ಕೆ. ಷರೀಫಾರವರ ಕಾವ್ಯದಲ್ಲಿ ಬಂಡಾಯದ ನೆಲೆಗಳು ಮತ್ತು ಸ್ತ್ರೀ ಅಸ್ಮಿತೆಯ ಶೋಧ

Main Article Content

ತ್ಯಾಗರಾಜು ಹೆಚ್‍.ವಿ.

Abstract

ಎಪ್ಪತ್ತು-ಎಂಬತ್ತರ ದಶಕದ ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಪ್ರಮುಖ ಕವಯಿತ್ರಿ ಕೆ. ಷರೀಫಾ ಅವರ ಕಾವ್ಯಗಳಲ್ಲಿನ ಬಂಡಾಯದ ನೆಲೆಗಳು ಮತ್ತು ಸ್ತ್ರೀ ಅಸ್ಮಿತೆಯ ಹುಡುಕಾಟವನ್ನು ಈ ಲೇಖನವು ವಿಶ್ಲೇಷಿಸುತ್ತದೆ. ಮುಸ್ಲಿಂ ಸಂವೇದನೆಯ ಹಿನ್ನೆಲೆಯಿಂದ ಬಂದರೂ, ಸಮಸ್ತ ಸ್ತ್ರೀ ಸಮುದಾಯದ ನೋವು, ಶೋಷಣೆ ಮತ್ತು ದಮನಿತ ಬದುಕನ್ನು ಇವರ ಕವಿತೆಗಳು ಒಕ್ಕೊರಲಿನಿಂದ ಪ್ರಶ್ನಿಸುತ್ತವೆ. ಪಿತೃಪ್ರಧಾನ ವ್ಯವಸ್ಥೆಯು ನಿರ್ಮಿಸಿದ ಚರಿತ್ರೆ, ಧಾರ್ಮಿಕ ಕಟ್ಟುಪಾಡುಗಳು ಮತ್ತು ಸಾಮಾಜಿಕ ಅಸಮಾನತೆಗಳ ವಿರುದ್ಧ ಸಿಡಿದೇಳುವ ಇವರ ಕಾವ್ಯವು, ಮೌನವನ್ನು ಮುರಿದು ಹಕ್ಕೊತ್ತಾಯ ಮಾಡುವ ಪ್ರಬಲ ಅಭಿವ್ಯಕ್ತಿಯಾಗಿದೆ. ವರದಕ್ಷಿಣೆ, ಸತಿ ಪದ್ಧತಿಯಂತಹ ಅನಿಷ್ಟಗಳ ವಿರುದ್ಧದ ಆಕ್ರೋಶ ಮತ್ತು ಲಿಂಗ ಸಮಾನತೆಯ ಆಶಯಗಳು ಇವರ ಬರಹಗಳ ಮುಖ್ಯ ತಿರುಳಾಗಿರುವುದನ್ನು ಇಲ್ಲಿ ಚರ್ಚಿಸಲಾಗಿದೆ.

Article Details

Section

Research Articles

Author Biography

ತ್ಯಾಗರಾಜು ಹೆಚ್‍.ವಿ.

ಉಪನ್ಯಾಸಕರು, ಸೇಂಟ್‍ ಫ್ರಾನ್ಸಿಸ್ ಕಾಲೇಜು, ಬೆಂಗಳೂರು.

References

ನುಡಿಯಾಟ, ಪುಟ-118

ನುಡಿಯಾಟ, ಪುಟ-119

ಬುರ್ಖಾ ಪ್ಯಾರಿಡೈಸ್-37

ಬಿಡುಗಡೆಯ ಕವನಗಳು-16

ಪಾಂಚಾಲಿ, ಪುಟ-24

ಪಾಂಚಾಲಿ, ಪುಟ-45

ಪಾಂಚಾಲಿ, ಪುಟ-21

ಬುರ್ಖಾ ಪ್ಯಾರಿಡೈಸ್, ಪುಟ-38

ಕಣ್ಣ ಹನಿಗಳ ಕಾಣಿಕೆ, ಪುಟ-15

ಪಾಂಚಾಲಿ, ಪುಟ-4

ನೂರೇನ್‌ಳ ಅಂತರಂಗ, ಪುಟ-3

ನೂರೇನ್‌ಳ ಅಂತರಂಗ, ಪುಟ-18

ನುಡಿಯಾಟ, ಪುಟ-119

ಬಿಡುಗಡೆಯ ಕವನಗಳು, ಪುಟ-18

ನೂರೇನ್‌ಳ ಅಂತರಂಗ, ಪುಟ-35

ಕಣ್ಣ ಹನಿಗಳ ಕಾಣಿಕೆ, ಪುಟ-4

ಮಮ್ತಾಜ್ ಮಹಲ್, ಪುಟ-33

ಮಮ್ತಾಜ್ ಮಹಲ್, ಪುಟ-45

ಬಿಡುಗಡೆಯ ಕವನಗಳು, ಪುಟ-17

ಬಿಡುಗಡೆಯ ಕವನಗಳು, ಪುಟ-33

ಬಿಡುಗಡೆಯ ಕವಿತೆಗಳು, ಪುಟ-38

ಪಾಂಚಾಲಿ, ಪುಟ-7

ನೂರೇನ್‌ಳ ಅಂತರಂಗ, ಪುಟ-6