ನುಡಿಗಳ ಅಳಿವು-ಕೆಲವು ತಾತ್ತ್ವಿಕ ವಿಚಾರಗಳು

Main Article Content

ದೇವನೂರು ನಂದೀಶ

Abstract

ಕಳೆದೆರಡು ವರ್ಷಗಳ ಹಿಂದಿನಿಂದಲೂ ಭಾಷೆಯ ಕುರಿತಾಗಿ ಕೆಲ ವಿಚಾರಗಳು ಪ್ರಶ್ನೆಯ ರೂಪದಲ್ಲಿ ಕಂಡುಬಂದದ್ದರಿಂದಲೂ ಮತ್ತು ಇದಕ್ಕೆ ಉತ್ತರವನ್ನು ಕಂಡುಕೊಳ್ಳುವ ನೆಪದಲ್ಲಿ ನಡೆಸಿದ ಚಿಂತನೆಯಾಗಿಯೂ ಇಲ್ಲಿನ ಕೆಲವು ಟಿಪ್ಪಣಿ ರೂಪದ ಬರೆವಣಿಗೆಯು ಬಂದಿದೆ. ಇದು ಈಗಾಗಲೆ ಪ್ರಸ್ತುತ ಲೇಖಕನಿಗೆ ಅಭಿಜಾತ ಸಾಹಿತ್ಯ ಪರಂಪರೆಯನ್ನು ಒಳಗೊಂಡ ಕನ್ನಡದಂತಹ ಪುಟ್ಟ ಭಾಷೆಯೊಂದರಲ್ಲಿನ ಪಾಠ-ಪಠ್ಯಗಳ ಓದುಗಳಲ್ಲಿ ಅರಿವಿಗೆ ಬಂದ ಸಂಗತಿ. ಹಾಗಾಗಿ ದಿನನಿತ್ಯದ ಸಂವಹನ-ಸಂಪರ್ಕದಲ್ಲಿ ಈ ಭಾಷೆಯೊಂದಿಗೆ ವ್ಯವಹರಿಸುವಲ್ಲಿ ಮತ್ತು ಅದರ ಪರಿಣಾಮವಾಗಿ ಭಾಷೆಯ ಬಗೆಗಿನ ಚಿಂತನೆಯು ಇಲ್ಲಿ ಕಂಡುಬಂದಿರುವುದು. ಹಾಗೆ ಮಂಡಿಸಿರುವ ಇಲ್ಲಿಯ ಚಿಂತನೆಯ ಒಳಹಂದರವನ್ನು ಪ್ರಸ್ತುತ ಬರಹವು ಸಾದರಪಡಿಸುತ್ತದೆಂಬ ಬಲವಾದ ನಂಬಿಕೆಯು ಇಲ್ಲಿಯದು. ಹಾಗಾಗಿ ಇಲ್ಲಿನ ಚರ್ಚೆಯ ಹಿಂಬದಿಯಲ್ಲಿ ಇವು ಕಾಣಿಸಿಕೊಂಡಿವೆ. ಜೊತೆಗೆ ಭಾಷೆಯನ್ನು ಕುರಿತಂತೆ ಇಲ್ಲಿನ ತಾತ್ತ್ವಿಕತೆಯು ಅದಕ್ಕೆ ಅನ್ವಯವಾಗುವುದು ಮಾತ್ರವಲ್ಲದೆ ಹಾಗೆ ಮಾನವ ಜಗತ್ತಿನಲ್ಲಿರುವ ಇನ್ನಿತರ ಹಲವು ಪುಟ್ಟ ಭಾಷೆಗಳನ್ನೂ ಗಮನದಲ್ಲಿರಿಸಿಕೊಂಡು ಇಲ್ಲಿನ ತಾತ್ತ್ವಿಕತೆಯನ್ನು ರೂಪಣೆಗೊಳಿಸಲಾಗಿದೆ. ಅದರಂತೆ ಭಾಷೆಗಳ ಅಳಿವಿನ ಬಗೆಗೆ ಇರುವ ತಿಳಿವಳಿಕೆಯನ್ನು ಕುರಿತ ಚಿಂತನೆಯು ಇಲ್ಲಿರುವುದು. ಹೀಗಾಗಿ ನುಡಿಗಳ ಅಳಿವಿನ ಬಗೆಗೆ ಇರುವ ಸಾಮಾನ್ಯ ತಿಳಿವಿನೊಂದಿಗೆ ಮಂಡಿಸಲಾಗಿರುವ ಇಲ್ಲಿನ ಕೆಲ ತಾತ್ತ್ವಿಕ ವಿಚಾರಗಳನ್ನು ಈ ಮುಂದಿನ ಚರ್ಚೆಯಲ್ಲಿ ನೋಡಬಹುದು.

Article Details

Section

Research Articles

Author Biography

ದೇವನೂರು ನಂದೀಶ

ಯು.ಜಿ.ಸಿ.-ಸೀನಿಯರ್‌ ರಿಸೆರ್ಚ್‌ ಫೆಲೋ, ಕನ್ನಡ ವಿಭಾಗ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಡಗಂಚಿ, ಕಲಬುರಗಿ, ಕರ್ನಾಟಕ.

How to Cite

ದೇವನೂರು ನಂದೀಶ. (2026). ನುಡಿಗಳ ಅಳಿವು-ಕೆಲವು ತಾತ್ತ್ವಿಕ ವಿಚಾರಗಳು. ಅಕ್ಷರಸೂರ್ಯ (AKSHARASURYA), 17(04), 59 to 69. https://aksharasurya.com/index.php/latest/article/view/2189

References