ಚಂದ್ರಶೇಖರ ಕಂಬಾರರ ನಾಟಕಗಳಲ್ಲಿ ದೇಸಿ ಸಂಸ್ಕೃತಿ

Main Article Content

ಜ್ಯೋತಿ ಕೆ. ಎಸ್.

Abstract

ಕನ್ನಡದ ಪ್ರಸಿದ್ದ ನಾಟಕಕಾರರಲ್ಲಿ ಚಂದ್ರಶೇಖರ ಕಂಬಾರರು ಪ್ರಮುಖರಾಗಿದ್ದಾರೆ. ಘೋಡಗೇರಿಯಲ್ಲಿ ಜನಿಸಿದ ಕಂಬಾರರು ಹಳ್ಳಿ ಬದುಕಿನ ವಿವಿಧ ಮಜಲುಗಳನ್ನು ನೋಡುತ್ತಾ ಅನುಭವಿಸುತ್ತಲೇ ಬಾಲ್ಯವನ್ನು ಕಳೆದವರು. ತಾಯಿ ಚೆನ್ನಮ್ಮ ಹಾಡುಗಾರ್ತಿಯೂ, ಕತೆಗಾರ್ತಿಯೂ ಆಗಿದ್ದರು. ಮಾವ ರಾಮಪ್ಪ ವಿಭಿನ್ನ ವ್ಯಕ್ತಿತ್ವದ ಕ್ರಿಯಾಶೀಲ ವ್ಯಕ್ತಿ. ಸುಲದಾಳದಲ್ಲಿದ್ದ ದೊಡ್ಡಮ್ಮನೂ ಅದ್ಭುತ ಕತೆಗಾರ್ತಿ. ವರ್ಷದಲ್ಲಿ ಕನಿಷ್ಠ ಮೂರು ತಿಂಗಳುಗಳ ಕಾಲ ದೊಡ್ಡಮ್ಮನೊಂದಿಗೆ ಕಳೆಯುವುದು ಕಂಬಾರರಿಗೆ ರೂಢಿಯಾಗಿತ್ತು. ಇವರೆಲ್ಲರ ಬಾಯಿಯಿಂದ ಹಾಡು ಕೇಳುವುದು, ಕತೆಕೇಳುವುದು ಕಂಬಾರರಿಗೆ ಬಹು ಮೆಚ್ಚಿನ ವಿಷಯವಾಗಿತ್ತು.

Article Details

Section

Research Articles

Author Biography

ಜ್ಯೋತಿ ಕೆ. ಎಸ್.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೃಷ್ಣರಾಜನಗರ.

References

ಮರುಳಸಿದ್ದಪ್ಪ ಕೆ. (2018). ಆಧುನಿಕ ಕನ್ನಡ ನಾಟಕ. ಅಂಕಿತ ಪುಸ್ತಕ. ಬೆಂಗಳೂರು.

ವಿಕ್ರಮ್ ವಿಸಾಜಿ. (2001). ಕಂಬಾರರ ನಾಟಕಗಳು. ಇಳಾ ಮುದ್ರಣ. ಬೆಂಗಳೂರು.

ಬಸವರಾಜಕಲ್ಗುಡಿ. (2012). ಕಂಬಾರರ ಸಾಹಿತ್ಯದ ನೆಲೆ-ಬೆಲೆ. ಅಂಕಿತ ಪುಸ್ತಕ. ಬೆಂಗಳೂರು.

ಪುರುಷೋತ್ತಮ ಬಿಳಿಮಲೆ. (1992). ಶಿಷ್ಟ ಪರಿಶಿಷ್ಟ, ಮದಿಪು ಪ್ರಕಾಶನ. ಮಂಗಳೂರು.

ವಸಂತಕುಮಾ‌ರ್ ಪೆರ್ಲ, (2008), ಸ್ವಾತಂತ್ರೋತ್ತರ ಕನ್ನಡ ನಾಟಕಗಳಲ್ಲಿ ಜಾನಪದ ಒಳನೋಟಗಳು, ಕನ್ನಡ ಸಾಹಿತ್ಯ ಪರಿಷತ್. ಬೆಂಗಳೂರು.

ಜಯಪ್ರಕಾಶ್ ಮಾವಿನ ಕುಳಿ. (2004). ಶಿವಾಪುರ ಕಂಬಾರ ನಮಸ್ಕಾರ (ಅಭಿನಂದನಾ ಗ್ರಂಥ), ಚಂದದ್ರಶೇಖರ ಕಂಬಾರ ಅಭಿನಂದನಾ ಸಮಿತಿ. ಮೂಡಬಿದಿರೆ.

ವೀರೇಶ ಬಡಿಗೇರ. (2011). ನಾಡೋಜ ಡಾ. ಚಂದ್ರಶೇಖರ ಕಂಬಾರ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.