ದಲಿತ ಕಥಾ ಸಾಹಿತ್ಯ ಕ್ಷೇತ್ರಕ್ಕೆ ಡಾ. ಎಚ್. ಟಿ. ಪೋತೆ ಅವರ ಕೊಡುಗೆ
Main Article Content
Abstract
ಕನ್ನಡ ದಲಿತ ಕಥಾ ಸಾಹಿತ್ಯ ಕ್ಷೇತ್ರಕ್ಕೆ ಡಾ. ಎಚ್. ಟಿ. ಪೋತೆ ಅವರ ಕೊಡುಗೆ ಅಪಾರವಾಗಿದೆ. ಶೋಷಣೆ, ಅಸ್ಪೃಶ್ಯತೆ, ಬಡತನ ಹಾಗೂ ಜಾತೀಯತೆಯಂತಹ ಸುಡುವ ವಾಸ್ತವಗಳನ್ನು ತಮ್ಮ ಕಥೆಗಳ ಮೂಲಕ ಅವರು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ‘ಚಮ್ಮಾವುಗೆ’, ‘ಬೆತ್ತಲಾದ ಚಂದ್ರ’, ಮತ್ತು ‘ಕರುಳರಿಯುವ ಹೊತ್ತು’ ಮುಂತಾದ ಕೃತಿಗಳಲ್ಲಿ ಅವರ ಸ್ವಂತ ಜೀವನಾನುಭವಗಳು ತಳಸಮುದಾಯದ ನೋವು-ನಲಿವುಗಳಾಗಿ ಅನಾವರಣಗೊಂಡಿವೆ. ಮೇಲ್ವರ್ಗದ ದೌರ್ಜನ್ಯದ ವಿರುದ್ಧ ಸಿಡಿದೆದ್ದೇಳಲು ಹಾಗೂ ಶಿಕ್ಷಣದ ಮೂಲಕ ಜಾಗೃತರಾಗಿ ಜಾತಿ ವ್ಯವಸ್ಥೆಯಿಂದ ಬಿಡುಗಡೆ ಹೊಂದಲು ಈ ಕಥೆಗಳು ಪ್ರೇರೇಪಿಸುತ್ತವೆ. ತಂದೆ-ತಾಯಿಯರ ತ್ಯಾಗ, ಜೀತಪದ್ಧತಿಯ ಕ್ರೌರ್ಯ ಮತ್ತು ಬಾಡಿಗೆ ಮನೆ ಹುಡುಕುವಾಗಿನ ಜಾತಿ ನಿಂದನೆಯಂತಹ ಸಾಮಾಜಿಕ ಸತ್ಯಾಂಶಗಳನ್ನು ಅವರ ಬರಹಗಳು ಸೂಕ್ಷ್ಮವಾಗಿ ವಿಶ್ಲೇಷಿಸುತ್ತವೆ. ದಲಿತರ ಬದುಕು ಪರಿವರ್ತನೆಯಾಗಬೇಕು ಮತ್ತು ಶೈಕ್ಷಣಿಕ ಜಾಗೃತಿ ಮೂಡಬೇಕು ಎಂಬ ಆಶಯವನ್ನು ಅವರ ಸಾಹಿತ್ಯವು ಬಲವಾಗಿ ಪ್ರತಿಪಾದಿಸುತ್ತದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ನಾಗಾಬಾಯಿ ಬುಳ್ಳಾ (ಸಂ.), (2014), ಶೋಧಸಿರಿ, ಕಲಬುರ್ಗಿ: ಕನ್ನಡ ಸಂಶೋಧನ ಸಂಘ, ಕನ್ನಡ ಅಧ್ಯಯನ ಸಂಸ್ಥೆ, ಗುಲ್ಬರ್ಗಾ ವಿಶ್ವವಿದ್ಯಾಲಯ.
ಪೋತೆ ಎಚ್. ಟಿ., (2013), ಚಮ್ಮಾವುಗೆ ಕಥಾ ಸಂಕಲನ, ಕಲಬುರ್ಗಿ: ಕುಟುಂಬ ಪ್ರಕಾಶನ.
ಪೋತೆ ಎಚ್. ಟಿ., (2016), ಕರುಳರಿಯುವ ಹೊತ್ತು ಕಥಾ ಸಂಕಲನ, ಬೆಂಗಳೂರು: ಸ್ವಪ್ನ ಬುಕ್ ಹೌಸ್.