ಬೆಂಗಳೂರು ನಗರದಲ್ಲಿ ನಗರ ತ್ಯಾಜ್ಯ ನಿರ್ವಹಣಾ ನೀತಿಗಳು ಮತ್ತು ನಾಗರಿಕರ ಭಾಗವಹಿಸುವಿಕೆ: ಒಂದು ವಿಶ್ಲೇಷಣೆ

Main Article Content

ಚಂದ್ರಪ್ಪ ಎಸ್.ಹೆಚ್.
ಅಶೋಕ್‌ಕುಮಾರ್ ವೀ. ಪಾಳೇದ

Abstract

ವೇಗದ ನಗರೀಕರಣ ಮತ್ತು ಜನಸಂಖ್ಯೆಯ ಬೆಳವಣಿಗೆಯು ಭಾರತದ ಮಹಾನಗರಗಳಲ್ಲಿ ಘನತ್ಯಾಜ್ಯ ನಿರ್ವಹಣೆಯ ಸವಾಲನ್ನು ತೀವ್ರಗೊಳಿಸಿದೆ. ಭಾರತದ ‘ಸಿಲಿಕಾನ್ ವ್ಯಾಲಿ’ ಎಂದು ಕರೆಯಲ್ಪಡುವ ಬೆಂಗಳೂರು, ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಈ ನಗರೀಕರಣದ ಜೊತೆಗೆ, ತ್ಯಾಜ್ಯ ನಿರ್ವಹಣೆಯು ಒಂದು ಗಂಭೀರ ಸವಾಲಾಗಿ ಪರಿಣಮಿಸಿದೆ. ಪ್ರತಿದಿನ ಗಣನೀಯ ಪ್ರಮಾಣದ ಘನತ್ಯಾಜ್ಯವನ್ನು ಉತ್ಪಾದಿಸುತ್ತಿದೆ, ಈ ಸಂಶೋಧನಾ ಲೇಖನವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಳವಡಿಸಿಕೊಂಡಿರುವ ತ್ಯಾಜ್ಯ ನಿರ್ವಹಣಾ ನೀತಿಗಳು ಮತ್ತು ಈ ಪ್ರಕ್ರಿಯೆಯಲ್ಲಿ ನಾಗರಿಕರ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಯ ಮಹತ್ವವನ್ನು ಪರಿಶೀಲಿಸುತ್ತದೆ. “ಕಸದ ನಗರ” ಎಂಬ ಹಣೆಪಟ್ಟಿಯನ್ನು ಕಳಚಲು ನ್ಯಾಯಾಲಯದ ಆದೇಶಗಳು, “2 ಬಿನ್ 1 ಬ್ಯಾಗ್” ನಂತಹ ನೀತಿಗಳು ಮತ್ತು ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪಾತ್ರವನ್ನು ಈ ಅಧ್ಯಯನವು ಎತ್ತಿ ತೋರಿಸುತ್ತದೆ. ವಿಕೇಂದ್ರೀಕೃತ ತ್ಯಾಜ್ಯ ನಿರ್ವಹಣೆಯಲ್ಲಿ ನಾಗರಿಕರ ಸಕ್ರಿಯ ಭಾಗವಹಿಸುವಿಕೆಯು ಯಶಸ್ಸಿನ ಕೀಲಿ ಎಂಬುದು ಈ ಅಧ್ಯಯನದ ಪ್ರಮುಖ ಕಂಡುಕೊಳ್ಳುವಿಕೆಯಾಗಿದೆ. ಈ ಅಧ್ಯಯನವು ಬೆಂಗಳೂರಿನ ತ್ಯಾಜ್ಯ ನಿರ್ವಹಣಾ ನೀತಿಗಳನ್ನು ಪರಿಶೀಲಿಸುತ್ತದೆ ಮತ್ತು ಅವುಗಳ ಅನುಷ್ಠಾನದಲ್ಲಿ ನಾಗರಿಕರ ಪಾತ್ರವನ್ನು ವಿಶ್ಲೇಷಿಸುತ್ತದೆ.

Article Details

Section

Research Articles

Author Biographies

ಚಂದ್ರಪ್ಪ ಎಸ್.ಹೆಚ್.

ಸಂಶೋಧನಾರ್ಥಿ, ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ.

