ನಾಗರಾಳ ಮನೆತನದ ಕೃಷಿ ತಾತ್ವಿಕತೆ, ಪ್ರಾಯೋಗಿಕತೆಯ ಅನುಸಂಧಾನ

Main Article Content

ರವಿ ಹಾದಿಮನಿ

Abstract

ನಾಗರಾಳ ಮನೆತನವು ಶ್ರೀ ಘನಮಠ ಶಿವಯೋಗಿಗಳ ‘ಕೃಷಿಜ್ಞಾನ ಪ್ರದೀಪಿಕೆ’ಯ ತಾತ್ವಿಕ ಬೋಧನೆಗಳನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಂಡು, ಸತತ ಮೂರು ತಲೆಮಾರುಗಳಿಂದ ಒಣಬೇಸಾಯದಲ್ಲಿ ಕ್ರಾಂತಿಕಾರಕ ಸಾಧನೆಗೈದಿದೆ. ಸಂಗನಬಸಪ್ಪನವರು ಹಸ್ತಪ್ರತಿಯಾಗಿ ತಂದ ಈ ಅಮೂಲ್ಯ ಜ್ಞಾನವು, ಬರದ ವಿರುದ್ಧ ಸಮರ ಸಾರುವ ‘ಗುಂಡಾವರ್ತಿ’ಯಂತಹ ದೇಶೀ ಜಲ-ಮಣ್ಣು ಸಂರಕ್ಷಣಾ ತಂತ್ರಗಳ ಮೂಲಕ ಇಡೀ ರೈತ ಸಮುದಾಯಕ್ಕೆ ದಾರಿದೀಪವಾಗಿದೆ. ಎರಡನೇ ತಲೆಮಾರಿನ ಶಂಕರಣ್ಣ ನಾಗರಾಳರು ಕೃಷಿ ವಚನಗಳ ರಚನೆಯ ಮೂಲಕ ಅನಕ್ಷರಸ್ಥ ರೈತರಲ್ಲಿ ಬೌದ್ಧಿಕ ಜಾಗೃತಿ ಮೂಡಿಸಿದರೆ, ಡಾ. ಮಲ್ಲಣ್ಣ ನಾಗರಾಳರು ಆಧುನಿಕ ವಿಜ್ಞಾನ, ಪರಿಸರ ಕಾಳಜಿ ಹಾಗೂ ಜಲಸಾಕ್ಷರತೆಯೊಂದಿಗೆ ಈ ಪರಂಪರೆಗೆ ಸಾಂಸ್ಥಿಕ ಮಾನ್ಯತೆ ತಂದುಕೊಟ್ಟರು. ಕೃಷಿಯನ್ನು ಕೇವಲ ಆರ್ಥಿಕ ಲಾಭದ ವೃತ್ತಿಯಾಗಿ ನೋಡದೆ, ಶರಣರ ಕಾಯಕ ಮತ್ತು ದಾಸೋಹ ತತ್ವದಂತೆ ಮುನ್ನಡೆಸಿದ ಈ ಯಶೋಗಾಥೆಯು ಸ್ವಾವಲಂಬನೆ ಮತ್ತು ಸಮರ್ಥ ಬರ ನಿರ್ವಹಣೆಯ ನೈಜ ದ್ಯೋತಕವಾಗಿದೆ. ಕೃಷಿ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಇಂದಿನ ದಿನಮಾನಗಳಿಗೆ ಈ ಮಣ್ಣಿನ ಪರಂಪರೆ ಅತ್ಯಂತ ಪ್ರಸ್ತುತವಾಗಿದೆ.

Article Details

Section

Research Articles

Author Biography

ರವಿ ಹಾದಿಮನಿ

ಸಂಶೋಧನಾ ವಿದ್ಯಾರ್ಥಿ, ಎಂ.ಎಂ. ಕಲಬುರ್ಗಿ ಸಂಶೋಧನಾ ಕೇಂದ್ರ, ಜಗದ್ಗುರು ತೋಂಟದಾರ್ಯ ಮಠ, ಗದಗ.

