ಅಲ್ಲಮನ ವಚನದ ವಿವೇಚನೆ
Main Article Content
Abstract
ಅಲ್ಲಮ ಈ ವಚನದಲ್ಲಿ ಮುಸುರೆ ಹಾಗು ನೊಣವನ್ನು ಉಪಮೆ ನೀಡುವುದರ ಮೂಲಕ ವಿಷಯಾಸೆಗಳನ್ನು ಮುಸುರೆಯೆಂದು ಸಾಮಾನ್ಯ ಮನುಷ್ಯನ ಮನಸ್ಸನ್ನು ನೊಣವೆಂದು ಹೇಳಿದ್ದಾನೆ.
ಮುಸುರೆ ಅಲ್ಪಾವಧಿಯದ್ದಾಗಿದ್ದು ಸ್ವಲ್ಪ ಸಮಯದ ಅನಂತರ ಕೊಳೆತು ನಾರುತ್ತದೆ ಅಂತೆಯೇ ವಿಷಯಾಸಕ್ತಿಗಳು ಆ ಕ್ಷಣಕ್ಕೆ ಸಂತಸವನ್ನು ತಂದು ಕೊಟ್ಟರೂ ದೀರ್ಘಾವಧಿಯಲ್ಲಿ ತನ್ನ ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳುತ್ತಾ, ಚಿತ್ತ ವಿಕೃತಿಗೆ ಒಳಗಾಗುವುದಲ್ಲದೆ ಅವನು ತನ್ನ ವ್ಯಕ್ತಿತ್ವ ನಾರುವಂತೆ ಮಾಡಿಕೊಳ್ಳುತ್ತಾನೆ. ಇನ್ನು ಮತ್ತೊಂದು ಆಯಾಮವನ್ನು ನೋಡುವುದಾದರೆ ಮುಸುರೆಯ ಮಡಕೆ ಮನುಷ್ಯನ ಲೋಭತನದ ಕ್ರೋಢೀಕರಣ ಇದು ಆರೋಗ್ಯಕರ ಸಮಾಜಕ್ಕೆ ಮಾರಕವಾಗುತ್ತದೆ. ನೊಣ ಈ ಕ್ರೋಢೀಕರಣವನ್ನು ಹರಡುವ ಸಾಂಕ್ರಾಮಿಕ ರೋಗದ ಮನೋಭಾವದಂತೆ ಕಾಣುತ್ತದೆ.
ನೊಣದ ಸ್ವಭಾವದಲ್ಲಿನ ಚಂಚಲತೆ, ಪಶುವಿನಲ್ಲಿರುವ ಅಲ್ಪಮತಿ ಸಾಮಾನ್ಯ ಮನುಷ್ಯನಲ್ಲಿ ಪ್ರಚೋದಿತವಾಗುತ್ತಿರುತ್ತದೆ. ವಚನದ ಕೊನೆಯ ಸಾಲಿನಲ್ಲಿ ಅಲ್ಲಮನು ಆಧ್ಯಾತ್ಮ ಚಿಂತನೆಯ ಗುರು (ಭಗವಂತ/ಗುಹೆಶ್ವರ) ನಿಮ್ಮ ಶರಣರು ಈ ಪ್ರಚೋದನೆಗೆ ಒಳಗಾಗದ ಹಂತವನ್ನು ತಲುಪಿ ಆಶಾಪಾಶವಿರಹಿತರಾಗಿದ್ದಾರೆ ಎನ್ನುತ್ತಾನೆ. ಅಂದರೆ ಅಲ್ಲಮನು ‘ಶರಣತ್ವ’ ಎಂಬುದು ಮನುಷ್ಯ ಜನಾಂಗದ ಔನತ್ಯದ ಹಂತ ಎಂದು ಹೇಳುವಂತಿದೆ. ಶರಣರ ಚಿಂತನೆ ಮನುಷ್ಯ ಜನಾಂಗದ ಮುಂದುವರೆದ ಹಂತ ಎಂದು ಪ್ರತಿಪಾದಿಸುವ ದೃಷ್ಟಿಯನ್ನ ಗ್ರಹಿಸಬಹುದಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಬಸವರಾಜು ಎಲ್. (ಸಂ). (1960). ಅಲ್ಲಮನ ವಚನ ಚಂದ್ರಿಕೆ. ನಳಿನಿಶಂಕರ ಪ್ರಕಾಶನ. ಮೈಸೂರು.
ಕಲಬುರ್ಗಿ ಎಂ. ಎಂ. (ಪ್ರ.ಸಂ). (2001). ಸಮಗ್ರ ವಚನ ಸಂಪುಟಗಳು. ಕನ್ನಡ ಪುಸ್ತಕ ಪ್ರಾಧಿಕಾರ. ಬೆಂಗಳೂರು.
ಲಕ್ಕಣ್ಣ ದಂಡೇಶ. ಪಂಡಿತ ಎಸ್. ಬಸಪ್ಪ (ಸಂ). (1990). ಶಿವತತ್ವ ಚಿಂತಾಮಣಿ. ಪ್ರಾಚ್ಯವಸ್ತು ಸಂಶೋಧನಾಲಯ. ಮೈಸೂರು ವಿಶ್ವವಿದ್ಯಾಲಯ. ಮೈಸೂರು.
ಹಳಕಟ್ಟಿ ಫ. ಘು. (1923). ವಚನಶಾಸ್ತ್ರ ಸಾರ-1. ವೀರಶೈವ ಅಧ್ಯಯನ ಸಂಸ್ಥೆ, ಜೆ.ಟಿ.ಮಠ. ಗದಗ.
ಕಲಬುರ್ಗಿ ಎಂ. ಎಂ. (1970). ಶಾಸನಗಳಲ್ಲಿ ಶಿವಶರಣರು. ವೀರಶೈವ ಅಧ್ಯಯನ ಸಂಸ್ಥೆ , ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ. ಗದಗ.