ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸ್ತ್ರೀವಾದಿ ಸಂವೇದನೆಗಳು

Main Article Content

ಸೌಮ್ಯ ಸಿ.

Abstract

“ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಅಂದರೆ ಅಷ್ಟೇ ಸಾಕೆ” ಎನ್ನುವ ಜಿ. ಎಸ್. ಶಿವರುದ್ರಪ್ಪನವರ ಪದ್ಯವನ್ನು ಗಮನಿಸಿದರೆ ಒಂದು ಕುಟುಂಬದಲ್ಲಿ ಸ್ತ್ರೀಯ ಅವಶ್ಯಕತೆ ಏನು? ಸಮಾಜದಲ್ಲಿ ಸ್ತ್ರೀಯ ಪಾತ್ರವೇನು? ಎನ್ನುವುದನ್ನು ತಿಳಿಯಬಹುದಾಗಿದೆ. ತುಂಬಾ ಹಿಂದೆ ಉತ್ತುಂಗದಲ್ಲಿದ್ದ ಸ್ತ್ರೀಯರ ಸ್ಥಾನಮಾನಗಳು ಬರು ಬರುತ್ತಾ ತುಂಬಾ ಶೋಚನೀಯ ಸ್ಥಿತಿಗೆ ತಲುಪಿದವು. ಬಾಲ್ಯ ವಿವಾಹ, ವರದಕ್ಷಣೆ, ಸತಿ ಪದ್ಧತಿ ಮುಂತಾದ ಸಮಸ್ಯೆಗಳಿಂದ ಸ್ತ್ರೀಯರು ಬಳಲಿ ನೊಂದಿದ್ದರು. ಹಲವಾರು ಸಮಾಜ ಸುಧಾರಕರ ಹೋರಾಟದಿಂದ ಸ್ತ್ರೀಯರು ಇಂದು ಸ್ವತಂತ್ರವಾಗಿ ಸಮಾನತೆಯಿಂದ ನೆಮ್ಮದಿ, ಗೌರವ, ಸಂತೋಷದಿಂದ ಬದುಕುತ್ತಿರುವುದನ್ನು ಕಾಣಬಹುದಾಗಿದೆ. ಸ್ತ್ರೀಯರು ಸಮಾಜದಲ್ಲಿ ಎಲ್ಲಾ ಕ್ಷೇತ್ರದಲ್ಲೂ ತಮ್ಮದೇ ಆದ ರೀತಿಯಲ್ಲಿ ಸಾಧನೆಗಳನ್ನು ಮಾಡಿದ್ದಾರೆ. ತಮ್ಮ ಛಾಪನ್ನು ಮೂಡಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಮಹಿಳೆಯರ ಪಾತ್ರವನ್ನು ಗಮನಿಸಿದರೆ ವೇದಗಳ ಕಾಲದಿಂದ ಹಿಡಿದು ಜನಪದ ಸಾಹಿತ್ಯ, ಹಳಗನ್ನಡ ಸಾಹಿತ್ಯ, ವಚನ ಸಾಹಿತ್ಯ, ಕೀರ್ತನ ಸಾಹಿತ್ಯ ಹೀಗೆ ಹಂತ ಹಂತವಾಗಿ ಬೆಳೆದು ಆಧುನಿಕ ಸಾಹಿತ್ಯದವರೆಗೂ ಸ್ತ್ರೀಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದನ್ನು ಕಾಣಬಹುದಾಗಿದೆ. ಕನ್ನಡ ಸಾಹಿತ್ಯದಲ್ಲಿ ಮಹಿಳೆಯರ ಭಾವನೆಗಳು, ಮಹಿಳೆಯರ ಬದುಕಿನ ಸಂಕಷ್ಟಗಳು, ನೋವು ನಲಿವು, ಸುಖ, ಸಂತೋಷ, ಸಮಸ್ಯೆ, ಸವಾಲು ಎಲ್ಲವನ್ನೂ ಅಭಿವ್ಯಕ್ತಪಡಿಸುವ ಸ್ತ್ರೀ ಸಂವೇದನೆಯನ್ನು ಕುರಿತು ಹಲವಾರು ಕೃತಿಗಳು ಹೊರಬಂದಿರುವುದನ್ನು ನಾವು ಗಮನಿಸಬಹುದು. ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ ಎನ್ನುವುದು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದ್ದು, ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಸ್ತ್ರೀ ಸಂವೇದನೆ ಹೇಗೆ ಅಭಿವ್ಯಕ್ತಗೊಂಡಿದೆ ಎಂದು ತಿಳಿಯುವ ಒಂದು ಪ್ರಯತ್ನದ ಫಲವಾಗಿ ಈ ಲೇಖನ ಬರೆಯಲಾಗಿದೆ. ಮಹಿಳೆಯರ ಬದುಕಿನ ಒಳನೋಟವನ್ನು ಅವರದ್ದೇ ದೃಷ್ಟಿಕೋನದಿಂದ ನೋಡುವ ಅವರ ಭಾವನೆಗಳನ್ನು ಸಮಾನ ಮನಸ್ಸಿನಿಂದ ಅರಿತು ವ್ಯಕ್ತಪಡಿಸುವ ಬರಹವೇ ಮಹಿಳಾ ಸಂವೇದನೆಯಾಗಿದೆ. ಈ ರೀತಿ ಸ್ತ್ರೀಯರ ಎಲ್ಲ ರೀತಿಯ ಸಮಸ್ಯೆ, ಶೋಷಣೆ, ನೋವು, ತೊಳಲಾಟಗಳನ್ನು ತಮ್ಮ ಬರಹಗಳಲ್ಲಿ ವ್ಯಕ್ತಪಡಿಸುವ ಮೂಲಕ ಸಮಾಜದಲ್ಲಿ ಮಹಿಳಾಪರ ಕ್ರಾಂತಿಯನ್ನು ಮೂಡಿಸಿದ ಅದೆಷ್ಟೋ ಮಹಿಳಾ ಲೇಖಕಿಯರ ಪ್ರಯತ್ನ ಅಭಿನಂದನಾರ್ಹವಾಗಿದೆ.

Article Details

Section

Research Articles

Author Biography

ಸೌಮ್ಯ ಸಿ.

ಸಹಾಯಕ ಪ್ರಾಧ್ಯಾಪಕರು, ಶ್ರೀ ಕೆ. ಎಮ್. ಮಾಮನಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಸವದತ್ತಿ.

References