ಸಂಬಳಿಗೋಲು
Main Article Content
Abstract
"ಹರಿಶ್ಚಂದ್ರ ಕಾವ್ಯ ಸಂಗ್ರಹ"ದಲ್ಲಿ ಬರುವ 'ಸಂಬಳಿಗೋಲು' ಎಂಬ ಪದದ ಅರ್ಥ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಎ.ಆರ್. ಕೃಷ್ಣಶಾಸ್ತ್ರಿ ಅವರು ನಿಖರವಾಗಿ ವಿಶ್ಲೇಷಿಸಿದ್ದಾರೆ. ಸಂಪಾದಕರು ಊಹಿಸಿದ್ದ 'ಬಿದಿರುಕೋಲು' ಎಂಬ ಅರ್ಥವನ್ನು ನಿಕಷಕ್ಕೊಡ್ಡಿ, ಪದದ ದ್ರಾವಿಡ ಹಾಗೂ ಮಹಾರಾಷ್ಟ್ರೀಯ ಮೂಲಗಳನ್ನು ಶೋಧಿಸಿದ್ದಾರೆ. ಹೊಲೆಯರು ಇತರರಿಗೆ ಎಚ್ಚರಿಕೆ ಕೊಡಲು ಬಳಸುತ್ತಿದ್ದ 'ತುದಿ ಸೀಳಿದ ಬಿದಿರುಕೋಲು' ಎಂಬ ಅರ್ಥವೇ ಈ ಪದಕ್ಕೆ ಹೆಚ್ಚು ಸೂಕ್ತವೆಂಬುದನ್ನು ಅವರು ದೃಢಪಡಿಸಿದ್ದಾರೆ. ಕನ್ನಡದ ಇತರ ಪ್ರಾಚೀನ ಕಾವ್ಯಗಳಲ್ಲಿ ಬಳಕೆಯಾಗಿರುವ 'ಸಂಬಳಿ', 'ಗಗ್ಗರಿಗೋಲು' ಮುಂತಾದ ಪದಗಳನ್ನು ತುಲನಾತ್ಮಕವಾಗಿ ಚರ್ಚಿಸಿ, ಪದವೊಂದರ ಬಹುಮುಖಿ ಅರ್ಥಸಾಧ್ಯತೆಗಳನ್ನು ಲೇಖನವು ತೆರೆದಿಡುತ್ತದೆ.
Article Details
Issue
Section
Trodden Path

This work is licensed under a Creative Commons Attribution-NonCommercial-ShareAlike 4.0 International License.
References
ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, 39-1, 1954
ಭಾಷಣಗಳು ಮತ್ತು ಲೇಖನಗಳು, 1960, ಪು.167-76