ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ಕಾರ್ಮಿಕರ ಸಮಸ್ಯೆಗಳು

Main Article Content

ವೆಂಕಟೇಶ್ ಬಿ. ಜಿ.

Abstract

ಕೃಷಿ ಕಾರ್ಮಿಕರು ಕೃಷಿ ಕ್ಷೇತ್ರದಲ್ಲಿ ಬೆಳೆ ನಾಟಿ, ಜಾನುವಾರುಗಳ ಪಾಲನೆ, ಕೊಯ್ದು ಮತ್ತು ಸಂಸ್ಕರಣೆ ಮುಂತಾದ ಕಾರ್ಯದಲ್ಲಿ ಭಾಗವಹಿಸುತ್ತಾರೆ. ಕೃಷಿ ಚಟುವಟಿಕೆಯಲ್ಲಿ ಮಾನವ ಸಂಪನ್ಮೂಲವು ಅವಶ್ಯಕವಾಗಿ ಅಗತ್ಯವಿರುತ್ತದೆ. ಈ ಹಿನ್ನೆಲೆ ಕೃಷಿ ಕಾರ್ಮಿಕರು ದೀರ್ಘಾವಧಿವರೆಗೆ ವ್ಯವಸಾಯ ಭೂಮಿಯಲ್ಲಿ ದುಡಿಯುತ್ತಿರುತ್ತಾರೆ. ಅವರು ಕಾಲಾವಧಿ ಅಥವಾ ತಾತ್ಕಾಲಿಕ ಅವಧಿಯ ಆಧಾರದ ಮೇಲೆ ಕೆಲಸ ಮಾಡಬಹುದು. ಅಲ್ಲದೆ ಕೃಷಿಕರು ಅಥವಾ ಕೃಷಿ ಸಹಕಾರಿ ಸಂಸ್ಥೆಗಳಲ್ಲಿ ಕಾರ್ಯವನ್ನು ನಿರ್ವಹಿಸಬಹುದು. ಕೃಷಿ ಕಾರ್ಮಿಕರ ಸವಾಲುಗಳು ಮತ್ತು ಅನಿಶ್ಚಿತತೆಯ ಹೊರತಾಗಿಯೂ ಇದು ಜಾಗತಿಕ ಆಹಾರ ಉತ್ಪಾದನೆಯ ನಿರ್ಣಾಯಕ ಅಂಶವಾಗಿದೆ. ಪ್ರಪಂಚದ ಅನೇಕ ಭಾಗಗಳಲ್ಲಿ ಕೃಷಿ ಕಾರ್ಮಿಕರು ಅನೌಪಚಾರಿಕ ಮತ್ತು ಅನಿಯಂತ್ರಿತರಾಗಿದ್ದಾರೆ. ಅವರು ತಮ್ಮ ಹಕ್ಕುಗಳಿಗಾಗಿ ಹೋರಾಟವನ್ನು ನಡೆಸುವುದು ಅವಶ್ಯಕವಾಗಿದೆ. ಇಡೀ ದೇಶದ ಉತ್ಪಾದನಾ ವ್ಯವಸ್ಥೆಗೆ ಕೃಷಿ ಕಾರ್ಮಿಕರ ಕೊಡುಗೆಯು ಅನನ್ಯವಾದುದು. ಇಂತಹ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ಕಾರ್ಮಿಕರ ಸಮಸ್ಯೆಗಳನ್ನು ಗುರುತಿಸುವುದು ಮತ್ತು ಅದಕ್ಕೆ ಪರಿಹಾರ ಕ್ರಮಗಳನ್ನು ಸೂಚಿಸುವುದು ಈ ಲೇಖನದ ಆಶಯವಾಗಿದೆ.


 

Article Details

Section

Research Articles

Author Biography

ವೆಂಕಟೇಶ್ ಬಿ. ಜಿ.

ಸಂಶೋಧನಾ ವಿದ್ಯಾರ್ಥಿ, ಇತಿಹಾಸ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

References

ಅರುಣಿ ಎಸ್. ಕೆ. (2019), ಬೆಂಗಳೂರು ಪರಂಪರೆ, ಇತಿಹಾಸ ದರ್ಪಣ ಪ್ರಕಾಶನ. ಬೆಂಗಳೂರು.

ಆನಂದ ಎಸ್. (2020). ಕರ್ನಾಟಕ ರಾಜ್ಯ ರೈತ ಸಂಘ ತಾತ್ವಿಕ ಪ್ರಶ್ನೆಗಳು (1970-2010). ಇತಿಹಾಸ ವಿಭಾಗ, ಬೆಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು.

ಕೃಷ್ಣಯ್ಯ ಎಂ. ಎಚ್. ಮತ್ತು ವಿಜಯಾ. (2008), ಬೆಂಗಳೂರು ದರ್ಶನ: ಸಂಪುಟ-1 ಮತ್ತು 2. ಉದಯಭಾನು ಕಲಾ ಸಂಘ, ಬೆಂಗಳೂರು.

ಗೋವಿಂದಯ್ಯ ಜಿ. (2014). ಕರ್ನಾಟಕದಲ್ಲಿ ರೈತ ಹೋರಾಟಗಳಲ್ಲಿ ಆರ್ಥಿಕ ಅಭಿವೃದ್ಧಿಯ ಆಶಯಗಳು: ಒಂದು ಅಧ್ಯಯನ 1950-2000. ಇತಿಹಾಸ ವಿಭಾಗ, ಬೆಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು.

Kuppaswamy J. R. (1975). Economic Conditions in Karnataka. Karnataka University. Dhrawad.

Suryanath U. Kamath. (1989). Bangalore Rural District Gazetteer of India. Government Press. Bangalore.