ಮೊದಲನೇ ತಲೆಮಾರಿನ ಸವಾಲುಗಳು: ಕರೋನಾ ಹಿನ್ನೆಲೆಯಲ್ಲಿ

Main Article Content

ನರಸಿಂಹಪ್ಪ ಜೆ.

Abstract

ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಪ್ರಮುಖ ಆಶಯವೇ ಅಸಮಾನತೆ ನಿವಾರಿಸಿ ಎಲ್ಲರಿಗೂ ಸಾಮಾಜಿಕ ಆರ್ಥಿಕ ರಾಜಕೀಯ ಪ್ರಕ್ರಿಯೆಗಳಲ್ಲಿ ಸಮಾನ ಅವಕಾಶ ಒದಗಿಸುವುದು. ಹೀಗಾಗಿ ಕರೋನಾ ತಂದ ಬಿಕ್ಕಟ್ಟುಗಳನ್ನು ವಿವಿದ ಆಯಾಮಗಳನ್ನು ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ಚರ್ಚಿಸುವ ಅಗತ್ಯವಿದೆ. ಕರೋನಾ ಸನ್ನಿವೇಶದಲ್ಲಿ ಶ್ರೀಸಾಮಾನ್ಯರ ಹಕ್ಕುಗಳನ್ನು ಮರೆಮಾಚಲಾಗುತ್ತಿದೆ. ಈ ಸಾಂಕ್ರಾಮಿಕವು ಹರಡುವಲ್ಲಿ ಯಾವುದೇ ಆರ್ಥಿಕ ತಾರತಮ್ಯ ಮಾಡುತ್ತಿಲ್ಲ ಆದರೆ, ಇದರಿಂದ ಮುಕ್ತಿ ಪಡೆಯಲು ದೊರೆಯುವ ಆರೋಗ್ಯ ಸೌಲಭ್ಯಗಳು ಶ್ರೇಣಿಕೃತವಾಗಿವೆ. ಈ ಮೂಲಕ ಸಮ ಸಮಾಜವನ್ನು ನಿರ್ಮಾಣ ಮಾಡಲು ಬೇಕಾಗುವ ಪರಿಭಾಷೆಗಳ ಮುಖಾಂತರ ಅರ್ಥೈಸಿಕೊಳ್ಳುವ ಜರೂರು ಇದೆ. ಕೇಂದ್ರದಿಂದ ಅಂಚೆಗೆ ತಳ್ಳಲ್ಪಟ್ಟ ಶೋಷಿತ ಸಮುದಾಯಗಳ ಸವಾಲುಗಳನ್ನು ಮರು ಚಿಂತನೆಗೆ ಒಳಪಡಿಸಲಾಗಿದೆ. 

Article Details

Section

Research Articles

Author Biography

ನರಸಿಂಹಪ್ಪ ಜೆ.

ಸಂಶೋಧನಾ ವಿದ್ಯಾರ್ಥಿ, ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

References

ಡೊಮಿನಿಕ್ ಡಿ. & ರಾಜು ಬಿ.ಎಲ್. (ಸಂ.), (2017), ದಲಿತ ನೋಟ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ರಾಜಾರಾಮ್ ತಲ್ಲೂರು, (2022), ಕರಿಡಬ್ಬಿ, ಸಂಕಥನ ಪ್ರಕಾಶನ, ಮಂಡ್ಯ.

ಮಣಿ ಎಂ.ಎಸ್., (2022), ಸುಡು ಬಯಲ, ಐ.ಎಚ್.ಎಸ್. ಪ್ರಕಾಶನ, ಬೆಂಗಳೂರು.

ಪ್ರಭಾಕರ ಎ.ಎಸ್., (2021), ಚಹರೆಗಳೆಂದರೆ ಗಾಯಗಳು ಹೌದು, ಗೌರಿ ಮೀಡಿಯಾ ಟ್ರಸ್ಟ್ ಪ್ರಕಾಶನ, ಬೆಂಗಳೂರು.

ನಾರಾಯಣ ಕೆ.ವಿ., (2018), ನುಡಿಗಳ ಅಳಿವು, ಅಹರ್ನಿಶಿ ಪ್ರಕಾಶನ, ಶಿವಮೊಗ್ಗ.

ನಾರಾಯಣ ಕೆ.ವಿ., (2018), ಕನ್ನಡ ಜಗತ್ತು ಅರ್ಧ ಶತಮಾನ, ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಚಲಪತಿ ಆರ್., (2020), ಕಲಿಕೆಯಲ್ಲಿ ಕನ್ನಡ ಬಳಕೆಯ ಬಿಕ್ಕಟ್ಟುಗಳು, ಗಗನ ಪ್ರಕಾಶನ, ಮೈಸೂರು.