ಗೋವಿಂದ ಪೈ ಅವರ ಖಂಡಕಾವ್ಯಗಳು: ಮಹಾತ್ಮರ ಕಡೆಯ ದಿನ
Main Article Content
Abstract
ಹೊಸಗನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಖಂಡಕಾವ್ಯಕ್ಕೆ ವಿಶಿಷ್ಟವಾದ ಸ್ಥಾನವಿದೆ. ಪಾಶ್ಚಿಮಾತ್ಯರಿಂದ ಪರಿಚಯವಾದ ಈ ಸಾಹಿತ್ಯ ಪ್ರಕಾರವನ್ನು ಕನ್ನಡಕ್ಕೆ ರಾಷ್ಟ್ರಕವಿ ಗೋವಿಂದ ಪೈಯವರು ಪರಿಚಯಿಸಿದರು. ಮಹಾಕಾವ್ಯಕ್ಕಿಂತ ತುಸು ಭಿನ್ನವಾದ ಆಯಾಮದಲ್ಲಿ ಕಂಡುಬರುವ ಈ ಪ್ರಕಾರವು ಅನಂತರ ಬಂದ ಕವಿಗಳಿಂದ ವಿಸ್ತಾರವಾಗಿ ಬೆಳೆಯಿತು. ಮನುಷ್ಯ ಬದುಕಿನ ಅರ್ಥವಂತಿಕೆ, ಸಹಜತೆ, ಸಾಮಾಜಿಕ ಬದ್ಧತೆಗಳ ಜೊತೆಗೆ ಹಿಂದಿನ ವೈದಿಕ ಪರಂಪರೆಯ ಮಹಾಕಾವ್ಯಗಳಿಗಿಂತ ಭಿನ್ನವಾಗಿ ಗೋವಿಂದ ಪೈಯವರು ಖಂಡಕಾವ್ಯಗಳನ್ನು ರಚಿಸಿದ್ದಾರೆ. ಬುದ್ಧ, ಯೇಸು, ಕೃಷ್ಣ ಹಾಗೂ ಗಾಂಧೀಜಿಯವರಂತಹ ಮಹಾನ್ ದಾರ್ಶನಿಕರ ಅಂತ್ಯದ ದಿನಗಳನ್ನು ಅರ್ಥಪೂರ್ಣವಾಗಿ, ತಲಸ್ಪರ್ಶಿಯಾಗಿ ಚಿತ್ರಿಸುವ ಈ ಖಂಡಕಾವ್ಯಗಳು ಮನುಷ್ಯ ಬದುಕಿನ ಸಹಜತೆಯನ್ನು ಅನಾವರಣಗೊಳಿಸುತ್ತವೆ. ಪ್ರಸ್ತುತ ಜಾತಿ, ಮತ, ಕುಲ, ಧರ್ಮ, ವರ್ಣಗಳಿಂದ ಸಂಚಯಶಕ್ತಿಗಳು ಇಡೀ ವ್ಯವಸ್ಥೆಯನ್ನು ಬಾಧಿಸುತ್ತಿರುವ ಕಾಲಘಟ್ಟದಲ್ಲಿ ಮನುಷ್ಯನ ನ್ಯಾಯ ಸಮ್ಮತವಾದ ಬದುಕಿಗಾಗಿ ಸ್ಪಂದಿಸುವ ನಿಟ್ಟಿನಲ್ಲಿ ನಾವು ಇವರ ಸಾಹಿತ್ಯವನ್ನು ಅರ್ಥೈಸಬಹುದು.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಮಂಜೇಶ್ವರ ಗೋವಿಂದ ಪೈ, (1988), ಗೊಲ್ಗೊಥಾ ಮತ್ತು ವೈಶಾಖಿ, ಮೈಸೂರು: ಕಾವ್ಯಾಲಯ ಪ್ರಕಾಶನ.
ಕಯ್ಯಾರ ಕಿಞ್ಞಣ್ಣ ರೈ, (1983), ಗೋವಿಂದ ಪೈ ಸ್ಮೃತಿ-ಕೃತಿ, ಮಂಜೇಶ್ವರ: ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸಮಿತಿ.
ರಾ.ಗೌ., (1991), ಸಮಾಕೀರ್ಣ, ಬೆಂಗಳೂರು: ಚಿತ್ರಾಕೂಟ ಪ್ರಕಾಶನ.
ರಾಮದೇವ ಶಣೈ ಆರ್., (1990), ದೀವಿಗೆ, ಕುಂದಾಪುರ: ಎಂ. ಗೋವಿಂದ ಪೈ ಸ್ಮಾರಕ ನಿಧಿ ಪ್ರಕಾಶನ.
ವೆಂಕಟಸುಬ್ಬಯ್ಯ ಜಿ., (2007), ಗತಿಪ್ರಜ್ಞೆ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಶಂಕರ ಮೊಕಾಶಿ ಪುಣೆಕರ, (1995), ಅಪೂರ್ಣ ವರ್ತಮಾನ ಕಾಲ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.