಿದರು ʼನಾ ಭೂತೋ ನಾ ಭವಿಷ್ಯತಿʼ ಎನ್ನುವಂತಹ ಕ್ರಾಂತಿಕಾರಿ ಚಿಂತನಧಾರೆ ಒಂದನ್ನು ನಿರ್ಮಿಸಿಕೊಟ್ಟರು ʼಮರ್ತ್ಯ ಲೋಕವೆಂಬುದು ಕರ್ತಾರನ ಕಮ್ಮಟವಯ್ಯʼ ಎಂಬುದನ್ನು ಮಹಾಮಂಟಪ ಅನುಭವಮಂಟಪ ವಾಗಿಸಿಕೊಂಡವರು ಹಿಂದಿನ ಪರಂಪರೆಗಳು ʼಎಲ್ಲೂ ಸಲ್ಲದʼವರನ್ನಾಗಿಸಿದವರನ್ನು, ಇಲ್ಲಿಯೂ ಎಲ್ಲೆಲ್ಲಿಯೂ ಸಲ್ಲುವಂತೆ ಮಾಡಿದರು. ಅವರು ವಿಶ್ವ ಶಿವಶರಣ ದೊಳಗೆ ʼವಿಶ್ವಮಾನವʼರನ್ನಾಗಿ ರೂಪಿಸಿದರು ಸಮಸ್ತ ಜೀವ ರಾಶಿಯಲ್ಲೂ ದೈವಿಪ್ರಭೆ ಹುಡುಕಲು ಯತ್ನಿಸಿದ ಉಪನಿಷತ್ತುಗಳಲ್ಲಿನ ಬೋಧನೆಗಳು ಕಟ್ಟಕಡೆಯ ಮಾನವರನ್ನು ತಲುಪದೆ ಅವರು ತಿರಸ್ಕೃತರಾದದುಕ್ಕೆ ಕಾರಣವಾದ ತಂತು ಯಾವುದು? ಸಂಕುಚಿತ ಆಚಾರಗಳು ಕ್ಷುದ್ರ ಚಿಂತನೆಗಳು, ಧರ್ಮದ ಹೆಸರಲ್ಲಿ ಹೇಗೆ ನುಸುಳಿದವು? ಅರಮನೆಗಳು ಗುರುಮನೆಗಳಾಗದೆ ಉಳಿಯಲು ಕಾರಣವೇನು? ಧರ್ಮ ದಯೆ ಇಲ್ಲದಂತೆ ಆಗಲು ಕಾರಣವಾದ ಅಧರ್ಮದ ತಿರುಳಾವುದು? ಮುಂತಾದ ಮುಖ್ಯ ಪ್ರಶ್ನೆಗಳನ್ನು ಚಿಕಿತ್ಸಕ ದೃಷ್ಟಿಯಿಂದ ಎತ್ತಿದ್ದಷ್ಟೇ ಅಲ್ಲದೆ ಸಾಮಾಜಿಕ ಚಿಕಿತ್ಸೆಗಳನ್ನೂ ಮಾಡಲತ್ನಿಸಿದವರು ವಚನಕಾರರು ಇವರ ಸಾಮಾಜಿಕ ಚಿಂತನ ಕ್ರಮಗಳು ಅಗ್ರಗಣ್ಯವೆನಿಸಿವೆ.
ವಚನ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆಗಳು ಎಂಬ ಈ ಲೇಖನವನ್ನು ಈ ಕೆಳಗಿನ ಪ್ರಮುಖ ಮುಖ್ಯಾಂಶಗಳಲ್ಲಿ ವಿಸ್ತರಿಸಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ತಿಪ್ಪೇರುದ್ರಸ್ವಾಮಿ ಹೆಚ್., (2019), ಶರಣರ ಅನುಭಾವ ಸಾಹಿತ್ಯ, ಡಿವಿಕೆ ಮೂರ್ತಿ ಪ್ರಕಾಶನ, ಮೈಸೂರು.
ಶ್ರೀನಿವಾಸಮೂರ್ತಿ ಎಂ.ಆರ್., (1968), ವಚನ ಧರ್ಮಸಾರ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
ಮಾಧವ ಎಂ.ಕೆ., (2024), ಬಸವಣ್ಣನ ವಚನಗಳಲ್ಲಿ ಸಮ ಸಮಾಜದ ಪ್ರಸ್ತುತತೆ, ಅಕ್ಷರಸೂರ್ಯ (AKSHARASURYA), 4(02), 27 to 32.