ಸಾಮಾಜಿಕ ಮಾಧ್ಯಮ: ರಾಜಕೀಯ ಮತ್ತು ಸಾಹಿತ್ಯಿಕ ಚಳುವಳಿಗಳು
Main Article Content
Abstract
ಸಾಮಾಜಿಕ ಮಾಧ್ಯಮಗಳು ಜಾಗತಿಕವಾಗಿ ರಾಜಕೀಯ ಮತ್ತು ಸಾಹಿತ್ಯಿಕ ಚಳುವಳಿಗಳ ಸ್ವರೂಪವನ್ನು ಆಮೂಲಾಗ್ರವಾಗಿ ಬದಲಿಸಿವೆ. ಅರಬ್ ಸ್ಪ್ರಿಂಗ್, ಮೀಟೂವಿನಂತಹ ಹೋರಾಟಗಳ ಮೂಲಕ ಅಂಚಿನ ಸಮುದಾಯಗಳಿಗೆ ಧ್ವನಿ ಒದಗಿಸುವಲ್ಲಿ ಡಿಜಿಟಲ್ ವೇದಿಕೆಗಳ ಪಾತ್ರವನ್ನು ಇಲ್ಲಿ ಚರ್ಚಿಸಲಾಗಿದೆ. ವಸಾಹತೋತ್ತರ ಸಾಹಿತ್ಯದ ತಾತ್ವಿಕ ನೆಲೆಗಟ್ಟಿನಲ್ಲಿ, ಅಧಿಕಾರ ಕೇಂದ್ರಗಳನ್ನು ಪ್ರಶ್ನಿಸುವ ಮತ್ತು ದೇಶಿ ಅಸ್ಮಿತೆಯನ್ನು ಮರುಸ್ಥಾಪಿಸುವ ಸಾಧನವಾಗಿ ಸಾಮಾಜಿಕ ಜಾಲತಾಣಗಳ ಕಾರ್ಯವೈಖರಿಯನ್ನು ವಿಶ್ಲೇಷಿಸಲಾಗಿದೆ. ಕನ್ನಡ ಸಾಹಿತ್ಯ ಸಂದರ್ಭದೊಂದಿಗೆ, ಎಡ್ವರ್ಡ್ ಸೈದ್ ಮತ್ತು ಗಾಯತ್ರಿ ಸ್ಪಿವಾಕ್ ಅವರ ಚಿಂತನೆಗಳನ್ನು ಅನ್ವಯಿಸಿ, ಡಿಜಿಟಲ್ ವಸಾಹತುಶಾಹಿ ಮತ್ತು ಅಲ್ಗಾರಿದಮ್ ನಿಯಂತ್ರಣದ ಅಪಾಯಗಳನ್ನೂ ಗುರುತಿಸಲಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಜಾಪ್ರಭುತ್ವೀಕರಣ ಮತ್ತು ತಾಂತ್ರಿಕ ಜಾಗೃತಿಯ ಅಗತ್ಯವನ್ನು ಈ ಅಧ್ಯಯನ ಒತ್ತಿಹೇಳುತ್ತದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಕಮಲ ವೈ.ಸಿ., ಡಿಜಿಟಲ್ ಕ್ರಾಂತಿ ಮತ್ತು ಭಾರತ, ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ.
ರಾಮಚಂದ್ರನ್ ಸಿ. ಎನ್., (2002), ವಸಾಹತೋತ್ತರ ಚಿಂತನೆ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.
ರಾಮಚಂದ್ರನ್ ಸಿ. ಎನ್., (2008), ಸಾಹಿತ್ಯ ವಿಮರ್ಶೆ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.
ಶಿವರುದ್ರಪ್ಪ ಜಿ. ಎಸ್., (2016), ಹೊಸಗನ್ನಡ ಸಾಹಿತ್ಯ ಸಮೀಕ್ಷೆ, ಬೆಂಗಳೂರು: ಸಪ್ನ ಬುಕ್ ಹೌಸ್.
ರಾಘವೇಂದ್ರರಾವ್ ಎಚ್. ಎಸ್. (ಸಂ), (2001), ಶತಮಾನದ ಸಾಹಿತ್ಯ ವಿಮರ್ಶೆ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.
ಶೇಷಗಿರಿ ರಾವ್ ಎಲ್. ಎಸ್., (2016), ಹೊಸಗನ್ನಡ ಸಾಹಿತ್ಯ, ಬೆಂಗಳೂರು: ಸಪ್ನ ಬುಕ್ ಹೌಸ್.