ತತ್ವಪದಕಾರ ಲಿಂಗಯ್ಯನವರ ತತ್ವಪದಗಳ ಜೀವಾಳ
Main Article Content
Abstract
ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಹಾಗೂ ವೇದ ಉಪನಿಷತ್ತುಗಳಿಂದ ಪ್ರಭಾವಿತರಾದ ಲಿಂಗಯ್ಯನವರು ತತ್ವಪದಕಾರರಾಗಿ, ವೇದಾಂತಿಗಳಾಗಿ, ಒಬ್ಬ ಆದರ್ಶ ಶಿಕ್ಷಕರಾಗಿ, ಕವಿಗಳಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಆಧ್ಯಾತ್ಮಿಕ ಕಥೆಗಳು, ನಾಟಕ, ಜೀವನ ಚರಿತ್ರೆ, ಸಾವಿರಾರು ತತ್ವಪದಗಳನ್ನು ಬರೆದು, ಸಾಮಾಜಿಕ ವ್ಯವಸ್ಥೆಯಲ್ಲಿ ಬಡವರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಹೋರಾಟವನ್ನು ಮಾಡುವುದರ ಮೂಲಕ ಜನರಲ್ಲಿ, ಶಾಂತಿ ಸಾಮರಸ್ಯದ ಬೆಳಕನ್ನು ಚೆಲ್ಲವುದರ ಕಡೆಗೆ ಮುಖ ಮಾಡಿ ಚಲಿಸಿದ್ದೆ ಅಪಾರ. ವೈದಿಕರನ್ನು ಮತ್ತು ವೈದಿಕತೆಯನ್ನು ತನ್ನ ಅಂತರಂಗದಿಂದಲೇ ಗ್ರಹಿಸಿ, ಅವರ ಆಚರಣೆಗಳನ್ನು ಪ್ರಶ್ನಿಸಿ, ಅವರು ತಮ್ಮ ತತ್ವಪದಗಳಲ್ಲಿ ವಿಶ್ಲೇಷಿಸಿರುವುದು ಗಮನಾರ್ಹ. ಹಾಗೆಯೇ ಸಮಾಜದಲ್ಲಿ ಅನೇಕ ರೀತಿಯ ಆಚರಣೆಗಳಲ್ಲಿ ಜಾತಿ, ಮತ, ಮಡಿ-ಮೈಲಿಗೆ ಎಂಬಂತಹ ಆಚರಣೆಗಳನ್ನು ಕುರಿತು ಲಿಂಗಯ್ಯನವರು ಕಟುವಾಗಿ ಟೀಕಿಸಿದ್ದಾರೆ ಹಾಗೂ ಬಡತನದ ಬಗ್ಗೆ ಅವರಿಗೆ ಇದ್ದ ನಿಲುವುಗಳನ್ನು ತತ್ವಪದಗಳಲ್ಲಿ ವಿಮರ್ಶಿಸಿದ್ದಾರೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
Jjæ¸Áé«Ä ಎನ್. ಟಿ. (2016). ಅಡವಿ ಬೆಳದಿಂಗಳು. ಗೀತಾಂಜಲಿ ಪುಸ್ತಕ ಪ್ರಕಾಶನ. ಶಿವಮೊಗ್ಗ.
ನಟರಾಜ್ ಬೂದಾಳು ಎಸ್. (ಸಂ). (2017). ತುರುವನೂರು ಲಿಂಗಾರ್ಯರ ತತ್ವಪದಗಳು: ಭಾಗ-1. ಕನ್ನಡ ಪುಸ್ತಕ ಪ್ರಾಧಿಕಾರ. ಬೆಂಗಳೂರು.
ನಟರಾಜ್ ಬೂದಾಳು ಎಸ್. (ಸಂ). (2017). ತುರುವನೂರು ಲಿಂಗಾರ್ಯರ ತತ್ವಪದಗಳು: ಭಾಗ-2. ಕನ್ನಡ ಪುಸ್ತಕ ಪ್ರಾಧಿಕಾರ. ಬೆಂಗಳೂರು.
ಹಳ್ಳಿಕೇರಿ ಎಫ್. ಟಿ. (2019). ಹಾಲುಮತ ಸಂಸ್ಕೃತಿ: 2. ಯಾಜಿ ಪ್ರಕಾಶನ. ಹೊಸಪೇಟೆ.