ಸಾಮಾಜಿಕ ಹರಿಕಾರ ಬಸವಣ್ಣ

Main Article Content

ತ್ರಿವೇಣಿ

Abstract

ಪ್ರಭುತ್ವದ ಮೇಲಾಟಕ್ಕೆ ಪರ್ಯಾಯವಾಗಿ ಜನಶಕ್ತಿ ರೂಪುಗೊಳ್ಳಬೇಕೆಂದು ಬಯಸುತ್ತಿದ್ದ ಬಸವಣ್ಣನವರು ಕಾಯಕ-ದಾಸೋಹಗಳ ಮುಖೇನ ಅದನ್ನು ಸಾಧಿಸುವ ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಕಾಳಜಿಯುಳ್ಳ ಸಮಾನ ಮನಸ್ಕರ ಸಂಘಟನೆಯಿಂದ ಮಾತ್ರ ಇಂಥದ್ದನ್ನು ಸಾಧಿಸಲು ಸಾಧ್ಯವೆಂಬ ನಿಲುವಿನಲ್ಲಿ, ಜಾತಿ, ವರ್ಣ, ವರ್ಗಗಳೇ ಮೊದಲಾದ ಎಲ್ಲ ಬಂಧನಗಳನ್ನು ಮೀರಿದ ‘ಅನುಭವ ಮಂಟಪ’ ಎಂಬ ಒಂದು ಅದ್ಭುತ ವೇದಿಕೆಯನ್ನು ರೂಪಿಸಿದರು. ಅನುಭವಮಂಟಪದಲ್ಲಿ ಎಲ್ಲರೂ ಸಮಾನಭಾವದಲ್ಲಿ ಸಾಮಾಜಿಕ ಒಳಿತಿನ ಉದ್ದೇಶದಿಂದ ಸೇರಿ ಪರಸ್ಪರ ಚರ್ಚೆ ಮಾಡಿದರು. ಆ ಮೂಲಕ ಅಂದೇ ಪ್ರಜಾಪ್ರಭುತ್ವಕ್ಕೆ ಅಡಿಗಲ್ಲನ್ನು ಹಾಕಿದರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇನ್ನಿಲ್ಲದ ಮಹತ್ವ ನೀಡಿದ ಅನುಭವ ಮಂಟಪವು ಶರಣ ಶರಣೆಯರೆಲ್ಲ ಲಿಂಗ-ಜಾತಿಬೇಧಗಳಿಲ್ಲದಂತೆ ಒಗ್ಗೂಡಲು ಇಂಬು ನೀಡಿತು. ಇಂಥ ಹತ್ತು ಹಲವು ವಿಭಿನ್ನ ಪ್ರಯೋಗಗಳ ಅಸ್ಪೃಶ್ಯತೆಯ ಕೊಳಕಿನಿಂದ ಸಮಾಜವನ್ನು ಮುಕ್ತಗೊಳಿಸಿ, ‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ, ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು’ ಎಂಬ ಅರಿವನ್ನು ಮೂಡಿಸಿದರು. ಮರ್ತ್ಯದೊಳಗೆ ಬದುಕಬೇಕಾದರೆ ಆ ಹೊತ್ತಿನಲ್ಲಿ ಬಾಳ್ವಿಕೆ ಶುದ್ಧತೆಯೇ ಮುಖ್ಯ ಎಂಬುದನ್ನು ಬಸವಣ್ಣನವರು ಇನ್ನಿಲ್ಲದಷ್ಟು ತೀವ್ರ ನೆಲೆಯಲ್ಲಿ ಪ್ರತಿಪಾದಿಸಿದರು. ಜ್ಞಾನ ಮತ್ತು ಕ್ರಿಯೆಗಳಿಂದ ಕೂಡಿದ ಜೀವಕೇಂದ್ರಿತ ಪ್ರಜ್ಞೆ ಎಲ್ಲರಲ್ಲಿ ರೂಪುಗೊಳ್ಳಬೇಕೆಂದು ಬಸವಣ್ಣನವರು ಸದಾ ಹಂಬಲಿಸಿದರು.

Article Details

Section

Essay

Author Biography

ತ್ರಿವೇಣಿ

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಡಿ. ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜು, ಹುಣಸೂರು.

References

ಪೋತೆ ಎಚ್.‌ ಟಿ. (2011). ಜಾಗತಿಕ ಚಿಂತಕರು ಮತ್ತು ಬಸವಣ್ಣ. ಕನ್ನಡ ಅಧ್ಯಯನ ಸಂಸ್ಥೆ. ಗುಲಬರ್ಗಾ.

ರಂಜಾನ್‌ ದರ್ಗಾ. (2017). ಬಸವಣ್ಣ: ಏಕೆ ಬೇಕು. ಲಡಾಯಿ ಪ್ರಕಾಶನ. ಗದಗ.