ಸಾಂಸ್ಕೃತಿಕ ನಗರ: ಮೈಸೂರು

Main Article Content

ಪಿ. ನಟರಾಜ ವೇಣುಕಲ್ಲುಗುಡ್ಡ

Abstract

ಮೈಸೂರಿನ ರಾಜಮಹಾರಾಜರು ಹಾಗು ಟಿಪ್ಪುಸುಲ್ತಾನರ ಕಾಲದಲ್ಲಾದ ಮಹತ್ವದ ಕಾರ್ಯ ಮತ್ತು ಬೆಳವಣಿಗೆಯ ಇತಿಹಾಸವನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ರಣಧೀರ ಕಂಠೀರವ ನರಸರಾಜ ಒಡೆಯರು ಅರಮನೆಯನ್ನು ಕಟ್ಟಿಸಿದ್ದು, ಹೈದರಾಲಿ ಮತ್ತು ಟಿಪ್ಪುಸುಲ್ತಾನರ ಕಾಲದ ವೀರನಗೆರೆ ಹಾಗೂ ನಜರಬಾದ್ ಕೋಟೆಗಳ ನಿರ್ಮಾಣದ ವಿವರಗಳಿವೆ. ಮುಮ್ಮಡಿ ಕೃಷ್ಣರಾಜ ಒಡೆಯರು ಕಟ್ಟಿಸಿದ ಜಗನ್ಮೋಹನ ಅರಮನೆ, ನಾಲ್ವಡಿ ಕೃಷ್ಣರಾಜ ಒಡೆಯರು ಕಟ್ಟಿಸಿದ ಲಲಿತಮಹಲ್ ಅರಮನೆ, ಚಾಮುಂಡಿ ಬೆಟ್ಟ, ಚಾಮರಾಜ ಒಡೆಯರು ಸ್ಥಾಪಿಸಿದ ಮೃಗಾಲಯ ಹಾಗೂ ಕೃಷ್ಣರಾಜ ಸಾಗರ ಜಲಾಶಯಗಳ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ವಿವರಿಸಲಾಗಿದೆ. ರಾಜಮಹಾರಾಜರ ಆಡಳಿತ ವೈಖರಿ ಹಾಗೂ ಮೈಸೂರು ಸಾಂಸ್ಕೃತಿಕ ನಗರವಾಗಿ ರೂಪುಗೊಂಡ ಬಗೆಯನ್ನು ಇದು ಕಟ್ಟಿಕೊಡುತ್ತದೆ.

Article Details

Section

Essay

Author Biography

ಪಿ. ನಟರಾಜ ವೇಣುಕಲ್ಲುಗುಡ್ಡ

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಇಂಡಿಯನ್ ಅಕಾಡೆಮಿ ಪದವಿ ಕಾಲೇಜು (ಸ್ವಾಯತ್ತ), ಹೆಣ್ಣೂರು ಕ್ರಾಸ್, ಬೆಂಗಳೂರು.

References

ಚಂದ್ರಶೇಖರಪ್ಪ ಟಿ.ಜಿ. (2016). ಸಮಗ್ರ ಭಾರತದ ಇತಿಹಾಸ. ಪೂರ್ಣ ಪ್ರಕಾಶನ. ಶಿವಮೊಗ್ಗ.

ಶಿವಪ್ಪ ಅರಿವು ಜಿ. (2015) ಸಮಗ್ರ ಕರ್ನಾಟಕ ಇತಿಹಾಸ, ಸಪ್ನ ಬುಕ್ ಹೌಸ್. ಬೆಂಗಳೂರು.

ಫಾಲಾಕ್ಷ. (2010), ಕರ್ನಾಟಕ (ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಇತಿಹಾಸ), ಶಶಿ ಪ್ರಕಾಶನ. ತಿಪಟೂರು.