ಶೂನ್ಯ ಸಂಪಾದನೆಯ ಮೂಲ ಮತ್ತು ಸ್ವರೂಪ

Main Article Content

ಎಲ್. ಬಸವರಾಜು

Abstract

ವಚನ ಸಾಹಿತ್ಯ ಮತ್ತು ಗ್ರಂಥಸಂಪಾದನಾ ಕ್ಷೇತ್ರಕ್ಕೆ ಎಲ್. ಬಸವರಾಜು ಅವರ ಕೊಡುಗೆ ಅಪಾರವಾಗಿದೆ. ಮತಾಚಾರ್ಯರ ಪ್ರಭಾವಳಿಯಲ್ಲಿ ಮುಚ್ಚಿಹೋಗಿದ್ದ ಶೂನ್ಯಸಂಪಾದನೆಯ ಪ್ರಥಮ ಆವೃತ್ತಿಯನ್ನು (ಶಿವಗಣಪ್ರಸಾದಿ ಮಹಾದೇವಯ್ಯನವರ ಕೃತಿ) ಬಯಲಿಗೆ ತರುವ ಮೂಲಕ ಇವರು ಕನ್ನಡ ಸಂಶೋಧನೆಗೆ ಹೊಸ ಆಯಾಮವನ್ನು ನೀಡಿದ್ದಾರೆ. ಹದಿನಾಲ್ಕನೆಯ ಶತಮಾನದಲ್ಲಿ ರಚಿತವಾದ ಮೂಲ ಶೂನ್ಯಸಂಪಾದನೆಯು ನಂತರದ ದಿನಗಳಲ್ಲಿ ಹಲಗೆಯಾರ್ಯ, ಗುಮ್ಮಳಾಪುರದ ಸಿದ್ದಲಿಂಗ ಮತ್ತು ಗೂಳೂರು ಸಿದ್ಧವೀರರಿಂದ ಹೇಗೆ ಪರಿಷ್ಕರಣಗೊಂಡಿತು ಎಂಬುದನ್ನು ಸಂಖ್ಯಾಶಾಸ್ತ್ರೀಯವಾಗಿ ವಿಶ್ಲೇಷಿಸಲಾಗಿದೆ. ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ನೆಲೆಯಲ್ಲಿ ಗ್ರಂಥಸಂಪಾದನೆಯನ್ನು ನಡೆಸಿದ ಬಸವರಾಜು ಅವರ ವೈಧಾನಿಕತೆ ಮತ್ತು ಪ್ರಯೋಗಶೀಲತೆಯನ್ನು ಇಲ್ಲಿ ಗುರುತಿಸಲಾಗಿದೆ.

Article Details

Section

Trodden Path

Author Biography

ಎಲ್. ಬಸವರಾಜು

ಕನ್ನಡ ಸಾಹಿತ್ಯ ಕ್ಷೇತ್ರದ ಹಿರಿಯ ವಿದ್ವಾಂಸರು

References