ಪಂಪನ ಕಾವ್ಯಗಳಲ್ಲಿ ಮೌಲ್ಯ ವಿವೇಚನೆ

Main Article Content

ವಿಕಾಸ್ ಕುಮಾರ್ ವಿ.

Abstract

ಕನ್ನಡದ ಆದಿಕವಿ ಪಂಪನ ಕಾವ್ಯಗಳು ವರ್ತಮಾನದ ಬದುಕಿಗೆ ಮೌಲ್ಯಗಳ ತುರ್ತನ್ನು ನೀಗಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. 'ಕಲೆಗಾಗಿ ಕಲೆ' ಎನ್ನುವ ದೃಷ್ಟಿಕೋನವನ್ನು ಮೀರಿದ ಪಂಪ, ಕಲೆ ಬದುಕಿಗಾಗಿ ಮತ್ತು ಅದು ಜೀವಂತವಾಗಿರಬೇಕೆಂದು ಪ್ರತಿಪಾದಿಸುತ್ತಾನೆ. ವಿಕ್ರಮಾರ್ಜುನ ವಿಜಯ ಮತ್ತು ಆದಿಪುರಾಣ ಕಾವ್ಯಗಳ ಮೂಲಕ ಲೌಕಿಕ ಹಾಗೂ ಜಿನಾಗಮದ ಮೌಲ್ಯಗಳನ್ನು ಸಮನ್ವಯಗೊಳಿಸಿದ್ದಾನೆ. ಕುಲವೆಂಬುದು ಹುಟ್ಟಿನಿಂದಲ್ಲ, ಅದು ಛಲ, ಗುಣ ಮತ್ತು ಅಭಿಮಾನದಿಂದ ನಿರ್ಧಾರವಾಗುತ್ತದೆ ಎಂಬ ಹೊಸ ವ್ಯಾಖ್ಯಾನವನ್ನು ಪಂಪ ನೀಡಿದ್ದಾನೆ. ಯುದ್ಧಗಳ ಕಾಲದಲ್ಲಿಯೂ ಯುದ್ಧದ ಹಾನಿಯನ್ನು ನಿರಾಕರಿಸಿ, ತ್ಯಾಗ, ದಯೆ, ಶೀಲ ಮತ್ತು ಭೋಗಗಳ ಸಮನ್ವಯದ ಬದುಕೇ ಶ್ರೇಷ್ಠವೆಂದು ಸಾರಿದ್ದಾನೆ. ಪಂಪನ ಈ ಮೌಲ್ಯಗಳು ಸಾರ್ವಕಾಲಿಕವಾಗಿದ್ದು, ಮನುಷ್ಯ ಕುಲಕ್ಕೆ ದಾರಿದೀಪವಾಗಿವೆ.

Article Details

Section

Research Articles

Author Biography

ವಿಕಾಸ್ ಕುಮಾರ್ ವಿ.

ಸಂಶೋಧನಾ ವಿದ್ಯಾರ್ಥಿ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ.

References

ಪಂಪ ಭಾರತ, (ಸಂ.) ಎನ್. ಅನಂತರಂಗಾಚಾರ್, ಕನ್ನಡ ಸಾಹಿತ್ಯ ಪರಿಷತ್ತು, 2016.

ಆದಿಪುರಾಣ (ಸಂ.) ಕೆ. ಎಲ್. ನರಸಿಂಹ ಶಾಸ್ತ್ರಿ, ಕನ್ನಡ ಸಾಹಿತ್ಯ ಪರಿಷತ್ತು, 2016.

ನಾಡೋಜ ಪಂಪ, ಮುಳಿಯ ತಿಮ್ಮಪ್ಪಯ್ಯ, ಗೀತಾ ಬುಕ್ ಹೌಸ್, 1997.

ಹೊಸತು ಹೊಸತು, ಎಂ. ಚಿದಾನಂದ ಮೂರ್ತಿ, ಸಪ್ನ ಬುಕ್ ಹೌಸ್, 2018.

ಸಮಗ್ರಕನ್ನಡ ಸಾಹಿತ್ಯಚರಿತ್ರೆ, ಸಂ 2, (ಸಂ.) ಜಿ. ಎಸ್. ಶಿವರುದ್ರಪ್ಪ, 1975.

ಆದಿಪುರಾಣ ಸಾಂಸ್ಕೃತಿಕ ಮುಖಾಮುಖಿ, (ಸಂ.) ಬಿ. ಎಂ. ಪುಟ್ಟಯ್ಯ, ಹಂಪಿ ಪ್ರಸಾರಾಂಗ, 2015.