ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಮಹಿಳಾ ಸಾಮಾಜಿಕ ನ್ಯಾಯತತ್ವ: ಒಂದು ಅವಲೋಕನ
Main Article Content
Abstract
ಹಿಂದೂ ಧರ್ಮದಲ್ಲಿ ಶೂದ್ರ ಮತ್ತು ದಲಿತರ ಶೋಷಣೆ ಆದಷ್ಟೇ ಮಹಿಳೆಯರ ಶೋಷಣೆಯೂ ಆಗಿದೆ. ಹಿಂದೂ ಸಮಾಜದಲ್ಲಿ ಮಹಿಳೆಯು ಅತಿ ಕೀಳು ಮಟ್ಟದ ಸ್ಥಾನವನ್ನುಹೊಂದಿದ್ದಾಳೆ. ಜೀವನದ ಯಾವುದೇ ಕ್ಷೇತ್ರದಲ್ಲೂ ಮಹಿಳೆ ಪ್ರಗತಿ ಹೊಂದಬಾರದೆಂಬ ನಿಬರ್ಂಧನೆಗಳನ್ನು ಹೇರಲಾಗಿತ್ತು. ಮಹಿಳೆಯು ಕೇವಲ ಪುರುಷನ ಆಸೆ ಆಕಾಂಕ್ಷೆಗಳನ್ನು ತೀರಿಸುವ ಒಂದು ಸುಂದರವಾದ ವಸ್ತು ಮತ್ತು ಮಕ್ಕಳನ್ನು ಹೆರುವ ಯಂತ್ರವೆಂದು ಪರಿಗಣಿಸಲಾಗಿತ್ತು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಕೇವಲ ಗುಲಾಮಳಂತೆ ಮನೆಗೆಲಸ ಮಾಡಿ ಕುಟುಂಬದಲ್ಲಿ ಶಾಂತಿ ನೆಲೆಸುವಂತೆ ಮಾಡುವುದು ಅವಳ ಆದ್ಯ ಕರ್ತವ್ಯವೆಂದು ಭಾವಿಸಲಾಗಿತ್ತು. ಯಾವುದೇ ಕಾರಣಕ್ಕೂ ಮಹಿಳೆ ಹೊರಗಿನ ಸಮಾಜದಲ್ಲಿ ಇತರರಂತೆ ಧೈರ್ಯ ಮತ್ತು ಗೌರವದಿಂದ ಭಾಗವಹಿಸುವಂತಿರಲಿಲ್ಲ. ಹಾಗೇನಾದರೂ ಮಾಡಿದಿದ್ದರೆ ಅವಳು ಇಡೀ ಪುರುಷ ವರ್ಗ ಮತ್ತು ಸಮಾಜದ ಕೋಪಗೊಳಗಾಗುತ್ತಿದ್ದಳು. ಮನು ಧರ್ಮಶಾಸ್ತ್ರದಲ್ಲಿ ಮಹಿಳೆಯರು ಸ್ಥಾನಮಾನವನ್ನು ಅತಿ ಕೆಟ್ಟದಾಗಿ ಚಿತ್ರಿಸಿದ್ದಾರೆ. ಶತಮಾನಗಳಿಂದ ಹೆಣ್ಣನ್ನು ಒಂದು ಸಾಕು ಪ್ರಾಣಿಯಂತೆ ವೈದಿಕ ಧರ್ಮ ನೋಡಿದೆ. ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರನ್ನು ಅತ್ಯಂತ ಹೀನಾಯವಾಗಿ ಪುರುಷ ಸಮಾಜ ಕಾಣುತ್ತಾ ಬಂದಿದೆ. ಮಹಿಳೆಯನ್ನು ಪುರುಷನ ಸಮಾನ ಸ್ಥಾನದಲ್ಲಿ ಸ್ಥಾಪಿಸುವ ಕೆಲಸವನ್ನು ಅನೇಕ ಸಮಾಜ ಸುಧಾರಕರು ಮಾಡಿದ್ದಾರೆ. ಅವರಲ್ಲಿ ಸ್ತ್ರೀ ಸಮಾನತೆಗಾಗಿ ಕಾನೂನು ರಚಿಸಿ ಸಂವಿಧಾನಾತ್ಮಕ ನೆಲೆಗಟ್ಟಿನಲ್ಲಿ ಸ್ವತಂತ್ರ ಭಾರತದ ಸ್ತ್ರೀ ಸ್ವಾತಂತ್ರ್ಯವನ್ನು ಎತ್ತಿ ಹಿಡಿದು, ಮನುಷ್ಯ ಸಮಾನತೆ ಮೆರೆದ ಕೀರ್ತಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಮನುಷ್ಯನ ಹಕ್ಕುಗಳನ್ನು ಲಿಂಗಭೇದ ರಹಿತ ನೆಲೆಗಳಲ್ಲಿ ಶೋಧಿಸಿ ಆ ವರೆಗಿನ ಸ್ತ್ರೀಯರ ಬಗೆಗಿದ್ದ ಮನುವಾದಿ ಚಿಂತಕರ ಧೋರಣೆಗಳನ್ನು ಕಾನೂನು ರಚನೆಯ ಮೂಲಕ ವಿರೋಧಿಸಿದವರು ಅಂಬೇಡ್ಕರ್ ಅವರು ಎಂಬುದನ್ನು ತಿಳಿಸುವುದು ಈ ಲೇಖನದ ಉದ್ದೇಶವಾಗಿರುತ್ತದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಜವರಯ್ಯ ಮ. ನ. (1995), ಅಂಬೇಡ್ಕರ್ ಮತ್ತು ಸಾಮಾಜಿಕ ನ್ಯಾಯ. ಸಿದ್ದಾರ್ಥ ಗ್ರಂಥ ಮಾಲೆ, ಮೈಸೂರು.
ವೆಂಕಟೇಶ್ ಹೆಚ್. (2009). ಮಹಾಪುರುಷರ ಆಯ್ದ ಸೂಕ್ತಿಗಳು. ಇಳಾಮುದ್ರಣ. ಮೈಸೂರು.
ರಾಯಮಾನೆ ಎಂ. ಎಲ್. (2010), ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್. ದಿವ್ಯ ಚಂದ್ರ ಪ್ರಕಾಶನ, ಬೆಂಗಳೂರು.
ಜವರಯ್ಯ ಮ. ನ. (1993). ಅಂಬೇಡ್ಕರ್ ವಿಚಾರ ಸಾಹಿತ್ಯ. ಸಿದ್ದಾರ್ಥ ಪ್ರಕಾಶನ. ಮೈಸೂರು.
ರಾಚಪ್ಪಾಜಿ ಮಣಗಳ್ಳಿ ಎಂ. (2009). ಭೀಮವಾದ. ಅನಘಸರಿ ಪ್ರಕಾಶನ, ಬೆಂಗಳೂರು.
ಶಿವರಾಂ ಎನ್. ಆರ್. (2009). ಡಾ. ಅಂಬೇಡ್ಕರ್ ದರ್ಶನ. ಜೈ ಭೀಮ್ ಪ್ರಕಾಶನ. ಬೆಂಗಳೂರು.
ಜವರಯ್ಯ ಮ. ನ. (2009). ಅಂಬೇಡ್ಕರ್ ಶೂದ್ರರು ಮತ್ತು ಮಹಿಳೆಯರು. ಬಹುಜನ ಮಾಧ್ಯಮ ಕೇಂದ್ರ, ಮೈಸೂರು.