ದೇಸಿ ಸಾಹಿತ್ಯ ಸಂಪಾದನೆಯಲ್ಲಿ ವೈ.ಸಿ. ಭಾನುಮತಿ ಅವರ ಹೆಜ್ಜೆ ಗುರುತು

Main Article Content

ಮಾನಸ ಎಂ.

Abstract

ವೈ.ಸಿ. ಭಾನುಮತಿ ಅವರು ಹಸ್ತಪ್ರತಿ ಗ್ರಂಥ ಸಂಪಾದನಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಇವರ ಕೃತಿಗಳ ಮೂಲಕ ಅವಲೋಕಿಸಲಾಗಿದೆ. ಹಸ್ತಪ್ರತಿ ಹಾಗೂ ಗ್ರಂಥ ಸಂಪಾದನಾ ಕ್ಷೇತ್ರವು ಶ್ರಮದಾಯಕವಾಗಿರುವಂತಹದ್ದು, ಈ ಶ್ರಮದಾಯಕ ಕ್ಷೇತ್ರವನ್ನು ವೃತ್ತಿಯಾಗಿ ಸ್ವೀಕರಿಸಿ, ಅನೇಕ ಗ್ರಂಥ ಸಂಪಾದಕ ವಿದ್ವಾಂಸರ ಹಾದಿಯಲ್ಲಿ ವೈ.ಸಿ. ಭಾನುಮತಿಯವರು ಸಹ ಪ್ರಮುಖರಾಗಿರುತ್ತಾರೆ. ಭಾನುಮತಿ ಅವರು ಇದುವರೆಗೂ ಹಲವಾರು ಪ್ರಾಚೀನ ಹಳೆಗನ್ನಡ ಕೃತಿಗಳನ್ನು ಸಂಪಾದಿಸಿ, ಪರಿಷ್ಕರಿಸಿ ಪ್ರಕಟಿಸಿದ್ದಾರೆ. ಇವರ ಕೃತಿಗಳನ್ನು ಮಾರ್ಗ-ದೇಶಿ-ಮೌಖಿಕ ಎಂದು ವಿಭಾಗಿಸಿಕೊಂಡು ಆಯ್ದ ಕೆಲವು ಕೃತಿಗಳ ಸಂಪಾದನೆ, ವೈಧಾನಿಕತೆಯ ಕುರಿತು ಪ್ರಸ್ತುತ ಬರಹದಲ್ಲಿ ನೀಡಲಾಗಿದೆ. ಇವರ ಮಾರ್ಗ-ದೇಶಿ ಕೃತಿಗಳ ಸಂಪಾದನೆಯಲ್ಲಿ ಕನ್ನಡನಾಡಿನ ಚರಿತ್ರೆ ತಿಳಿಯುವಂತಹ ಚಾರಿತ್ರಿಕ ಅಂಶಗಳು, ಸಾಮಾಜಿಕ, ಆರ್ಥಿಕ ಮತ್ತು ಕೃತಿಗೆ ಸಂಬಂಧಿಸಿದ ಪೂರಕ ಸಾಹಿತ್ಯವನ್ನು ಅನುಬಂಧದಲ್ಲಿ ದಾಖಲಿಸಿರುವುದು, ಭಾನುಮತಿ ಅವರ ಸಂಪಾದನೆಯ ವೈಶಿಷ್ಟವಾಗಿದೆ. ಇದರಿಂದ ಓದುಗರಿಗೆ ವೈ.ಸಿ. ಭಾನುಮತಿ ಅವರು ಗ್ರಂಥ ಸಂಪಾದನಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯು ಇವರ ಸಂಪಾದಿತ ಕೃತಿಗಳಿಂದ ಸಂದ ಪ್ರಶಸ್ತಿಗಳಿಂದ ಇವರ ಸಂಪಾದನೆಯ ಮಹತ್ವ ತಿಳಿಯುತ್ತದೆ. 

Article Details

Section

Essay

Author Biography

ಮಾನಸ ಎಂ.

ಹಲಗೇರಿ, ಕೊಪ್ಪಳ ತಾಲ್ಲೂಕು, ಕೊಪ್ಪಳ ಜಿಲ್ಲೆ.

References

ಹಳ್ಳಿಕೇರಿ ಎಫ್. ಟಿ. (೨೦೧೮). ಹಸ್ತಪ್ರತಿ ವ್ಯಾಸಂಗ-೧೭. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.

ಭಾನುಮತಿ ವೈ. ಸಿ. (೧೯೭೬). ಪುರಾತನ ಚರಿತೆ. ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.

ಭಾನುಮತಿ ವೈ. ಸಿ. (೧೯೮೪). ಸಹ್ಯಾದ್ರಿಖಂಡ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.

ಭಾನುಮತಿ ವೈ. ಸಿ. (೨೦೦೯). ಅರಸರ ಚರಿತ್ರೆಗಳು. ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ. ಬೆಂಗಳೂರು.

ಭಾನುಮತಿ ವೈ. ಸಿ. (೧೯೮೯). ಬತ್ತೀಸಪುತ್ಥಳಿ ಕಥೆ. ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.

ಭಾನುಮತಿ ವೈ. ಸಿ. (೨೦೦೬). ಸಿದ್ಧಲಿಂಗ ಕಾವ್ಯ ಮತ್ತು ಮಹಾಕೂಟ ಮಹಾತ್ಮೆ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.

ಭಾನುಮತಿ ವೈ. ಸಿ. (೧೯೯೬). ಸೌಂದರ್ಯಕಾವ್ಯ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.