ನಿರಂಜನ ‘ವಿಮೋಚನೆ’ ಕಾದಂಬರಿ: ನಗರ ಬದುಕಿನ ವಾಸ್ತವ ಚಿತ್ರಣದ ಜೀವನ ವೃತ್ತಾಂತದ ಅನಾವರಣ
Main Article Content
Abstract
ಮಾರ್ಕ್ಸ್ವಾದಿ ಸಿದ್ಧಾಂತದಿಂದ ಪ್ರಭಾವಿತರಾದ ನಿರಂಜನರು ವೈಚಾರಿಕ ಚಿಂತನೆಯುಳ್ಳವರಾಗಿದ್ದರು. ಅವರ ಮೊದಲ ಕಾದಂಬರಿಯಾದ ‘ವಿಮೋಚನೆ’ಯೂ ವರ್ತಮಾನದಲ್ಲಿ ನಿಂತು ಭೂತವನ್ನು ಕೆಣಕುತ್ತಾ ಹೋಗುವ ನಿರೂಪಣಾ ತಂತ್ರಗಾರಿಕೆಯ ಮೂಲಕ ಕಾದಂಬರಿಯ ಉದ್ದಕ್ಕೂ ನೀತಿಯಿಂದ ಕೂಡಿದ ಸಾಮಾಜಿಕ ವ್ಯವಸ್ಥೆಯನ್ನು ವ್ಯಂಗ್ಯಭರಿತ ದಾಟಿಯಲ್ಲಿ ಕುಟುಕಿದ್ದಾರೆ. ಬಾಲ್ಯದಿಂದಲೂ ಕಡುಬಡತನದ ಬದುಕು ನಡೆಸಿದ್ದ ಕಥಾನಾಯಕ ಚಂದ್ರಶೇಖರನಿಗೆ ತನ್ನ ಬದುಕಿನಲ್ಲಿ ಉಂಟಾದ ದುರ್ಘಟನೆಗಳು ದೊಡ್ಡ ಹೊಡೆತವನ್ನು ನೀಡುತ್ತವೆ. ಅವನು ಇಟ್ಟ ಪ್ರೀತಿ, ವಿಶ್ವಾಸ, ನಂಬಿಕೆಗಳೇ ಅವನಿಗೆ ಮುಳುವಾಗಿ ಸಾಮಾಜಿಕ ವ್ಯವಸ್ಥೆ ಅವನ ಬಡತನವನ್ನು ತನ್ನ ಲಾಭಕ್ಕಾಗಿ ಬಳಸಿಕೊಂಡು ಅವನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ಜೈಲು ಶಿಕ್ಷೆಗೆ ಒಳಗಾದ ಚಂದ್ರಶೇಖರ ತಾನು ನಿರಪರಾಧಿ ಎಂದು ಸಮಾಜಕ್ಕೆ ತಿಳಿಸಲು ಬರವಣಿಗೆಯ ಮಾರ್ಗವನ್ನು ಆಯ್ಕೆ ಮಾಡಿಕೊಂಡು ತನ್ನ ‘ಆತ್ಮಕಥೆ’ಯನ್ನು ಬರೆಯುವ ಮೂಲಕ ಜನತಾ ನ್ಯಾಯಾಲಯದಲ್ಲಿ ಕಳಂಕ ರಹಿತ ವ್ಯಕ್ತಿಯೆಂದು ‘ವಿಮೋಚನೆ’ ಪಡೆಯುವ ಹಂಬಲವನ್ನು ವ್ಯಕ್ತಪಡಿಸುತ್ತಾನೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ನಿರಂಜನ. (1954). ವಿಮೋಚನೆ. ವಾಹಿನಿ ಪ್ರಕಾಶನ. ಬೆಂಗಳೂರು.