ಕುವೆಂಪು ಕವಿತೆಗಳಲ್ಲಿ ಸಂಧ್ಯಾ ಸೊಬಗು
Main Article Content
Abstract
ಕವಿ ಎಂದರೆ ಕಲ್ಪನಾ ವಿಹಾರಿ. ಮನುಷ್ಯ ಭಾವನೆಗಳನ್ನು ವ್ಯಕ್ತಪಡಿಸುವ ಪರಿಯೇ ಕವಿತ್ವ. ಮನಸ್ಸು ಪ್ರಶಾಂತವಾಗಿ ಇರುವಲ್ಲಿ ಸಾಹಿತ್ಯ ಉತ್ತಮವಾಗಿ ಹೊರಹೊಮ್ಮುತ್ತದೆ. ನೈಸರ್ಗಿಕವಾಗಿ ಇರುವ ಪ್ರಕೃತಿಯ ಸೊಬಗನ್ನು ಆದಿಕವಿಗಳಿಂದ ಹಿಡಿದು ಇತ್ತೀಚಿನವರೆಗೆ ಬರಹಗಾರರು ವೈಭವದಿಂದ ಬಣ್ಣಿಸಿದ್ದಾರೆ. ಅದರಲ್ಲಿ ಕುವೆಂಪುರವರು ಪ್ರಮುಖರು. ಮಲೆನಾಡಿನಲ್ಲಿ ಹುಟ್ಟಿ ಬೆಳೆದ ರಸಋಷಿ ತಮ್ಮ ಸಾಹಿತ್ಯ ಚಟುವಟಿಕೆಗಳಲ್ಲಿ ಪ್ರಕೃತಿಯ ಚಿತ್ರಣವನ್ನು ಬಿಂಬಿಸಿದ್ದಾರೆ. ಮಲೆನಾಡಿನ ಗಿರಿಶಿಖರಗಳು, ಸಾಲು ಸಾಲು ಮರಗಳು, ಬೆಟ್ಟಗುಡ್ಡಗಳು, ಕವಿಶೈಲ, ಸಹ್ಯಾದ್ರಿಯ ತಪ್ಪಲು ಎಲ್ಲವೂ ಒಳಗೊಂಡಂತೆ ರಮಣೀಯ ನೊಟದ ಪರಿಸರವನ್ನು ಶ್ರೀಯುತರು ಕಾವ್ಯದಲ್ಲಿ ಹರಡಿದ್ದಾರೆ. ‘ಸೂರ್ಯೋದಯ, ಚಂದ್ರೋದಯ ದೇವರ ದಯ ಕಾಣೋ’ ಎಂದು ಹೇಳುತ್ತಾ, ಸೂರ್ಯೋದಯದ ಜೊತೆಗೆ, ಸೂರ್ಯಾಸ್ತದ ಸಂಜೆಯ ಸೊಬಗನ್ನು ವರ್ಣಿಸುತ್ತಾರೆ. ಕುವೆಂಪು ಅವರ ಕವನಗಳಲ್ಲಿ ಎದ್ದು ಕಾಣುವ ಅಂಶವೆಂದರೆ ಸೌಂದರ್ಯ ಮತ್ತು ಚೈತನ್ಯ. ಪ್ರಕೃತಿಯ ಸೌಂದರ್ಯದಿಂದ ಆನಂದ ಮತ್ತು ಚೈತನ್ಯದಿಂದ ಶಕ್ತಿ ದೊರಕುತ್ತದೆ ಎಂಬುದು ಕವಿಯ ನಂಬಿಕೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಕುವೆಂಪು. ಶಿವಾರೆಡ್ಡಿ ಕೆ. ಸಿ. (2020). ಕುವೆಂಪು ಸಮಗ್ರ ಕಾವ್ಯ ಸಂಪುಟ: ಭಾಗ–1. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ. ಹಂಪಿ.
ಕುವೆಂಪು. ಶಿವಾರೆಡ್ಡಿ ಕೆ. ಸಿ. (2020). ಕುವೆಂಪು ಸಮಗ್ರ ಕಾವ್ಯ ಸಂಪುಟ: ಭಾಗ-2. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ. ಹಂಪಿ.
ಪ್ರಧಾನ ಗುರುದತ್ತ. (2018). ಕುವೆಂಪು ಸಾಹಿತ್ಯ ಕೆಲವು ಅಧ್ಯಯನಗಳು. ಸಪ್ನ ಬುಕ್ ಹೌಸ್. ಬೆಂಗಳೂರು.
ಭಂಡಾರಿ ಆರ್. ವಿ. (2011). ಕುವೆಂಪು: ದೃಷ್ಟಿ-ಸೃಷ್ಟಿ. ಸುಮುಖ ಪ್ರಕಾಶನ. ಬೆಂಗಳೂರು.