ಅಶೋಕ್‌ಕುಮಾರ್ ವೀ. ಪಾಳೇದ

ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ.

How to Cite

ಚಂದ್ರಪ್ಪ ಎಸ್.ಹೆಚ್., & ಅಶೋಕ್‌ಕುಮಾರ್ ವೀ. ಪಾಳೇದ. (2026). ಬೆಂಗಳೂರು ನಗರದಲ್ಲಿ ನಗರ ತ್ಯಾಜ್ಯ ನಿರ್ವಹಣಾ ನೀತಿಗಳು ಮತ್ತು ನಾಗರಿಕರ ಭಾಗವಹಿಸುವಿಕೆ: ಒಂದು ವಿಶ್ಲೇಷಣೆ. ಅಕ್ಷರಸೂರ್ಯ (AKSHARASURYA), 14(03), 204 to 211. https://aksharasurya.com/index.php/latest/article/view/901

References

ಕ್ರಿಸ್ಟಿಯನ್ ಲೂಡ್ರಿಂಗರ್ ಮತ್ತು ಶಾಲಿನಿ ರಾಂಡೇರಿಯ (2017) “ಗಾರ್ಬೇಜ್ ಇಸ್ ಗುಡ್ ಟು ಥಿಂಕ್ ವಿತ್ ದ ಇಂಟರ್‌ಪ್ಲೇ ಆಫ್ ಸಿವಿಕ್ ಆಕ್ಟಿವಿಸಂ ಅಂಡ್ ಜುಡಿಸಿಯಲ್ ಇಂಟರ್ವೆನ್ಶನ್ ಇನ್ ಶೇಪಿಂಗ ಬೆಂಗಳೂರು ಸಾಲಿಡ್ ವೆಸ್ಟ್ ಮ್ಯಾನೇಜ್ಮೆಂಟ್ ಪಾಲಿಸಿಸ್”, ಓಪನ್ ಎಡಿಷನ್ ಜರ್ನಲ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ. (2020). ಘನತ್ಯಾಜ್ಯ ನಿರ್ವಹಣಾ ಉಪ-ಕಾನೂನುಗಳು. ಬೆಂಗಳೂರು: ಬಿಬಿಎಂಪಿ.

ಕೆಎಸ್‌ಪಿಸಿಬಿ. (2019). ಘನತ್ಯಾಜ್ಯ ನಿರ್ವಹಣಾ ನಿಯಮಗಳ ಅನುಷ್ಠಾನದ ಕುರಿತು ವಾರ್ಷಿಕ ವರದಿ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ.

ರಾಮಚಂದ್ರ, ಟಿ. ವಿ., & ಬಚಮಂಡ, ಎಸ್. (2007). ಪುರಸಭೆಯ ಘನತ್ಯಾಜ್ಯ ನಿರ್ವಹಣೆಯ ಪರಿಸರ ಲೆಕ್ಕಪರಿಶೋಧನೆ. ಅಂತರರಾಷ್ಟ್ರೀಯ ಪರಿಸರ ತಂತ್ರಜ್ಞಾನ ಮತ್ತು ನಿರ್ವಹಣೆಯ ಜರ್ನಲ್, 7(3/4), 369-391.

ಶ್ರೀನಿವಾಸ್, ಎಸ್. (2018). ನಗರ ಆಡಳಿತದಲ್ಲಿ ನಾಗರಿಕರ ಭಾಗವಹಿಸುವಿಕೆ: ಬೆಂಗಳೂರಿನ ತ್ಯಾಜ್ಯ ರ್ವಹಣೆಯ ಪ್ರಕರಣ ಅಧ್ಯಯನ. ಜರ್ನಲ್ ಆಫ್ ಅರ್ಬನ್ ಪಾಲಿಸಿ, 12(4), 45-60.

ಹಸಿರು ದಳ. (ಎನ್‌ಡಿ). ಬೆಂಗಳೂರಿನಲ್ಲಿ ತ್ಯಾಜ್ಯ ತೆಗೆಯುವವರ ಮೇಲಿನ ಪರಿಣಾಮ ವರದಿ.

ದಿ ಹಿಂದೂ, ದಿನಾಂಕ- 13/5/2014 “ ವಿಲ್ ಬೆಂಗಳೂರು ಎವರ್ ಬಿ ಗಾರ್ಬೇಜ್ ಪ್ರೀ ?”