ಯಾಜ್ಞಸೇನಿಯ ಆತ್ಮಕಥನ: ದಲಿತತ್ವದ ನೆಲೆಗಳು
Main Article Content
Abstract
ದಲಿತರು ಎಂದರೆ ಶೋಷಿತರು ಎನ್ನುವುದು ಕೇವಲ ಹಾಳೆಗಳಲ್ಲಿ, ಅಕ್ಷರ ರೂಪದಲ್ಲಿ ಮಾತ್ರ ಉಳಿದುಕೊಂಡಿದೆ. ಸಮಾಜದಲ್ಲಿ ಅದು ರೂಢಿಗೆ ಬಂದೇ ಇಲ್ಲ. ದಲಿತ ಎಂದರೆ ಕೇವಲ ಜಾತಿ ಸೂಚಕ ಪದವಾಗಿ ಮಾತ್ರ ಬಳಕೆಯಲ್ಲಿದೆ. ಎಲ್ಲಾ ವಿದ್ವಾಂಸರ ಹೇಳಿಕೆ ಗಳನ್ನು ಆಧಾರವಾಗಿಟ್ಟುಕೊಂಡು, ಯಾವುದೇ ವರ್ಗದ ಶೋಷಿತ ಮಹಿಳೆಯನ್ನು ದಲಿತ ಮಹಿಳೆ ಎಂದು ಗುರುತಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿಯೇ ಮಹಾಭಾರತದಲ್ಲಿ ಮುಖ್ಯ ಪಾತ್ರವಾಗಿ ಕಾಣುವ ದ್ರೌಪದಿಯು ಮಾನಸಿಕವಾಗಿ, ಕೆಲವೊಮ್ಮೆ ದೈಹಿಕವಾಗಿ ನಿರಂತರವಾಗಿ ಶೋಷಣೆಗೆ ಒಳಗಾಗಿದ್ದಾಳೆ. ಆದ್ದರಿಂದಲೇ ಈ ಲೇಖನದಲ್ಲಿ ಯಾಜ್ಞಸೇನೆಯನ್ನು ದಲಿತ ಸ್ತ್ರೀ ಎಂದು, ಅವಳ ಪ್ರಜ್ಞಾಪೂರ್ವಕವಾದ ವ್ಯವಸ್ಥೆಯ ವಿರುದ್ಧವಾದ ಧ್ವನಿಯನ್ನು ದಲಿತತ್ವದ ಧ್ವನಿಯಾಗಿ ಗುರುತಿಕೊಂಡು ಈ ಲೇಖನದಲ್ಲಿ ಚರ್ಚಿಸಿಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ವಿಜಯಕುಮಾರ ಬಿ. ಬೀಳಗಿ. (2018). ದಲಿತ ಸಂವೇದನೆಯ ಲೇಖಕಿ ಡಾ.ಜಯದೇವಿ ಗಾಯಕವಾಡ. ಶರಣ ಉರಿಲಿಂಗ ಪೆದ್ದಿ ಮಠ ಟ್ರಸ್ಟ್ [ರಿ]. ಬೀದರ.
ಸಿದ್ಧಲಿಂಗಯ್ಯ. (2009). ಉರಿಕಂಡಾಯ. ಅಂಕಿತ ಪುಸ್ತಕ. ಬೆಂಗಳೂರು.
ಹಿರೇಮಠ ಎಸ್. ಎಸ್. (2018). ದಲಿತ ಸಂಸ್ಕೃತಿ. ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ.
ನಾಗಮಣಿ ಜಿ. (2019). ದಲಿತ ಮಹಿಳಾ ಚಳುವಳಿಯ ಅಧ್ಯಯನ. ಕರ್ನಾಟಕ ಸಾಹಿತ್ಯ ಅಕಾಡೆಮಿ. ಬೆಂಗಳೂರು.
ಅರವಿಂದ ಮಾಲಗತ್ತಿ. (2014). ಸಾಹಿತ್ಯ ಸಂಸ್ಕೃತಿ ಮತ್ತು ದಲಿತ ಪ್ರಜ್ಞೆ. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.