How to Cite

ರವಿ ಹಾದಿಮನಿ. (2026). ನಾಗರಾಳ ಮನೆತನದ ಕೃಷಿ ತಾತ್ವಿಕತೆ, ಪ್ರಾಯೋಗಿಕತೆಯ ಅನುಸಂಧಾನ. ಅಕ್ಷರಸೂರ್ಯ (AKSHARASURYA), 16(06), 95 to 101. https://aksharasurya.com/index.php/latest/article/view/2227

References

ಮಲ್ಲಣ್ಣ ಶಂಕರಣ್ಣ ನಾಗರಾಳ, (2010), ಒಣ ಬೇಸಾಯ ಪದ್ಧತಿಗಳು, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ಶ್ರೀಪಡ್ರೆ, (2004), ಶರಣು ಬನ್ನಿ ಜಲಕಾಯಕಕೆ, ಮೈಸೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್.

ಕೊನೆಸಾಗರ ಎಸ್. ಕೆ., (2006), ಅಂಗೈ ಅಗಲ ಭೂಮಿಯಲ್ಲಿ ಭರ್ಜರಿ ಇಳುವರಿ ಪಡೆದ ಮಲ್ಲಣ್ಣ (ಪ್ರಜಾವಾಣಿ ಪತ್ರಿಕೆ ಲೇಖನ), ಹುಬ್ಬಳ್ಳಿ: ಪ್ರಜಾವಾಣಿ ಪತ್ರಿಕಾ ಪ್ರಕಾಶನ.

ಬಸವರಾಜ ತೆಗ್ಗಿನಮಠ, (2001), ಶಂಕರಣ್ಣ ನಾಗರಾಳ (ವೀರಶೈವ ಪುಣ್ಯಪುರುಷ ಸಾಹಿತ್ಯರತ್ನಮಾಲೆ-168), ಗದಗ: ವೀರಶೈವ ಅಧ್ಯಯನ ಸಂಸ್ಥೆ, ತೋಂಟದಾರ್ಯ ಸಂಸ್ಥಾನಮಠ.

ಶ್ರೀಪಡ್ರೆ, (2008), ಕರ್ನಾಟಕದ ಬರನಿರೋಧಕ ಜಾಣ್ಮೆಗಳು (ಮಣ್ಣು ಮತ್ತು ನೀರು), ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.

ಮಲ್ಲಣ್ಣ ನಾಗರಾಳ ಮತ್ತು ಡಾ. ವಿರೂಪಾಕ್ಷ ಬಡಿಗೇರ, (2018), ಘನಮಠ ಶಿವಯೋಗಿ ವಿರಚಿತ ಕೃಷಿಜ್ಞಾನ ಪ್ರದೀಪಿಕೆ – ಒಂದು ಸಮೀಕ್ಷೆ, ಧಾರವಾಡ: ಕೃಷಿ ಕಾಮಧೇನು ಪ್ರಕಾಶನ.

ಮಲ್ಲಣ್ಣ ನಾಗರಾಳ, (2019), ಕೃಷಿನಿಧಿ ಘನಮಠದಪ್ಪ, ಸಂತೆಕೆಲ್ಲೂರ: ಘನಮಠೇಶ್ವರ ಮಠ.

ಮಾಗಿ ಬಿ. ಎಂ., ನಾಗರಾಳ ಸಂಗನಬಸಪ್ಪನವರು (ವೀರಶೈವ ಪುಣ್ಯಪುರುಷರ ಮಾಲೆ), ಗದಗ: ವೀರಶೈವ ಅಧ್ಯಯನ ಸಂಸ್ಥೆ, ತೋಂಟದಾರ್ಯ ಸಂಸ್ಥಾನಮಠ.

Most read articles by the same author(s)