ಕುವೆಂಪು ಬೇಂದ್ರೆ: ಆಧ್ಯಾತ್ಮ ಚಿಂತನೆಗಳ ಒಳಹೊರಗು
Main Article Content
Abstract
ಕನ್ನಡ ಸಾಹಿತ್ಯದ ದಿಗ್ಗಜರಾದ ಕುವೆಂಪು ಮತ್ತು ದ. ರಾ. ಬೇಂದ್ರೆಯವರ ಸಾಹಿತ್ಯದಲ್ಲಿನ ಆಧ್ಯಾತ್ಮಿಕ ದರ್ಶನವನ್ನು ಈ ವಿಶ್ಲೇಷಣೆ ಪರಿಶೀಲಿಸುತ್ತದೆ. ಕುವೆಂಪುರವರ ‘ಜಲಗಾರ’, ‘ಯಮನ ಸೋಲು’ ಮತ್ತು ‘ಮಹಾರಾತ್ರಿ’ ನಾಟಕಗಳಲ್ಲಿನ ಅಧ್ಯಾತ್ಮವು ಪ್ರಕೃತಿ ಪ್ರೇಮ, ಮಾನವತಾವಾದ ಹಾಗೂ ಪ್ರೇಮದ ಶಕ್ತಿಯ ಮೂಲಕ ವ್ಯಕ್ತವಾಗಿದೆ. ಮತ್ತೊಂದೆಡೆ, ಬೇಂದ್ರೆಯವರ ‘ನಾಕುತಂತಿ’ ಮತ್ತು ‘ಹಕ್ಕಿ ಹಾರುತಿದೆ’ ಕವಿತೆಗಳಲ್ಲಿನ ತಾತ್ವಿಕತೆ ಹಾಗೂ ಕಾಲದ ಚಲನಶೀಲತೆಯು ವೈದಿಕ ಮತ್ತು ಅರವಿಂದರ ದರ್ಶನಗಳ ಹಿನ್ನೆಲೆಯಲ್ಲಿ ವಿವರಿಸಲಾಗಿದೆ. ಇಬ್ಬರು ಕವಿಗಳೂ ತಮ್ಮ ಕೃತಿಗಳ ಮೂಲಕ ಆಧ್ಯಾತ್ಮಿಕತೆಯನ್ನು ಕೇವಲ ಧಾರ್ಮಿಕ ಚೌಕಟ್ಟಿನಲ್ಲಿ ಬಂಧಿಸದೆ, ಅದನ್ನು ಬದುಕಿನ ಸಮಗ್ರ ಚೇತನ ಹಾಗೂ ದಾರ್ಶನಿಕ ನೆಲೆಯಲ್ಲಿ ಪ್ರತಿಪಾದಿಸಿರುವುದನ್ನು ಅವಲೋಕಿಸುವುದು ಈ ಲೇಖನದ ಮುಖ್ಯ ಆಶಯವಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕುವೆಂಪು, (2003), ಜಲಗಾರ, ಮೈಸೂರು: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ.
ಕುವೆಂಪು, (2003), ಯಮನಸೋಲು, ಮೈಸೂರು: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ.
ಕುವೆಂಪು, (2003), ಮಹಾರಾತ್ರಿ, ಮೈಸೂರು: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ.
ಬೇಂದ್ರೆ ದ.ರಾ., (1964), ನಾಕುತಂತಿ, ಧಾರವಾಡ: ಸಮಾಜ ಪುಸ್ತಕಾಲಯ.
ಬೇಂದ್ರೆ ದ.ರಾ., (1932), ಹಕ್ಕಿಹಾರುತಿದೆ ನೋಡಿದಿರಾ?, ಧಾರವಾಡ: ಮನೋಹರ ಗ್ರಂಥಮಾಲೆ.
ನರಹಳ್ಳಿ ಬಾಲಸುಬ್ರಮಣ್ಯ, (2004), ಬಾ ಕುವೆಂಪು ದರ್ಶನಕೆ, ಬೆಂಗಳೂರು: ಅಭಿನವ ಪ್ರಕಾಶನ.
ವಾಮನ ಬೇಂದ್ರೆ, (1974), ಸಾಹಿತ್ಯದ ವಿರಾಟ ಸ್ವರೂಪ, ಧಾರವಾಡ: ಸಮಾಜ ಪುಸ್ತಕಾಲಯ.