‘ವೀಸಾದ ನಿರೀಕ್ಷಣೆಯಲ್ಲಿ ಆತ್ಮಕಥನ’: ಡಾ.ಬಿ.ಆರ್. ಅಂಬೇಡ್ಕರ ಜೀವನ ಮತ್ತು ಪ್ರಯೋಗಗಳು

Main Article Content

ಅಜೀತ ಪಾತ್ರೋಟ
ಶಿವಗಂಗಾ ರುಮ್ಮಾ

Abstract

ಆತ್ಮಕಥೆ ಬರೆದುಕೊಳ್ಳುವುದು ಮನುಷ್ಯ ಬದುಕಿನ ಪ್ರಮುಖ ಬೆಳವಣಿಗೆಯಾಗಿದೆ. ಈ ಕಾರಣವಾಗಿಯೆ ಮನುಷ್ಯ ತನ್ನ ಸರಿ ತಪ್ಪುಗಳನ್ನು ನಿವೇದಿಸಿಕೊಂಡು ಬದುಕಿನ ವಿಕಾಸದತ್ತ ದಾಪುಗಾಲಿಡುವುದು ಕಾಣಬಹುದು. ಮಾನವ ಬೆಳವಣಿಗೆ ಮತ್ತು ವಿಕಾಸ ಕ್ರಮದಲ್ಲಿ ತನ್ನ ಬದುಕಿನ ಅನುಭವಗಳನ್ನು ಮನೆ, ಸಮಾಜ, ಪರಿಸರ, ಸಂಸ್ಕೃತಿಗಳಿಂದ ರೂಪುಗೊಂಡಿವೆ. ಅವುಗಳು ಮನುಷ್ಯ ಒಳ ಹೊರಗನ್ನು ಅರಿತುಕೊಳ್ಳಲು ಸಹಾಯ ಮಾಡುತ್ತವೆ. ಇಲ್ಲಿ ಪ್ರಮುಖವಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಬದುಕಿನುದ್ದಕ್ಕೂ ಅನುಭವಿಸಿದ ದುಖಃ ದುಮ್ಮಾನಗಳು, ಸಂಕಟಗಳು ಮತ್ತು ಅವುಗಳಿಂದ ಬಿಡುಗಡೆಗೆ ಹಾತೋರೆಯುವ ಮನಸ್ಥಿತಿ ಪ್ರಕಟಗೊಳ್ಳುತ್ತದೆ. ಅಲ್ಲದೆ ಅವರು ಕಂಡುಕೊಳ್ಳುವ ಪರಿಹಾರೋಪಾಯಗಳು ಎಲ್ಲವೂ ಒಂದೊಂದು ಹೊಸ ಪ್ರಯೋಗದಂತೆ ಗೋಚರಿಸುತ್ತದೆ. ಅಲ್ಲದೆ ಅವು ಓದುಗರಿಗೆ ಸಂದೇಶಗಳಾಗಿ ಮಾರ್ಪಡುತ್ತವೆ.

Article Details

Section

Book Review

Author Biographies

ಅಜೀತ ಪಾತ್ರೋಟ

ಸಂಶೋಧನಾರ್ಥಿ, ಕನ್ನಡ ವಿಭಾಗ, ಮಾನವಿಕ ಮತ್ತು ಭಾಷಾ ನಿಕಾಯ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಡಗಂಚಿ, ಕಲಬುರ್ಗಿ.

ಶಿವಗಂಗಾ ರುಮ್ಮಾ

ಪ್ರಾಧ್ಯಾಪಕರು, ಕನ್ನಡ ವಿಭಾಗ, ಮಾನವಿಕ ಮತ್ತು ಭಾಷಾ ನಿಕಾಯ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಡಗಂಚಿ, ಕಲಬುರ್ಗಿ.

References

ಶಿವರಾಂ ಎನ್. ಆರ್. (2010). ಬಾಬಾಸಾಹೇಬ್ ಡಾ. ಅಂಬೇಡ್ಕರ್‌ರವರ ಆತ್ಮಕಥೆ. ಜೈ ಭೀಮ್ ಪ್ರಕಾಶನ. ಹಾಸನ.

ನರೇಂದ್ರಕುಮಾರ್ ಎಸ್. (2002). ಅಂಬೇಡ್ಕರ ಸೂಕ್ತಿಗಳು. ಚೇತನ ಬುಕ್ ಹೌಸ್. ಮೈಸೂರು.

ಅಂಬೇಡ್ಕರ್ ಬಿ. ಆರ್. ಸದಾಶಿವ ಮರ್ಜಿ (ಅನು). (2015). ವೀಸಾದ ನಿರೀಕ್ಷೆಯಲ್ಲಿ ನೆನಪುಗಳು. ಲಡಾಯಿ ಪ್ರಕಾಶನ. ಗದಗ.

ಅಪ್ಪಗೇರೆ ಸೋಮಶೇಖರ. (2023). ಮಾನವೀತೆಯ ಮಾರ್ಗದಾತ. ಚಿಂತನ ಚಿತ್ತಾರ. ಮೈಸೂರು.