ಉರಿವ ಕೆಂಡದ ಮೇಲೆ ಉರುಳಿ ಆಡಿದ ಮನಸ್ಸು

Main Article Content

ರವೀಂದ್ರ ಕತ್ತಿ

Abstract

'ಬಸವರಾಜ ಡೋಣೂರ' ಇವರು ವೃತ್ತಿಯಿಂದ ಪ್ರಾಧ್ಯಾಪಕರಾಗಿ, ಪ್ರವೃತ್ತಿಯಿಂದ ಕವಿ, ವಿಮರ್ಶಕ, ಸಂಶೋಧಕ, ಕಥೆಗಾರ, ನಾಟಕಕಾರಾಗಿ ಗುರುತಿಸಿಕೊಂಡವರು. ಇತ್ತೀಚೆಗೆ, ಅವರು ಕಾದಂಬರಿಯ ಕ್ಷೇತ್ರವನ್ನೂ ಪ್ರವೇಶಿಸಿ 'ಕ್ಯಾಂಪಸ್' ಮಾದರಿಯ ಕಾದಂಬರಿಯೊಂದಕ್ಕೆ ಮುನ್ನುಡಿ ಬರೆದಿದ್ದಾರೆ. ಇವರು ಈ ಕೃತಿಯ ಮೂಲಕ ತಮ್ಮ ಬದುಕಿನ ಅನೇಕ ವಾಸ್ತವ ಸಂಗತಿಗಳನ್ನು ಕಲೆಯಾಗಿಸುವಲ್ಲಿ, ಸಾಹಿತ್ಯ ಸೌಂದರ್ಯಕ್ಕೆ ಸಾಧನವಾಗಿಸುವಲ್ಲಿ ಅನೇಕ ವಿಧಾನಗಳನ್ನು ಬಳಸಿಕೊಂಡದ್ದಿದೆ. ಹಣ, ಅಧಿಕಾರ, ರಾಷ್ಟ್ರ, ಧರ್ಮಗಳ ಹಿನ್ನೆಲೆಯಲ್ಲಿ ಅನುಭವಿಸುವ ಕುತುಹಲ, ತಳಮಳ, ಮೋಹ, ಸ್ವಾರ್ಥ ಚಿಂತನೆ, ವ್ಯಕ್ತಿ ನಿಷ್ಠತೆ ಇತ್ಯಾದಿ ದೋಷಪೂರ್ಣ ಆಲೋಚನಾ ಕ್ರಮಗಳ ಧಾರುಣ ಸ್ಥಿತಿಗಳು ಕಟ್ಟಿಕೊಡುವ ಸೈದ್ಧಾಂತಿಕ ನಿಲುವುಗಳನ್ನು ಇಲ್ಲಿಯ ಪಕ್ವ ಮನಕ್ಕೊಂದು ಸೃಷ್ಟಿಸಿದ ಕಲ್ಪನೆಗಳಲ್ಲಿ ಅಡಕವಾಗಿವೆ. ಈ ರೀತಿಯ ಸೈದ್ದಾಂತಿಕ ನೆಲೆಯಲ್ಲಿಯೇ ಕನ್ನಡ ಸಾಹಿತ್ಯದಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಅದು ಯಾವುದೋ ಒಂದು ಸಿದ್ಧಾಂತ, ತಾತ್ವಿಕತೆಯನ್ನು ಅಂದಶ್ರದ್ದೆಯಿಂದ ಅನುಸರಿಸದೆ ಮನುಷ್ಯ ಕುಲಕ್ಕೆ ಹೆಚ್ಚು ಸೂಕ್ತವಾಗುವ ಹೊಸ ಆಲೋಚನೆಗಳ ಹುಡುಕಾಟದಲ್ಲಿ ಸಾಗಿರುವುದು ಕಂಡುಬರುತ್ತದೆ. ಈ ಹುಡುಕಾಟವು ಅಂದಶ್ರದ್ಧೆಯನ್ನು ಪ್ರಚೋಧಿಸುವ ವ್ಯಕ್ತಿಗಳು ಪ್ರತಿನಿಧಿಸುವ ಬಹುತ್ವದ ಪ್ರತಿನಿಧೀಕರಣವಲ್ಲ. ಬಹುತ್ವವು ಇಂತಹ ವ್ಯಕ್ತಿಗಳಿಂದ ಸೂಚಿಸಲ್ಪಡುವ ಜನಸಂಖ್ಯೆ, ಸಮುದಾಯ, ಸಂಸ್ಕೃತಿಗಳ ಸಮನ್ವಯಕ್ಕೆ ಮಾತ್ರ ಸೀಮಿತಗೊಳ್ಳುವುದಿಲ್ಲ. ಅದು ದೇಶದ ಏಕತೆಗೆ ದಕ್ಕೆ ತರುವ ಬಹುತ್ವದ ಕೆಲವು ಕೆಡುಕಿನ ವಿಚಾರಗಳನ್ನೂ ವಿರೋಧಿಸುತ್ತದೆ. ದೇಶದ ಐಕ್ಯತೆಗೆ ದಕ್ಕೆ ತರುವ ಮತ್ತು ಕೆಡುಕನ್ನು ವಿರೋಧಿಸುವ ಇತ್ತೀಚಿನ ಕೃತಿಗಳಲ್ಲಿ 'ಉರಿವ ಕೆಂಡದ ಮೇಲೆ' ಎಂಬ ಕಾದಂಬರಿಯೂ ಒಂದಾಗಿದೆ.

Article Details

Section

Book Review

Author Biography

ರವೀಂದ್ರ ಕತ್ತಿ

ಉಪನ್ಯಾಸಕರು, ಕನ್ನಡ ವಿಭಾಗ, ಶ್ರೀ ಎಸ್.ಆರ್. ಕಂಠಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ, ಮುಧೋಳ.

References

ಬಸವರಾಜ ಡೋಣೂರ. (2021). ಉರಿವ ಕೆಂಡದ ಮೇಲೆ. ಮನೋಹರ ಗ್ರಂಥ ಮಾಲಾ. ಧಾರವಾಡ.

ರಾಮಾನುಜನ್ ಎ. ಕೆ. (2009). ಎ. ಕೆ. ರಾಮಾನುಜನ್ ಅವರ ಆಯ್ದ ಬರಹಗಳು. ಅಕ್ಷರ ಪ್ರಕಾಶನ, ಹೆಗ್ಗೋಡು.

ಅನಂತಮೂರ್ತಿ ಯು. ಆರ್. (2014). ಹಿಂದುತ್ವ ಅಥವಾ ಹಿಂದ್ ಸ್ವರಾಜ್?. ಅಭಿನವ ಪ್ರಕಾಶನ, ಬೆಂಗಳೂರು.

ಬಸವರಾಜ ಡೋಣೂರ. (2016). ಕಸ್ತೂರಿಯ ಮೃಗ ಅನ್ನದಾನಿ ಭೈರವ ಪ್ರಕಾಶನ. ಬೆಂಗಳೂರು.